ಚೆಂಡು ಹೂ ನಾಶಪಡಿಸಿದ ಕೃಷಿ ಪದವೀಧರ
ರಾಣಿಬೆನ್ನೂರ ತಾಲೂಕಿನ ಮಾಳನಾಯಕನಹಳ್ಳಿ ರೈತನ ದುಸ್ಥಿತಿ
Team Udayavani, Jun 7, 2021, 8:55 PM IST
ರಾಣಿಬೆನ್ನೂರ: ಲಾಕ್ಡೌನ್ನಿಂದ ಬೆಳೆದ ಹೂ ಮಾರಾಟ ಮಾಡಲಾಗದೇ ಅಕ್ಷರಶಃ ಕಂಗಾಲಾದ ಕೃಷಿ ಪದವೀಧರನೊಬ್ಬ ತಮ್ಮ 2 ಎಕರೆ ಜಮೀನಿನಲ್ಲಿ ಬೆಳೆದ ಚೆಂಡು ಹೂವಿನ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ ಘಟನೆ ತಾಲೂಕಿನ ಮಾಳನಾಯಕನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಕೃಷಿ ಪದವೀಧರ ರಾಮಚಂದ್ರ ಕೃಷ್ಣಪ್ಪ ರಡ್ಡೇರ ಬೆಳೆ ನಾಶಪಡಿಸಿದ ಹೂ ಬೆಳೆಗಾರ. ಕೃಷಿ ಪದವೀಧರ (ಬಿಎಸ್ಸಿ ಅಗ್ರಿ) ರಾಮಚಂದ್ರ ರಡ್ಡೇರ ತಮ್ಮ 40 ಎಕರೆ ಜಮೀನಿನಲ್ಲಿ ಯೋಜನೆ ಪ್ರಕಾರ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ನಿರೀಕ್ಷೆಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿ 2 ಎಕರೆ ಜಮೀನಿನಲ್ಲಿ ಚೆಂಡು ಹೂ ಬೆಳೆದಿದ್ದ. ಇದಕ್ಕಾಗಿ ಸುಮಾರು 2.5 ಲಕ್ಷ ರೂ. ಖರ್ಚು ಮಾಡಿದ್ದರು. ಬೆಳೆ ಕೂಡ ಹುಲುಸಾಗಿ ಬೆಳೆದಿತ್ತು. ಆದರೆ ಲಾಕ್ಡೌನ್ ತಮ್ಮೆಲ್ಲ ಯೋಜಾನಾಬದ್ಧ ಕಾಯಕಕ್ಕೆ ಬರೆ ಎಳೆದಿದೆ ಎನ್ನುತ್ತಾರೆ ರಾಮಚಂದ್ರ.
ಬೆಳೆದ ಹೂಗಳನ್ನು ಬಾಂಬೆಗೆ ಮಾಡಿ ಸುಮಾರು 50 ಲಕ್ಷ ರೂ. ಲಾಭ ನಿರೀಕ್ಷೆಯಲ್ಲಿದ್ದರು. ಆದರೆ ಲಾಕ್ಡೌನ್ನಿಂದ ಬೆಳೆದ ಹೂ ಮಾರಾಟ ಮಾಡಲಾಗದೇ ಹಾಕಿದ ಬಂಡವಾಳವೂ ಬಾರದೇ ಕಂಗಾಲಾದ ರೈತ ಟ್ರ್ಯಾಕ್ಟರ್ ಮೂಲಕ ಬೆಳೆ ನಾಶಪಡಿಸಿದ್ದಾರೆ.
ಸ್ಥಳೀಯ ಮಾರುಕಟ್ಟೆಗಳಲ್ಲಿ ಕೆ.ಜಿಗೆ 50ರಿಂದ 150 ಬಿಡಿ ಹೂ ಮಾರಾಟವಾಗುತ್ತಿತ್ತು. ಜಾತ್ರೆ, ಉತ್ಸವ, ದೇವಸ್ಥಾನಗಳಿಗೆ ನಿರ್ಬಂಧ ಹೇರಿದ್ದರಿಂದ ಹೂವಿಗೆ ಬೇಡಿಕೆ ಇಲ್ಲದಂತಾಗಿ ಹೊಲದಲ್ಲೇ ಉದುರುತ್ತಿದೆ. ಸುಮಾರು 2.5 ಲಕ್ಷ ನಷ್ಟವಾಗಿದೆ. ಇದು ಹಾಕಿದ ಬಂಡವಾಳ ನೀಗಿಸುತ್ತಿತ್ತು ಎಂದು ರಾಮಚಂದ್ರ ತಿಳಿಸುತ್ತಾರೆ.
ಲಾಕ್ಡೌನ್ನಿಂದ ಬೆಲೆ ಕುಸಿದಿದೆ. ಹೀಗಾಗಿ ಮಾರಾಟಗಾರರು ಬಾಯಿಗೆ ಬಂದಂತೆ ಕೇಳುತ್ತಾರೆ. ದಿನಕ್ಕೆ ಒಂದು ಆಳಿಗೆ 300ರಿಂದ 400 ರೂ. ಕೂಲಿ ಕೊಡಬೇಕು. ಬೆಳೆದ ಹೂವು ಬಿಡಿಸಲು ಕೂಲಿ ಕೊಡಲಾಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್