ಹೋಳಿಗೆ ಫೈಬರ್‌ ಹಲಿಗೆ ಹಾವಳಿ


Team Udayavani, Mar 19, 2019, 9:48 AM IST

have.jpg

ಹಾವೇರಿ: ಈ ಮೊದಲು ಹೋಳಿ ಸಮೀಪಿಸುತ್ತಿದ್ದಂತೆ ಎಲ್ಲೆಡೆ “ಡಂಣ್‌ ಡಂಣಕ್ಕ, ಜಕ್ಕಣಕ್ಕ ಡಂಡಣಕ್ಕ ಜಕ್ಕಣಕ್ಕ..’ ಎಂಬ ಶಬ್ದ ಲಯಬದ್ಧವಾಗಿ ಎಲ್ಲೆಡೆ ಮೊಳಗುತ್ತಿತ್ತು. ಕೇಳುಗರ ಕಿವಿಗೆ ಚರ್ಮವಾದ್ಯದ ತರಂಗಗಳು ಮೈನವಿರೇಳಿಸುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಚರ್ಮದ ಹಲಿಗೆ ಸಂಪೂರ್ಣ ತೆರೆಮರೆಗೆ ಸರಿದಿದ್ದು ಇದರ ಜಾಗದಲ್ಲಿ ಫೈಬರ್‌ ಹಲಿಗೆ ಕಾಲಿಟ್ಟಿದೆ. ಫೈಬರ್‌ ಹಲಿಗೆ ಹೊರಹೊಮ್ಮುವ ಕರ್ಕಶ ಶಬ್ದ ಕಿವಿಗಡಚಿಕ್ಕುವ ರೀತಿಯ ಅಪ್ಪಳಿಸುವಂತಿದೆ.

ಸಾಂಪ್ರದಾಯಿಕ ಆಚರಣೆಯಲ್ಲೊಂದಾದ ಹೋಳಿ ಹಬ್ಬದ ಸಂದರ್ಭದಲ್ಲಿ ಕೇಳಬಹುದಾಗಿದ್ದ ಹಲಿಗೆ ನಿನಾದ ಮರೆಯಾಗಿದೆ. ಫೈಬರ್‌ ನಿರ್ಮಿತ ಹಲಿಗೆಯ ಬಡಿತ ಎಲ್ಲೆಡೆ ಕೇಳುತ್ತಿತ್ತು. ಮನಸ್ಸಿಗೆ ಮುದ ನೀಡುವ ಬದಲಾಗಿದೆ. ತಲೆನೋವು ತರುವಂತಾಗಿದ್ದು ಇದು ಆಧುನೀಕರಣ ತಂದ ಅದ್ವಾನಗಳಲ್ಲೊಂದಾಗಿದೆ. 

ಹೋಳಿ ಹುಣ್ಣಿಮೆ 15 ದಿನಗಳು ಇರುವಾಗಲೇ ಓಣಿ ಓಣಿಗಳಲ್ಲಿ ಯುವಕರಾದಿಯಾಗಿ ಪುರುಷರೆಲ್ಲರೂ ಗುಂಪು ಕಟ್ಟಿಕೊಂಡು ಬೆಂಕಿ ಹಾಕಿ ಚರ್ಮದ ಹಲಿಗೆ ಬಡಿತಕ್ಕೆ, ಲಯಕ್ಕೆ ಹೊಂದಿಕೊಳ್ಳುವಂತೆ ಕಾಯಿಸುತ್ತಿದ್ದರು. ಹಲಿಗೆ ಕಾಯಿಸುತ್ತ ಕಾಯಿಸುತ್ತ ಬಡಿಯುವ ಹಲಿಗೆ “ಡಂ.. ಡಂ..’ ಎಂಬ ಘಂಟೆಯ ರೀತಿಯಲ್ಲಿ ತರಂಗಳಲ್ಲಿ ಹೊರಹೊಮ್ಮಿಸುವ ಮೂಲಕ ಕೇಳುಗರ ಕಿವಿ ತಂಪಾಗಿಸುತ್ತಿತ್ತು.
 
ಆದರೆ, ಈಗ ಕಾಲ ಬದಲಾಗಿದೆ. ಈಗಲೂ ಹೋಳಿ ಬಂತೆಂದರೆ ಓಣಿ ಓಣಿಗಳಲ್ಲಿ ಚಿಕ್ಕಮಕ್ಕಳಾದಿಯಾಗಿ ದೊಡ್ಡವರವರೆಗೂ ಹಲಿಗೆ ಹಿಡಿದು ಬಡಬಡ ಬಡಿಯುತ್ತಿರುತ್ತಾರೆ. ಅವರು ಎಷ್ಟೇ ಬಡಿದರೂ ಅಲ್ಲಿಂದ ಹೊರಹೊಮ್ಮುವುದು ತರಂಗಗಳನ್ನೊಳಗೊಂಡ ಇಂಪಾದ ಶಬ್ಧವಂತೂ ಅಲ್ಲ.
 
ಆಧುನಿಕ ಸಮಾಜಕ್ಕೆ ಲಗ್ಗೆ ಇಟ್ಟಿರುವ ಫೈಬರ್‌ ಹಲಿಗೆಗಳ ಕರ್ಕಶ ಶಬ್ಧದ ಎದುರು ತರಂಗಗಳ ಸುಲಲಿತ ಶಬ್ಧ ಹೊರಹೊಮ್ಮಿಸುವ ಚರ್ಮದ ಹಲಿಗೆಗಳು ಕಾಲ್ಕಿತ್ತಿವೆ. ಹೀಗಾಗಿ ಹೋಳಿ ಎಂದರೆ ಅನೇಕರಿಗೆ ಕರ್ಕಶ ಶಬ್ಧ ಕೇಳುವ ಹಿಂಸೆ ಅನುಭವ ಆಗುತ್ತದೆ.

ಹೋಳಿ ಹಬ್ಬದಲ್ಲಿ ಓಕುಳಿಗೆ ಮೆರಗು ನೀಡುವ ಚರ್ಮದ ಹಲಿಗೆಯ ತಾಳಕ್ಕೆ ಹುಲಿವೇಷ, ಇತರ ಮುಖವಾಡ ಧರಿ ಕುಣಿಯುವುದು ವಾಡಿಕೆ. ಹಿಂದಿನ ಕಾಲದಲ್ಲಿ ಅಹೋರಾತ್ರಿ ಹಲಿಗೆಯನ್ನು ಬಾರಿಸುವ ಸ್ಪರ್ಧೆ, ಹೋಳಿ ಹಬ್ಬದ ಪದ ಹೇಳುವ ಸ್ಪರ್ಧೆ ನಡೆಯುತ್ತಿದ್ದವು. ಆಧುನಿಕತೆ ಬಿರುಗಾಳಿಗೆ ಸಿಲುಕಿ ಫೈಬರ್‌ ಹಲಿಗೆ ಭರಾಟೆಯಲ್ಲಿ ಸ್ಪರ್ಧೆ ಏರ್ಪಡಿಸಿದರೂ ಅದನ್ನು ಕೇಳುವ ಗಟ್ಟಿ ಕಿವಿಯ ಜನರೇ ಇಲ್ಲದಂತಾಗಿದೆ.
 
ಫೈಬರ್‌ ಹಲಿಗೆ ಹಾವಳಿ: ಕಳೆದ 4-5 ವರ್ಷಗಳಿಂದ ಮಾರುಕಟ್ಟೆಗೆ ಮಹಾರಾಷ್ಟ್ರ, ಬೆಳಗಾವಿ, ಮಿರಜ್‌ ಹಾಗೂ ಸಾಂಗ್ಲಿಯ ಫೈಬರ್‌ ಹಲಿಗೆ ಲಗ್ಗೆ ಇಟ್ಟಿವೆ. ನೋಡಲು ಬಿಳಿಯ ಸುಂದರಿಯಂತೆ ಕಾಣುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿವೆ. ಆದರೆ, ಅದನ್ನು ಬಾರಿಸಿದಾಗ ಹೊರ-ಹೊಮ್ಮುವ ಕರ್ಕಶ ಶಬ್ಧ ಕರ್ಣಗಳಿಗೆ ಸುಡು ಎಣ್ಣೆ ಹಾಕಿದಂತಾಗುತ್ತದೆ. ಆದರೂ ಕಡಿಮೆ ಬೆಲೆ, ನಿರ್ವಹಣೆ ಇಲ್ಲದ ಸುಲಭ ಮಾರ್ಗಿಗಳಿಗೆ ಫೈಬರ್‌ ಹಲಿಗೆ ಹೆಚ್ಚು ಆಕರ್ಷಿಸುತ್ತಿವೆ. 

ಚರ್ಮ ಹಲಿಗೆ ತಯಾರಿಕರ ಬದುಕು ದುಸ್ತರ: ಹಿಂದೆ ಹೋಳಿ ಹಬ್ಬ ತಿಂಗಳು ಇರುವ ಮುಂಚೆಯೇ ಹಲಿಗೆ ತಯಾರಿಸುವವರಿಗೆ ಮುಂಗಡ ಹಣ ಕೊಟ್ಟು ಇಂತಿಷ್ಟು ಹಲಿಗೆ ತಯಾರಿಸಿ ಕೊಡಿ ಎಂದು ಹಲಿಗೆ ತಯಾರಕರ ಮನೆ ಬಾಗಿಲಿಗೆ ಹೋಗುತ್ತಿದ್ದರು. ಆಗ ತಮಟೆ, ರಣಹಲಿಗೆ, ಕೈಹಲಿಗೆ ಸೇರಿದಂತೆ ಮಕ್ಕಳಿಂದ ಹಿಡಿದು ದೊಡ್ಡವರ ಬಾರಿಸುವ ಹಲಿಗೆ ತಯಾರಿಕೆಯಲ್ಲಿ ಹಿಗ್ಗಿನಿಂದ ತೊಡಗುತ್ತಿದ್ದರು.

ಕಾಲಚಕ್ರದ ಸುಳಿಗೆ ಸಿಲುಕಿ ಫೈಬರ್‌ ಹಲಿಗೆಯಿಂದ ವಂಶಪರಂಪರೆ ಚರ್ಮದ ತಯಾರಿಸುವ ಕುಲಕಸಬು ನಂಬಿದವರ ಬದುಕು ಬೀದಿಗೆ ಬಂದಿದೆ. ಫೈಬರ್‌ ಹಲಿಗೆ ಮೇಲಿನ ವ್ಯಾಮೋಹ ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಚರ್ಮದ ಹಲಿಗೆಯನ್ನು ವಸ್ತು ಸಂಗ್ರಹಾಲಯದಲ್ಲಿ ನೋಡುವ ಪ್ರಸಂಗ ಬಂದರೂ ಆಶ್ಚರ್ಯಪಡಬೇಕಿಲ್ಲ ಚರ್ಮದ ಹಲಿಗೆ ಕೇಳುವವರೇ ಇಲ್ಲ ಚರ್ಮದ ಹಲಿಗೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಕಾಯಿಸಬೇಕು. ಹದಗೊಳಿಸಿ ಬಡಿತ ಬಡಿಯಬೇಕು. ಇಷ್ಟೆಲ್ಲ
ತೊಂದರೆ ಇಲ್ಲದ ಫೈಬರ್‌ ಹಲಿಗೆ ಕಡೆ ಜನರು ವಾಲಿದ್ದರಿಂದ ಚರ್ಮದ ಹಲಿಗೆ ಕೇಳುವವರೇ ಇಲ್ಲದಂತಾಗಿದೆ. 8-10 ವರ್ಷಗಳ ಹಿಂದೆ ಮೊದಲು ಪ್ರತಿ ಹಬ್ಬಕ್ಕೆ ಸಣ್ಣ ಹಾಗೂ ದೊಡ್ಡ ಹಲಿಗೆ ಸೇರಿ 500ಕ್ಕೂ ಹೆಚ್ಚು ಹಲಿಗೆ ಮಾರಾಟ ಮಾಡುತ್ತಿದ್ದೇವು. ಈಗ ವ್ಯಾಪಾರ, ತಯಾರಿಕೆ ಎರಡೂ ನಿಂತಿದೆ.
 ಚನ್ನಯ್ಯ, ಚರ್ಮದ ಹಲಿಗೆ ತಯಾರಕ.

ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ

ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ

ಬಸವರಾಜ ಬೊಮ್ಮಾಯಿ

LokSabha Election; ಕಾಂಗ್ರೆಸ್ ನ ಬಹುಮತ ಹೇಳಿಕೆಯೇ ಹಾಸ್ಯಾಸ್ಪದ: ಬಸವರಾಜ ಬೊಮ್ಮಾಯಿ

Haveri; ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ

Haveri; ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.