ಮೆಣಸಿನಕಾಯಿ ಬೆಳೆಗೆ ರೋಗ: ಕ್ರಮಕ್ಕೆ ಪರಿಹಾರ

ಸುಣಕಲ್ಲಬಿದರಿ ಮೆಣಸಿನ ಬೆಳೆ ಕ್ಷೇತ್ರಕ್ಕೆ ವಿಜ್ಞಾನಿಗಳ ತಂಡ ಭೇಟಿ

Team Udayavani, Jul 4, 2022, 3:25 PM IST

16

ರಾಣಿಬೆನ್ನೂರ: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಪ್ರಗತಿಪರ ರೈತ ಶಿವಯೋಗಿ ಎಮ್ಮೆರ ಇವರ ಮೆಣಸಿನ ಬೆಳೆ ಕ್ಷೇತ್ರಕ್ಕೆ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ತಾಂತ್ರಿಕ ಸಲಹೆ ನೀಡಿದರು.

ಈ ವೇಳೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಅಶೋಕ ಪಿ. ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೆಣಸಿನಕಾಯಿ ಬೆಳೆಗೆ ರೋಗ ಬಾಧೆಗಳು ಹೆಚ್ಚಿಗೆಯಾಗಿವೆ. ಈ ರೋಗಗಳಲ್ಲಿ ಮುರುಟು ರೋಗ ಪ್ರಮುಖವಾಗಿದ್ದು, ಈ ರೋಗದಿಂದ ಇಳುವರಿಯು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಲಿದ್ದು, ರೈತರು ಈ ರೋಗಕ್ಕೆ ಪರಿಹಾರವನ್ನು ಕಾಣದ ಮೆಣಸಿನಕಾಯಿ ಬೆಳೆಯುವುದನ್ನು ತ್ಯಜಿಸಿ ಇತರ ಬೆಳೆಗಳನ್ನು ಬೆಳೆಯಲು ಆಸಕ್ತಿ ವಹಿಸುತ್ತಿದ್ದಾರೆ ಎಂದರು.

ಈ ರೋಗವು ರಸ ಹೀರುವ ಕೀಟಗಳಾದಂತಹ ಥ್ರಿಪ್ಸ್‌ ಕೀಟ ಹಾಗೂ ಮೈಟ್‌ ನುಸಿಯಿಂದ ಹರಡುವುದು. ಥ್ರಿಪ್ಸ್‌ ರಸ ಹೀರುವ ಕೀಟ ನೋಡಲಿಕ್ಕೆ ತಿಳಿ ಹಸಿರು ಬಣ್ಣದಾಗಿದ್ದು, ಅತೀ ಚಿಕ್ಕದಾಗಿರುತ್ತದೆ. ಈ ಕೀಟದ ರಸ ಹೀರುವಿಕೆಯಿಂದ ಎಲೆಗಳ ಅಂಚಿನಿಂದ ಒಳಮುದುರಿಕೊಳ್ಳುತ್ತವೆ. ಇದಕ್ಕೆ ಒಳಮುಟುರು ರೋಗವೆಂದು ಕರೆಯುತ್ತಾರೆ. ಈ ಥ್ರಿಪ್ಸ್‌ ಕೀಟ ರಸ ಹೀರುವುದಲ್ಲದೆ ಹಲವಾರು ವಿವಿಧ ಬಗೆಯ ವೈರಸ್‌(ನಂಜಾಣು)ಗಳನ್ನು ಎಲೆಗಳಲ್ಲಿ ಹರಡುತ್ತದೆ ಎಂದರು.

ಹಲವಾರು ಬಗೆಯ ವೈರಸ್‌ಗಳಲ್ಲಿ “ಟಾನ್ಪೊ’ ವೈರಸ್‌ ಪ್ರಮುಖವಾಗಿದ್ದು, ಇದರಿಂದಾಗಿ ಎಲೆಗಳ ಮಧ್ಯಭಾಗಗಳಲ್ಲಿ ತಗ್ಗುಗಳು ಕಾಣಿಸಿಕೊಳ್ಳುವವು. ಈ ಕೀಟದ ಹಾವಳಿ ಹಾಗೂ ವೈರಸ್‌ ಬಾಧೆ ತೀವ್ರವಾದಾಗ ಎಲೆಗಳು ಗಾತ್ರದಲ್ಲಿ ಅತೀ ಚಿಕ್ಕದಾಗಿ ಹಳದಿ ಬಣ್ಣಕ್ಕೆ ತಿರುಗಿ ಹೂ ಹಾಗೂ ಹಣ್ಣುಗಳನ್ನು ಬಿಡದೆ ಕುಬ್ಜವಾಗಿ ಇರುತ್ತವೆ. ಇದರಿಂದ ಇಳುವರಿಯು ಗಣನೀಯವಾಗಿ ಕುಂಠಿತವಾಗುತ್ತದೆ. ಮುಟುರು ರೋಗಕ್ಕೆ ನಾಂದಿಯಾದ ಇನ್ನೊಂದು ಮುಖ್ಯವಾದ ಕೀಟವಂದರೆ ಮೈಟ್‌ ನುಸಿ, ಇದು ತಿಳಿ ಹಸಿರು ಹಾಗೂ ಬಿಳಿ ಬಣ್ಣದಾಗಿದ್ದು, ಎಲೆಗಳ ಕೆಳಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವವು. ಇವುಗಳ ರಸ ಹೀರುವಿಕೆಯಿಂದ ಎಲೆಗಳು ಅಂಚಿನಿಂದ ಹೊರ ಮಗ್ಗುಲಿಗೆ ಮುದುರಿಕೊಳ್ಳುತ್ತವೆ ಎಂದರು.

ಇವುಗಳ ಹತೋಟಿಗಾಗಿ ವಿವಿಧ ಬಗೆಯ ಕೀಟನಾಶಕಗಳನ್ನು ಸಿಂಪರಣೆ ಮಾಡಿದರೂ ಹತೋಟಿ ಬರುವುದು ಕಷ್ಟ. ಈ ಮುಟುರು ರೋಗದ ನಿಯಂತ್ರಣಕ್ಕಾಗಿ ಸಮಗ್ರಕೀಟ ನಿರ್ವಹಣೆ ಅಂಶ ಅತೀ ಅವಶ್ಯಕವಾಗಿದೆ. ಈ ದಿಶೆಯಲ್ಲಿ ಬ್ಯಾರಿಯರ್‌ (ತಡೆ) ಬೆಳೆ ಒಂದು ಅತ್ಯುತ್ತಮವಾದ ಮುಟುರು ರೋಗ ನಿರ್ವಹಣಾ ಪದ್ಧತಿಯಾಗಿ ಪರಿಣಮಿಸಿದೆ. ಮೆಣಸಿನ ಸಸಿ ನಾಟಿ ಮಾಡುವ 10-15 ದಿವಸ ಪೂರ್ವದಲ್ಲಿ (ಮುಂಚಿತವಾಗಿ) ಕೂರಿಗೆಯಿಂದ ಬಿತ್ತನೆ ಮಾಡಬೇಕು. ಪ್ರತಿ 40-50 ಸಾಲು (24. ಮೀ. ಅಥವಾ 38 ಮೀ.) ಅಂತರದಲ್ಲಿ ಮೆಣಸಿನ ಕುಣಿಗಳ ಮಧ್ಯದಲ್ಲಿ 6 ಅಥವಾ 9 ಸಾಲುಗಳಂತೆ ಬಿತ್ತನೆ ಮಾಡಬೇಕು. ಬಿತ್ತನೆ ಮಾಡುವಾಗ ಸಾಲುಗಳು ಉತ್ತರ-ದಕ್ಷಿಣವಾಗಿ ಇರುವಂತೆ ಬಿತ್ತನೆ ಮಾಡಬೇಕು ಎಂದು ಸಲಹೆ ನೀಡಿದರು.

ಈ ರೀತಿ ಬಿತ್ತನೆ ಮಾಡಿದಾಗ ಹಲವಾರು ನೈಸರ್ಗಿಕ ಪರೋಪ ಜೀವಿಗಳಾದಂತಹ ಜೇಡ, ಗುಲಗುಂಜಿ ಹುಳಗಳ ಸಂಖ್ಯೆ ಅಧಿಕವಾಗಿರುತ್ತದೆ. ಇದೇ ರೀತಿ ಜೋಳವನ್ನು ತಡೆ ಬೆಳೆಯಾಗಿ ಬೆಳೆದಾಗ ಜೇಡಗಳ ಸಂಖ್ಯೆ ಅಧಿಕವಾಗಿರುತ್ತದೆ. ಇದರಿಂದಾಗಿ ಸಹಜವಾಗಿಯೇ ಮುಟುರು ರೋಗ ಕಡಿಮೆಯಾಗುವವು. ಈ ರೀತಿ ತಡೆ ಬೆಳೆ ಬೆಳೆಯುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಮುಟುರು ರೋಗ ನಿಯಂತ್ರಣ ಸಾಧ್ಯವಿದೆ ಎಂದು ಹೇಳಿದರು.

ಮಣ್ಣು ವಿಜ್ಞಾನಿ ಡಾ| ರಾಜಕುಮಾರ ಜಿ.ಆರ್‌., ತೋಟಗಾರಿಕೆ ವಿಜ್ಞಾನಿ ಡಾ| ಸಂತೋಷ ಎಚ್‌. ಎಂ., ಪ್ರಗತಿಪರ ರೈತರಾದ ರಮೇಶ ಲಿಂಗದಹಳ್ಳಿ, ಶಿವಾನಂದಪ್ಪ ದಿಪಾಳಿ ಹಾಗೂ ಮತ್ತಿತರ ರೈತರು ಇದ್ದರು.

ಟಾಪ್ ನ್ಯೂಸ್

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

signature

Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ

ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ

ಬಸವರಾಜ ಬೊಮ್ಮಾಯಿ

LokSabha Election; ಕಾಂಗ್ರೆಸ್ ನ ಬಹುಮತ ಹೇಳಿಕೆಯೇ ಹಾಸ್ಯಾಸ್ಪದ: ಬಸವರಾಜ ಬೊಮ್ಮಾಯಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.