ಕೃಷ್ಣಮೃಗ ಹಾವಳಿಗೆ ಕಂಗೆಟ್ಟ ಅನ್ನದಾತ

•ಮೊಳಕೆಯಲ್ಲೇ ಬೆಳೆ ಹಾನಿ ಬರೆ •ಹಿಂಡು ಹಿಂಡಾಗಿ ಬಂದು ರೈತರ ಜಮೀನುಗಳಿಗೆ ದಾಂಗುಡಿ

Team Udayavani, Jul 30, 2019, 10:41 AM IST

hv-tdy1

ಹಾವೇರಿ: ರೈತರ ಜಮೀನಿಗೆ ದಾಳಿಯಿಟ್ಟ ಜಿಂಕೆ, ಕೃಷ್ಣಮೃಗಗಳು.

ಹಾವೇರಿ: ಮುಂಗಾರು ಮಳೆ ಸಕಾಲಕ್ಕೆ ಬಾರದೆ ಕಂಗಾಲಾಗಿದ್ದ ಜಿಲ್ಲೆಯ ರೈತರು, ಇದೀಗಷ್ಟೇ ಸುರಿದ ಮಳೆಯಿಂದಾಗಿ ಬಿತ್ತನೆ ಆರಂಭಿಸಿದ್ದಾರೆ. ಬಿತ್ತನೆ ಮಾಡುತ್ತಿರುವ ಈ ಸಮಯದಲ್ಲಿ ಜಿಂಕೆ ಹಾಗೂ ಕೃಷ್ಣಮೃಗಗಳ ಹಾವಳಿ ರೈತರ ನೆಮ್ಮದಿ ಕೆಡಿಸಿದೆ.

ಕಳೆದ ನಾಲ್ಕು ವರ್ಷಗಳಿಂದ ಸಮರ್ಪಕ ಮಳೆ ಇಲ್ಲದೆ ಬರಗಾಲ ಅನುಭವಿಸಿರುವ ರೈತರು, ಈ ವರ್ಷ ಸಕಾಲದಲ್ಲಿ ಅಂದರೆ ಜುಲೈ ತಿಂಗಳು ವರೆಗೂ ಮುಂಗಾರು ಮಳೆ ಮಳೆಯಾಗದೆ ಚಿಂತಾಕ್ರಾಂತರಾಗಿದ್ದರು. ಕಳೆದ 15-20 ದಿನಗಳಿಂದ ಒಂದಿಷ್ಟು ಮಳೆಯಾಗುತ್ತಿದ್ದು, ಈಗಷ್ಟೇ ರೈತರು ಜಮೀನು ಹಸನುಗೊಳಿಸಿ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಇಂಥ ಸಂದರ್ಭದಲ್ಲೀಗ ರೈತರಿಗೆ ಈಗ ಜಿಂಕೆ, ಕೃಷ್ಣಮೃಗಗಳ ಹಾವಳಿ ರೈತರನ್ನು ಕಾಡುತ್ತಿದೆ.

ಕೆಲವು ಕಡೆ ಬೀಜ ಮೊಳಕೆಯೊಡೆದು ಚಿಗುರು ಶುರುವಾಗಿದೆ. ಈ ಚಿಗುರನ್ನು ತಿನ್ನಲ್ಲೆಂದೇ ಜಿಂಕೆಗಳು ಹಿಂಡು ಹಿಂಡಾಗಿ ಹೊಲಗಳತ್ತ ದಾಳಿ ಇಡುತ್ತಿವೆ. ಮೊಳಕೆಯೊಡೆದ ಚಿಗುರು ಕಾಪಾಡಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಜಿಂಕೆ ಹಾಗೂ ಕೃಷ್ಣಮೃಗಗಳ ಹಾವಳಿ ಜಿಲ್ಲೆಯ ಹಾವೇರಿ, ರಾಣಿಬೆನ್ನೂರು, ಸವಣೂರು, ಹಾನಗಲ್ಲ ಭಾಗಗಳಲ್ಲಿ ಹೆಚ್ಚಾಗಿದ್ದು, ಈ ಭಾಗದ ರೈತರು ಮೊಳಕೆಯೊಡೆದ ಚಿಗುರು ಕಾಯಲೆಂದೇ ಹೊಲಗಳಿಗೆ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪೈರು ಬಂದಾಗ ಹೊಲಗಳಿಗೆ ಹೋಗಿ ಕಾಯಬೇಕಾದ ರೈತರು, ಬೀಜ ಬಿತ್ತಿದ ಸಂದರ್ಭದಲ್ಲಿಯೂ ಹೊಲ ಕಾಯುವ ಕಾಯಕ ಮಾಡಲೇಬೇಕಾಗಿದೆ.

ಹಿಂಡು ಹಿಂಡಾಗಿ ದಾಳಿ: ಜಿಂಕೆಗಳು ಹಿಂಡು ಹಿಂಡಾಗಿ ಬಂದು ರೈತರ ಜಮೀನುಗಳ ಮೇಲೆ ದಾಳಿ ನಡೆಸುತ್ತಿವೆ. ಒಂದೊಂದು ಹಿಂಡಿನಲ್ಲಿ ಸುಮಾರು 30-40 ಜಿಂಕೆಗಳಿರುತ್ತವೆ. ಒಂದು ಹಿಂಡು ಹೊಲದಲ್ಲಿ ಅರ್ಧಗಂಟೆ ನಿಂತರೆ ಸಾಕು ಎರಡ್ಮೂರು ಎಕರೆಯಲ್ಲಿನ ಚಿಗುರು ಬೆಳೆಯನ್ನು ತಿಂದು ಹಾಕುತ್ತವೆ. ಮನುಷ್ಯರ ವಾಸನೆ ಕಂಡರೆ ಚಂಗನೆ ಜಿಗಿದು ಕಾಲಿಗೆ ಬುದ್ದಿಹೇಳುತ್ತವೆ.

ವರದಾ ನದಿ ದಡದಲ್ಲಿ ಜಮೀನು ಹೊಂದಿರುವ ರೈತರಿಗಂತೂ ಜಿಂಕೆ ಮತ್ತು ಕೃಷ್ಣಮೃಗಗಳ ಹಾವಳಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಗಿಡ- ಮರಗಳ ಪೊದರಿನಲ್ಲಿ ಬಹುದೊಡ್ಡ ಸಂಖ್ಯೆಯಲ್ಲೇ ಜಿಂಕೆಗಳು ವಾಸವಾಗಿವೆ. ಇವು ಬೇಸಿಗೆಯಲ್ಲಿ ಆಹಾರ ಅರಸಿ ಬೇರೆ ಕಡೆ ತೆರಳುತ್ತವೆ. ಮಳೆಗಾಲದಲ್ಲಿ ಮತ್ತೆ ತಮ್ಮ ಮೂಲ ಸ್ಥಾನಕ್ಕೆ ಬಂದು ತಮ್ಮ ಆಹಾರಕ್ಕಾಗಿ ರೈತರ ಜಮೀನನ್ನೇ ಆಶ್ರಯಿಸುವುದರಿಂದ ರೈತರಿಗೆ ಜಿಂಕೆಗಳ ಕಾಟ ಕಿರಿಕಿರಿಯನ್ನುಂಟು ಮಾಡಿದೆ.

ಹಗಲು ವೇಳೆಯಲ್ಲಿ ಅಷ್ಟಾಗಿ ಹೊರಗಡೆ ಕಾಣಿಸಿಕೊಳ್ಳದ ಈ ಜಿಂಕೆ, ಕೃಷ್ಣಮೃಗಗಳು ಬೆಳಗಿನ ಜಾವ ಹಾಗೂ ಸಂಜೆ ಮಾತ್ರ ಪೊದರಿನಿಂದ ಹೊರಬಂದು ಆಹಾರಕ್ಕಾಗಿ ಹೊಲಗಳತ್ತ ದಾಳಿ ಇಡುತ್ತವೆ. ಹೊಲದಲ್ಲಿ ಈಗಷ್ಟೆ ಭೂಮಿಯಿಂದ ಹೊರ ಏಳುತ್ತಿರುವ ಚಿಗುರು ಬೆಳೆಯೇ ಅವುಗಳಿಗೆ ಇಷ್ಟವಾದ ಆಹಾರವಾಗಿದೆ. ಹಾಗಾಗಿ ರೈತರು ಚಿಗುರು ಬೆಳೆಯನ್ನು ಕಾಪಾಡಿಕೊಳ್ಳಲು ಹರಸಾಹಸಪಡಬೇಕಾಗಿದೆ.

ಬೆಳೆ ಸ್ವಲ್ಪ ದೊಡ್ಡದಾಗಿ ಸಸಿಯಾದರೆ ಈ ಪ್ರಾಣಿಗಳು ತಿನ್ನುವುದಿಲ್ಲ. ಹೀಗಾಗಿ ರೈತರು ಈ ಚಿಗುರು ಹಂತದಲ್ಲಿ ಹಗಲು ರಾತ್ರಿ ಎನ್ನದೇ ಜಿಂಕೆ, ಕೃಷ್ಣಮೃಗಗಳನ್ನು ಓಡಿಸುವ ಕೆಲಸದಲ್ಲಿ ತೊಡಗಬೇಕಿದೆ.

ಬೆದರಿಸದ ಗೊಂಬೆ: ಇನ್ನು ಕೆಲವರು ಜಿಂಕೆ ಹಾಗೂ ಕೃಷ್ಣಮೃಗಗಳ ಹಾವಳಿ ನಿಯಂತ್ರಿಸಲು ಹೊಲಗಳಲ್ಲಿ ಅಲ್ಲಲ್ಲಿ ಬೆದರುಗೊಂಬೆಗಳನ್ನು ನಿಲ್ಲಿಸುತ್ತಾರೆ. ಮನುಷ್ಯ ನಿಂತಂತೆ ಗೋಚರಿಸುವುದರಿಂದ ಸ್ವಲ್ಪಮಟ್ಟಿನ ಜಿಂಕೆಗಳ ಹಾವಳಿ ತಪ್ಪುತ್ತದೆ. ಆದರೆ, ಮನುಷ್ಯನ ವಾಸನೆ ಬಾರದೆ, ಗೊಂಬೆಗಳ ಮೇಲೆ ಪಕ್ಷಿಗಳು ಕೂತಿದ್ದನ್ನು ಕಂಡರೆ ಜಾಣ ಜಿಂಕೆಗಳು ನಿರ್ಭಯವಾಗಿ ಆ ಜಮೀನಿಗೆ ದಾಳಿಯಿಟ್ಟು ಚಿಗುರು ಬೆಳೆ ಮೇಯುತ್ತವೆ.

ಅರಣ್ಯರೋದನ: ಈ ಭಾಗದಲ್ಲಿ ಪ್ರತಿವರ್ಷ ಜಿಂಕೆ ಹಾವಳಿ ಮಾಮೂಲು. ನೂರಾರು ಜಿಂಕೆಗಳು ನೂರಾರು ಎಕರೆ ಜಮೀನಿನಲ್ಲಿರು ಚಿಗುರು ಬೆಳೆ ಹಾನಿ ಮಾಡುತ್ತವೆ. ಜಿಂಕೆಗಳನ್ನು ಹಿಡಿದು ರಾಣಿಬೆನ್ನೂರು ಹತ್ತಿರ ಇರುವ ಕೃಷ್ಣಮೃಗಧಾಮಕ್ಕೆ ಸಾಗಿಸಬೇಕು. ತನ್ಮೂಲಕ ರೈತರ ಬೆಳೆ ರಕ್ಷಣೆಗೆ ಸಹಕರಿಸಬೇಕು ಎಂದು ರೈತರು ಹತ್ತಾರು ಬಾರಿ ಅರಣ್ಯಾಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನ ಮಾತ್ರ ಶೂನ್ಯ. ಮನವಿ, ಪ್ರತಿಭಟನೆ, ರಸ್ತೆತಡೆಗೆ ಕಿವಿಗೊಡದ ಅರಣ್ಯ ಇಲಾಖೆ ಜಾಣಕಿವುಡು ಮೆರೆಯುತ್ತಿದ್ದರೆ ರೈತರದ್ದು ಅಕ್ಷರಶಃ ಅರಣ್ಯರೋದನವಾಗಿದೆ.

 

ಸರ್ಕಾರಕ್ಕೆ ಪ್ರಸ್ತಾವನೆ:

ಇಲಾಖೆಯಲ್ಲಿ ಶೇ.50ರ ಸಹಾಯಧನದಲ್ಲಿ ತಂತಿಬೇಲಿ ಹಾಕಿಕೊಳ್ಳಲು ಅವಕಾಶವಿದೆ. ಆದರೆ, ಯಾವ ರೈತರೂ ಹಣ ಖರ್ಚು ಮಾಡಿ ತಂತಿ ಬೇಲಿ ಹಾಕಿಕೊಳ್ಳಲು ಮುಂದಾಗುತ್ತಿಲ್ಲ. ಹೀಗಾಗಿ ಆನೆ ಕಾರಿಡಾರ್‌ ಮಾದರಿಯಲ್ಲಿ ಜಿಂಕೆಗಳಿಗೂ ಪೂರ್ಣ ಪ್ರಮಾಣದಲ್ಲಿ ಸರ್ಕಾರವೇ ಜಿಂಕೆ ಇರುವ ಪ್ರದೇಶಕ್ಕೆ ಬೇಲಿ ಹಾಕುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. •ಅರಣ್ಯ ಸಂರಕ್ಷಣಾಧಿಕಾರಿ
ಅರಣ್ಯ ಇಲಾಖೆ ನಿರ್ಲಕ್ಶ್ಯ:

ಸಕಾಲಕ್ಕೆ ಮಳೆಯಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಇನ್ನು ತಡವಾಗಿಯಾದರೂ ಒಂದಿಷ್ಟು ಮಳೆಯಾಗುತ್ತಿದ್ದು ಅದನ್ನು ನಂಬಿ ಬಿತ್ತನೆ ಮಾಡಿದರೆ ಜಿಂಕೆಗಳ ಕಾಟ ರೈತರನ್ನು ಕಾಡುತ್ತಿದೆ. ಬೆಳೆ ಮೊಳಕೆಯೊಡುವ ಸಂದರ್ಭದಲ್ಲಿಯೇ ಜಿಂಕೆ. ಕೃಷ್ಣಮೃಗ, ಕಾಡುಹಂದಿ ತಿಂದು ಹಾನಿಯನ್ನುಂಟು ಮಾಡಿದರೆ ರೈತರು ಇನ್ನಷ್ಟು ತೀವ್ರ ತೊಂದರೆಗೊಳಗಾಗುತ್ತಾರೆ. ಆದ್ದರಿಂದ ಜಿಂಕೆಗಳನ್ನು ನಿಯಂತ್ರಿಸಲು ಸಾಕಷ್ಟು ಹೋರಾಟ, ಮನವಿ ಮಾಡಿದ್ದರೂ ಅರಣ್ಯ ಇಲಾಖೆ ಮೌನವಹಿಸಿರುವುದು ಖೇದಕರ ಸಂಗತಿ.•ರಾಮಣ್ಣ ಕೆಂಚಳ್ಳೇರ, ರೈತ ಮುಖಂಡ
•ಎಚ್.ಕೆ. ನಟರಾಜ

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ

Lok Sabha Election; ಸ್ಟಾರ್‌ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ

ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ

ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ

ಬೃಹತ್‌ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು

ಬೃಹತ್‌ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು

Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ

Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ

Lok Sabha Elections; ಹಾವೇರಿ ಕಾಂಗ್ರೆಸ್‌ನಲ್ಲೂ ಭುಗಿಲೆದ್ದ ಆಕ್ರೋಶ

Lok Sabha Elections; ಹಾವೇರಿ ಕಾಂಗ್ರೆಸ್‌ನಲ್ಲೂ ಭುಗಿಲೆದ್ದ ಆಕ್ರೋಶ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.