ಅಗಲಿದ ಯೋಧನ ಅಂತ್ಯಕ್ರಿಯೆ
Team Udayavani, Feb 8, 2021, 6:54 PM IST
ಹಿರೇಕೆರೂರ: ಹೃದಯಾಘಾತದಿಂದ ಅಗಲಿದ ಯೋಧ ಮಂಜುನಾಥ ಫಕ್ಕೀರಪ್ಪ ಬಿಲ್ಲಳ್ಳೇರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ರವಿವಾರ ತಾಲೂಕಿನ ಹೊಲಬಿಕೊಂಡ ಗ್ರಾಮದಲ್ಲಿ ನೆರವೇರಿತು.
ಕೃಷಿ ಸಚಿವ ಬಿ.ಸಿ. ಪಾಟೀಲ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ತಹಶೀಲ್ದಾರ್ ಕೆ.ಎ. ಉಮಾ ಮೃತ ಯೋಧನ ಅಂತಿಮ ದರ್ಶನ ಪಡೆದರು. ಹಾವೇರಿ ಸಶಸ್ತ್ರ ಮೀಸಲು ಪಡೆ ಅಧಿಕಾರಿಗಳು ಮೃತ ಯೋಧನಿಗೆ ಹೂಗುತ್ಛ ಇರಿಸಿ ಅಂತಿಮ ನಮನ ಸಲ್ಲಿಸಿ ನಂತರ ಕುಶಾಲತೋಪು ಹಾರಿಸುವ ಮೂಲಕ ಗೌರವ ಸಲ್ಲಿಸಿದರು. ಯೋಧನ ಕುಂಟುಂಬದವರು ಹಾಗೂ ಬಂಧುಗಳು ಹೊಲಬಿಕೊಂಡ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.