ಆಪ್ತಮಿತ್ರನನ್ನೆ ಮಾರಿ ಮರಗುತ್ತಿರುವ ಅನ್ನದಾತ
•ಕೃಷಿ ಚಟುವಟಿಕೆಗೆ ಎತ್ತುಗಳ ಸಮಸ್ಯೆ ಎದುರಿಸುತ್ತಿರುವ ರೈತ•ಅನಿವಾರ್ಯ ದುಬಾರಿ ದರದ ಬಾಡಿಗೆ ಯಂತ್ರ ಬಳಕೆ
Team Udayavani, Jul 12, 2019, 9:33 AM IST
ಹಾವೇರಿ: ಸತತ ನಾಲ್ಕೈದು ವರ್ಷಗಳಿಂದ ಬರಗಾಲದ ಬವಣೆಯಲ್ಲಿ ಬೆಂದಿರುವ ಜಿಲ್ಲೆಯ ಬಹುತೇಕ ಸಣ್ಣ ರೈತರು, ಸಂಕಷ್ಟದ ಕಾಲದಲ್ಲಿ ಜೀವನಾಡಿಯಾದ ಎತ್ತುಗಳನ್ನು ಮಾರಾಟ ಮಾಡಿದ್ದು, ಈಗಷ್ಟೇ ಆರಂಭವಾಗಿರುವ ಕೃಷಿ ಚಟುವಟಿಕೆಗೆ ಎತ್ತುಗಳಿಲ್ಲದೇ ಮರಗುತ್ತಿದ್ದಾರೆ.
ಬರದ ಕಾರಣದಿಂದಾದ ಉಂಟಾದ ಆರ್ಥಿಕ ಸಂಕಷ್ಟಕ್ಕೆ ಅನೇಕ ಸಣ್ಣ ರೈತರು ಕಳೆದ ಬೇಸಿಗೆಯಲ್ಲಿಯೇ ಎತ್ತುಗಳನ್ನು ಮಾರಾಟ ಮಾಡಿದ್ದಾರೆ. ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಒದಗಿಸುವುದು ಸಹ ಕಷ್ಟವಾಗಿತ್ತು. ಜಾನುವಾರುಗಳಿಗೆ ಹಾಕಲು ಸಮರ್ಪಕ ಮೇವು ಲಭ್ಯ ಇಲ್ಲದೇ ರೈತರು ಎತ್ತುಗಳನ್ನು ಮಾರಾಟ ಮಾಡಿದ್ದಾರೆ. ಹೀಗಾಗಿ ಈಗ ಸಣ್ಣ, ಅತಿ ಸಣ್ಣ ರೈತರು ಎತ್ತುಗಳ ಸಮಸ್ಯೆ ಎದುರಿಸುವಂತಾಗಿದೆ.
ಈ ವರ್ಷ ಜುಲೈವರೆಗೂ ಮುಂಗಾರು ಮಳೆ ಬಾರದೆ ಇರುವುದರಿಂದ ಬಹುತೇಕ ರೈತರು ಬಿತ್ತನೆ ವಿಚಾರವನ್ನೇ ಕೈಬಿಟ್ಟಿದ್ದರು. ಈ ಒಂದು ವಾರದಿಂದ ಜಿಲ್ಲೆಯಲ್ಲಿ ತುಸು ಮಳೆ ಬೀಳುತ್ತಿದ್ದು ಮತ್ತೆ ರೈತರ ಮನದಲ್ಲಿ ಕೃಷಿ ಮಾಡುವ ಆಸೆ ಚಿಗುರೊಡೆದಿದೆ. ಆದರೆ, ಕೃಷಿ ಚಟುವಟಿಕೆ ನಡೆಸಲು ಈಗ ಎತ್ತುಗಳ ಸಮಸ್ಯೆ ಎದುರಾಗಿದೆ. ಹೊಸದಾಗಿ ಎತ್ತುಗಳನ್ನು ಕೊಂಡುಕೊಳ್ಳುವಷ್ಟು ಹಣ ರೈತರ ಬಳಿ ಇಲ್ಲ. ಇನ್ನು ದುಬಾರಿ ಬಾಡಿಗೆ ಕೊಟ್ಟು ಯಂತ್ರಗಳನ್ನು ಬಳಸುವ ಶಕ್ತಿಯೂ ಇಲ್ಲದಂತಾಗಿದೆ.
ಬಾಡಿಗೆಯಂತ್ರಕ್ಕೆ ಮೊರೆ: ಎತ್ತುಗಳು ಇಲ್ಲದೇ ಇರುವುದರಿಂದ ಅನೇಕರು ಮತ್ತೆ ಸಾಲ ಮಾಡಿ, ಬಂದಿರುವ ಒಂದಿಷ್ಟು ಬೆಳೆವಿಮೆ ಹಣ ಬಳಸಿ ಬಾಡಿಗೆ ಯಂತ್ರಗಳನ್ನು ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಈಗ ಬಾಡಿಗೆ ಯಂತ್ರಗಳನ್ನು ಬಳಸುವುದು ಅನೇಕ ರೈತರಿಗೆ ಅನಿವಾರ್ಯ ಆಗಿದೆ. ಮಳೆ ಬಿದ್ದಾಗ ಒಂದೇ ಸಲ ಎಲ್ಲರೂ ಕೃಷಿಯಲ್ಲಿ ತೊಡಗಿಕೊಂಡಿರುವುದರಿಂದ ಯಂತ್ರಗಳು ಸಕಾಲಕ್ಕೆ ಬಾಡಿಗೆಗೆ ಸಿಗುತ್ತಿಲ್ಲ. ಇನ್ನು ಖಾಸಗಿಯಾಗಿ ಬಾಡಿಗೆ ಯಂತ್ರಗಳನ್ನು ಪಡೆಯಬೇಕೆಂದರೆ ಹೆಚ್ಚಿನ ದರ ನೀಡಬೇಕು. ಇದು ಸಣ್ಣ ರೈತರಿಗೆ ಹೊರೆಯಾಗಿದ್ದು ರೈತರ ಸಂಕಷ್ಟಕ್ಕೆ ಕೊನೆಯ ಇಲ್ಲದಂತಾಗಿದೆ.
ಬಿತ್ತನೆಯೂ ಕಡಿಮೆ:ಈ ವರ್ಷ ಜುಲೈವರೆಗೂ ಮುಂಗಾರು ಮಳೆ ಸಮರ್ಪಕವಾಗಿ ಆಗದೆ ಇರುವುದರಿಂದ ಬಹುತೇಕ ರೈತರು ಕೃಷಿ ಚಟುವಟಿಕೆಯಿಂದಲೇ ವಿಮುಖರಾಗಿದ್ದರು. ಜಿಲ್ಲೆಯ ಕೃಷಿ ಕ್ಷೇತ್ರ 3.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈವರೆಗೆ ಕೇವಲ ಶೇ. 40ರಷ್ಟು ಮಾತ್ರ ಬಿತ್ತನೆಯಾಗಿದೆ. ಮಳೆ ಕೊರತೆ ಕಾರಣದಿಂದ ವಿಳಂಬವಾಗಿ ಬಿತ್ತನೆ ಮಾಡಿದರೆ ಇಳುವರಿ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದು ಗೊತ್ತಿದ್ದರೂ ರೈತರು ಬಂದಷ್ಟಾದರೂ ಬರಲಿ ಎಂಬ ಭಾವನೆಯಿಂದ ಕಷ್ಟದಲ್ಲಿಯೂ ಕೃಷಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
•ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಸ್ಟಾರ್ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ
ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ
ಬೃಹತ್ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು
Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ
Lok Sabha Elections; ಹಾವೇರಿ ಕಾಂಗ್ರೆಸ್ನಲ್ಲೂ ಭುಗಿಲೆದ್ದ ಆಕ್ರೋಶ
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ