ಕೃಷ್ಣಮೃಗ ಹಾವಳಿಗೆ ಕಂಗೆಟ್ಟ ಅನ್ನದಾತ
•ಮೊಳಕೆಯಲ್ಲೇ ಬೆಳೆ ಹಾನಿ ಬರೆ •ಹಿಂಡು ಹಿಂಡಾಗಿ ಬಂದು ರೈತರ ಜಮೀನುಗಳಿಗೆ ದಾಂಗುಡಿ
Team Udayavani, Jul 30, 2019, 10:41 AM IST
ಹಾವೇರಿ: ರೈತರ ಜಮೀನಿಗೆ ದಾಳಿಯಿಟ್ಟ ಜಿಂಕೆ, ಕೃಷ್ಣಮೃಗಗಳು.
ಹಾವೇರಿ: ಮುಂಗಾರು ಮಳೆ ಸಕಾಲಕ್ಕೆ ಬಾರದೆ ಕಂಗಾಲಾಗಿದ್ದ ಜಿಲ್ಲೆಯ ರೈತರು, ಇದೀಗಷ್ಟೇ ಸುರಿದ ಮಳೆಯಿಂದಾಗಿ ಬಿತ್ತನೆ ಆರಂಭಿಸಿದ್ದಾರೆ. ಬಿತ್ತನೆ ಮಾಡುತ್ತಿರುವ ಈ ಸಮಯದಲ್ಲಿ ಜಿಂಕೆ ಹಾಗೂ ಕೃಷ್ಣಮೃಗಗಳ ಹಾವಳಿ ರೈತರ ನೆಮ್ಮದಿ ಕೆಡಿಸಿದೆ.
ಕಳೆದ ನಾಲ್ಕು ವರ್ಷಗಳಿಂದ ಸಮರ್ಪಕ ಮಳೆ ಇಲ್ಲದೆ ಬರಗಾಲ ಅನುಭವಿಸಿರುವ ರೈತರು, ಈ ವರ್ಷ ಸಕಾಲದಲ್ಲಿ ಅಂದರೆ ಜುಲೈ ತಿಂಗಳು ವರೆಗೂ ಮುಂಗಾರು ಮಳೆ ಮಳೆಯಾಗದೆ ಚಿಂತಾಕ್ರಾಂತರಾಗಿದ್ದರು. ಕಳೆದ 15-20 ದಿನಗಳಿಂದ ಒಂದಿಷ್ಟು ಮಳೆಯಾಗುತ್ತಿದ್ದು, ಈಗಷ್ಟೇ ರೈತರು ಜಮೀನು ಹಸನುಗೊಳಿಸಿ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಇಂಥ ಸಂದರ್ಭದಲ್ಲೀಗ ರೈತರಿಗೆ ಈಗ ಜಿಂಕೆ, ಕೃಷ್ಣಮೃಗಗಳ ಹಾವಳಿ ರೈತರನ್ನು ಕಾಡುತ್ತಿದೆ.
ಕೆಲವು ಕಡೆ ಬೀಜ ಮೊಳಕೆಯೊಡೆದು ಚಿಗುರು ಶುರುವಾಗಿದೆ. ಈ ಚಿಗುರನ್ನು ತಿನ್ನಲ್ಲೆಂದೇ ಜಿಂಕೆಗಳು ಹಿಂಡು ಹಿಂಡಾಗಿ ಹೊಲಗಳತ್ತ ದಾಳಿ ಇಡುತ್ತಿವೆ. ಮೊಳಕೆಯೊಡೆದ ಚಿಗುರು ಕಾಪಾಡಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಜಿಂಕೆ ಹಾಗೂ ಕೃಷ್ಣಮೃಗಗಳ ಹಾವಳಿ ಜಿಲ್ಲೆಯ ಹಾವೇರಿ, ರಾಣಿಬೆನ್ನೂರು, ಸವಣೂರು, ಹಾನಗಲ್ಲ ಭಾಗಗಳಲ್ಲಿ ಹೆಚ್ಚಾಗಿದ್ದು, ಈ ಭಾಗದ ರೈತರು ಮೊಳಕೆಯೊಡೆದ ಚಿಗುರು ಕಾಯಲೆಂದೇ ಹೊಲಗಳಿಗೆ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪೈರು ಬಂದಾಗ ಹೊಲಗಳಿಗೆ ಹೋಗಿ ಕಾಯಬೇಕಾದ ರೈತರು, ಬೀಜ ಬಿತ್ತಿದ ಸಂದರ್ಭದಲ್ಲಿಯೂ ಹೊಲ ಕಾಯುವ ಕಾಯಕ ಮಾಡಲೇಬೇಕಾಗಿದೆ.
ಹಿಂಡು ಹಿಂಡಾಗಿ ದಾಳಿ: ಜಿಂಕೆಗಳು ಹಿಂಡು ಹಿಂಡಾಗಿ ಬಂದು ರೈತರ ಜಮೀನುಗಳ ಮೇಲೆ ದಾಳಿ ನಡೆಸುತ್ತಿವೆ. ಒಂದೊಂದು ಹಿಂಡಿನಲ್ಲಿ ಸುಮಾರು 30-40 ಜಿಂಕೆಗಳಿರುತ್ತವೆ. ಒಂದು ಹಿಂಡು ಹೊಲದಲ್ಲಿ ಅರ್ಧಗಂಟೆ ನಿಂತರೆ ಸಾಕು ಎರಡ್ಮೂರು ಎಕರೆಯಲ್ಲಿನ ಚಿಗುರು ಬೆಳೆಯನ್ನು ತಿಂದು ಹಾಕುತ್ತವೆ. ಮನುಷ್ಯರ ವಾಸನೆ ಕಂಡರೆ ಚಂಗನೆ ಜಿಗಿದು ಕಾಲಿಗೆ ಬುದ್ದಿಹೇಳುತ್ತವೆ.
ವರದಾ ನದಿ ದಡದಲ್ಲಿ ಜಮೀನು ಹೊಂದಿರುವ ರೈತರಿಗಂತೂ ಜಿಂಕೆ ಮತ್ತು ಕೃಷ್ಣಮೃಗಗಳ ಹಾವಳಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಗಿಡ- ಮರಗಳ ಪೊದರಿನಲ್ಲಿ ಬಹುದೊಡ್ಡ ಸಂಖ್ಯೆಯಲ್ಲೇ ಜಿಂಕೆಗಳು ವಾಸವಾಗಿವೆ. ಇವು ಬೇಸಿಗೆಯಲ್ಲಿ ಆಹಾರ ಅರಸಿ ಬೇರೆ ಕಡೆ ತೆರಳುತ್ತವೆ. ಮಳೆಗಾಲದಲ್ಲಿ ಮತ್ತೆ ತಮ್ಮ ಮೂಲ ಸ್ಥಾನಕ್ಕೆ ಬಂದು ತಮ್ಮ ಆಹಾರಕ್ಕಾಗಿ ರೈತರ ಜಮೀನನ್ನೇ ಆಶ್ರಯಿಸುವುದರಿಂದ ರೈತರಿಗೆ ಜಿಂಕೆಗಳ ಕಾಟ ಕಿರಿಕಿರಿಯನ್ನುಂಟು ಮಾಡಿದೆ.
ಹಗಲು ವೇಳೆಯಲ್ಲಿ ಅಷ್ಟಾಗಿ ಹೊರಗಡೆ ಕಾಣಿಸಿಕೊಳ್ಳದ ಈ ಜಿಂಕೆ, ಕೃಷ್ಣಮೃಗಗಳು ಬೆಳಗಿನ ಜಾವ ಹಾಗೂ ಸಂಜೆ ಮಾತ್ರ ಪೊದರಿನಿಂದ ಹೊರಬಂದು ಆಹಾರಕ್ಕಾಗಿ ಹೊಲಗಳತ್ತ ದಾಳಿ ಇಡುತ್ತವೆ. ಹೊಲದಲ್ಲಿ ಈಗಷ್ಟೆ ಭೂಮಿಯಿಂದ ಹೊರ ಏಳುತ್ತಿರುವ ಚಿಗುರು ಬೆಳೆಯೇ ಅವುಗಳಿಗೆ ಇಷ್ಟವಾದ ಆಹಾರವಾಗಿದೆ. ಹಾಗಾಗಿ ರೈತರು ಚಿಗುರು ಬೆಳೆಯನ್ನು ಕಾಪಾಡಿಕೊಳ್ಳಲು ಹರಸಾಹಸಪಡಬೇಕಾಗಿದೆ.
ಬೆಳೆ ಸ್ವಲ್ಪ ದೊಡ್ಡದಾಗಿ ಸಸಿಯಾದರೆ ಈ ಪ್ರಾಣಿಗಳು ತಿನ್ನುವುದಿಲ್ಲ. ಹೀಗಾಗಿ ರೈತರು ಈ ಚಿಗುರು ಹಂತದಲ್ಲಿ ಹಗಲು ರಾತ್ರಿ ಎನ್ನದೇ ಜಿಂಕೆ, ಕೃಷ್ಣಮೃಗಗಳನ್ನು ಓಡಿಸುವ ಕೆಲಸದಲ್ಲಿ ತೊಡಗಬೇಕಿದೆ.
ಬೆದರಿಸದ ಗೊಂಬೆ: ಇನ್ನು ಕೆಲವರು ಜಿಂಕೆ ಹಾಗೂ ಕೃಷ್ಣಮೃಗಗಳ ಹಾವಳಿ ನಿಯಂತ್ರಿಸಲು ಹೊಲಗಳಲ್ಲಿ ಅಲ್ಲಲ್ಲಿ ಬೆದರುಗೊಂಬೆಗಳನ್ನು ನಿಲ್ಲಿಸುತ್ತಾರೆ. ಮನುಷ್ಯ ನಿಂತಂತೆ ಗೋಚರಿಸುವುದರಿಂದ ಸ್ವಲ್ಪಮಟ್ಟಿನ ಜಿಂಕೆಗಳ ಹಾವಳಿ ತಪ್ಪುತ್ತದೆ. ಆದರೆ, ಮನುಷ್ಯನ ವಾಸನೆ ಬಾರದೆ, ಗೊಂಬೆಗಳ ಮೇಲೆ ಪಕ್ಷಿಗಳು ಕೂತಿದ್ದನ್ನು ಕಂಡರೆ ಜಾಣ ಜಿಂಕೆಗಳು ನಿರ್ಭಯವಾಗಿ ಆ ಜಮೀನಿಗೆ ದಾಳಿಯಿಟ್ಟು ಚಿಗುರು ಬೆಳೆ ಮೇಯುತ್ತವೆ.
ಅರಣ್ಯರೋದನ: ಈ ಭಾಗದಲ್ಲಿ ಪ್ರತಿವರ್ಷ ಜಿಂಕೆ ಹಾವಳಿ ಮಾಮೂಲು. ನೂರಾರು ಜಿಂಕೆಗಳು ನೂರಾರು ಎಕರೆ ಜಮೀನಿನಲ್ಲಿರು ಚಿಗುರು ಬೆಳೆ ಹಾನಿ ಮಾಡುತ್ತವೆ. ಜಿಂಕೆಗಳನ್ನು ಹಿಡಿದು ರಾಣಿಬೆನ್ನೂರು ಹತ್ತಿರ ಇರುವ ಕೃಷ್ಣಮೃಗಧಾಮಕ್ಕೆ ಸಾಗಿಸಬೇಕು. ತನ್ಮೂಲಕ ರೈತರ ಬೆಳೆ ರಕ್ಷಣೆಗೆ ಸಹಕರಿಸಬೇಕು ಎಂದು ರೈತರು ಹತ್ತಾರು ಬಾರಿ ಅರಣ್ಯಾಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನ ಮಾತ್ರ ಶೂನ್ಯ. ಮನವಿ, ಪ್ರತಿಭಟನೆ, ರಸ್ತೆತಡೆಗೆ ಕಿವಿಗೊಡದ ಅರಣ್ಯ ಇಲಾಖೆ ಜಾಣಕಿವುಡು ಮೆರೆಯುತ್ತಿದ್ದರೆ ರೈತರದ್ದು ಅಕ್ಷರಶಃ ಅರಣ್ಯರೋದನವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಸ್ಟಾರ್ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ
ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ
ಬೃಹತ್ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು
Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ
Lok Sabha Elections; ಹಾವೇರಿ ಕಾಂಗ್ರೆಸ್ನಲ್ಲೂ ಭುಗಿಲೆದ್ದ ಆಕ್ರೋಶ
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ