ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿಹಕ್ಕು
Team Udayavani, Oct 14, 2021, 3:27 PM IST
ಹಾವೇರಿ: ಕಾನೂನಿನಡಿ ಎಲ್ಲರೂ ಸಮಾನರಾಗಿದ್ದು, ಹೆಣ್ಣು ಮಕ್ಕಳು ಸಮಾನ ಆಸ್ತಿಹಕ್ಕು ಪಡೆಯಲು ಅರ್ಹರಾಗಿದ್ದಾರೆ ಎಂದುಪೆನಲ್ ವಕೀಲರಾದ ಮಂಗಳಾ ಕಮ್ಮಾರ ಹೇಳಿದರು.
ತಾಲೂಕಿನ ಮರೋಳ, ಹೊಸರಿತ್ತಿ, ಸಂಗೂರ,ಕೂಳೇನೂರ ಗ್ರಾಮ ಪಂಚಾಯಿತಿಗಳಲ್ಲಿಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ, ಜಿಲ್ಲಾನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕಪ್ರಚಾರ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದತ್ತು ಕಾಯ್ದೆಯಡಿ ಮಕ್ಕಳನ್ನು ದತ್ತುಪಡೆಯಬೇಕಾದರೆ ಗಂಡನ ಮತ್ತು ಹೆಂಡತಿಯಪರಸ್ಪರ ಸಹಮತ ಹಾಗೂ ಒಪ್ಪಿಗೆ ಬೇಕು.ಇಲ್ಲದಿದ್ದರೆ ಮಕ್ಕಳನ್ನು ದತ್ತು ಪಡೆಯಲುಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಪೆನಲ್ ವಕೀಲರಾದ ಎನ್.ಎನ್.ಡಿಳ್ಳೆಪ್ಪನವರಮಾತನಾಡಿ, ಜಾತಿ, ಮತೀಯ ಗಲಭೆ, ಮಹಿಳಾಮತ್ತು ಮಕ್ಕಳ ದೌರ್ಜನ್ಯ ಪ್ರಕರಣಗಳಲ್ಲಿನೊಂದವರಿಗೆ ಕಾನೂನು ಸೇವಾ ಪ್ರಾ ಧಿಕಾರಉಚಿತವಾಗಿ ಕಾನೂನು ನೆರವು ಹಾಗೂ ಸಲಹೆನೀಡಲಿದೆ.
ವಾರ್ಷಿಕ ಆದಾಯ ಒಂದು ಲಕ್ಷರೂ. ಮಿತಿಯೊಳಗಿನ ಕುಟುಂಬಕ್ಕೆ ಕಾನೂನುಸೇವಾ ಪ್ರಾಧಿ ಕಾರದಿಂದ ಉಚಿತವಾಗಿ ತಮ್ಮಪರ ವಕಾಲತ್ತು ವಹಿಸಲು ವಕೀಲರ ನೆರವುಒದಗಿಸಲಾಗುವುದು ಎಂದರು.
ಜಿಲ್ಲಾ ಪೆನಲ್ ವಕೀಲರಾದ ಎನ್.ಸಿ.ಕಾಯಕದ ಹಾಗೂ ಜಿ.ಕೆ.ನಾಗನೂರಮಾತನಾಡಿ, ಆಧುನಿಕ ತಂತ್ರಜ್ಞಾನಹೆಚ್ಚು ಬಳಕೆಯಿಂದ ಮಕ್ಕಳ ಮೇಲೆ ಕೆಟ್ಟಪರಿಣಾಮಗಳು ಉಂಟಾಗುತ್ತಿವೆ. ಮೊಬೈಲ್,ಕಂಪ್ಯೂಟರ್ ಬಳಕೆ ಸಂದರ್ಭದಲ್ಲಿ ಪಾಲಕರುಮಕ್ಕಳ ಮೇಲೆ ನಿಗಾ ವಹಿಸಬೇಕೆಂದು ಸಲಹೆನೀಡಿದರು.ಅಪ್ರಾಪ್ತ ಹೆಣ್ಣು ಮಗುವಿನ ಮೇಲೆಅತ್ಯಾಚಾರ ಎಸಗಿದ ಅಪರಾ ಗಳಿಗೆ ಪೋಕ್ಸೋ ಕಾಯ್ದೆಯಡಿ ಕಠಿಣ ಶಿಕ್ಷೆ ನೀಡಲಾಗುವುದುಎಂದು ಹೇಳಿದರು.
ಪೆನಲ್ ವಕೀಲರಾದ ಎಂ.ಸಿ. ಭರಮಣ್ಣಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂನ್ಯಾಯ ದೊರೆಯಬೇಕು. ಕಾನೂನಿನ ಅರಿವುಇಲ್ಲದಿದ್ದಲ್ಲಿ ಸರಿಯಾದ ಮಾಹಿತಿ ಪಡೆಯಲು ಆಗುವುದಿಲ್ಲ.
ಲೋಕ ಅದಾಲತ್ನಲ್ಲಿ ತಮ್ಮವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕಬಗೆಹರಿಸಿಕೊಳ್ಳಬಹುದು ಎಂದು ಸಲಹೆನೀಡಿದರು.ಪೆನಲ್ ವಕೀಲರಾದ ಪಿ.ಬಿ.ಹೊಳಗಿ ಅವರುಸಾಮಾನ್ಯ ಕಾನೂನು ಅರಿವು, ಜನನ-ಮರಣ,ಮೋಟರು ಕಾಯ್ದೆ ಕುರಿತು ಮಾತನಾಡಿ,ವಾಹನ ಚಾಲನಾ ಪರವಾನಗಿ ಇಲ್ಲದೆ ವಾಹನಓಡಿಸುವುದು ಕಾನೂನಿನಲ್ಲಿ ಅಪರಾಧವಾಗಿದೆ.ವಾಹನಗಳ ಖರೀದಿಗೆ ಸಂಬಂಧಿ ಸಿದದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.
ಮೋಟಾರು ವಿಮಾ ಪಾಲಿಸಿ ಮಾಡಿಸಬೇಕು.ವಾಹನದ ಜೊತೆಗೆ ನೋಂದಣಿ ದಾಖಲೆಗಳನ್ನುಹೊಂದಿರಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಹೊಸರಿತ್ತಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಭಾರತಿ ಹಳ್ಳಿಕೆರೆ,ಉಪಾಧ್ಯಕ್ಷ ಶಂಭಣ್ಣ ಗೋಪಾಳಿ, ಮರೊಳಗ್ರಾಪಂ ಉಪಾಧ್ಯಕ್ಷೆ ಸುಮಂಗಲಾ ಇ.ಟಿ.,ಸಂಗೂರ ಗ್ರಾಪಂ ಅಧ್ಯಕ್ಷೆ ರಜಿಯಾ ಬೇಗಂಜಿಗಳೂರ, ಉಪಾಧ್ಯಕ್ಷೆ ಮಂಜವ್ವ ಬಂಡಿವಡ್ಡರ,ಕುಳೇನೂರ ಗ್ರಾಪಂ ಅಧ್ಯಕ್ಷೆ ನೀಲವ್ವ ನಾಗೇಂದ್ರಪ್ಪಕೆಂಗೊಂಡ, ಉಪಾಧ್ಯಕ್ಷ ಸಿದ್ದಪ್ಪ ಅಣಜಪ್ಪಲಮಾಣಿ ಹಾಗೂ ಮರೋಳ ಪಿಡಿಒ ಬಸವರೆಡ್ಡಿಮಾಡಳ್ಳಿ, ಹೊಸರಿತ್ತಿ ಪಿಡಿಒ ದಾವುಲ್ ಮಲ್ಲಿಕ್ಕಮಗಾಲ್, ಸಂಗೂರ ಪಿಡಿಒ ಜರಿನಾ ಬೇಗಂ,ಕುಳೇನೂರ ಗ್ರಾಪಂ ಕಾರ್ಯದರ್ಶಿ ಎಂ.ಎಂ.ಹೊಟ್ಟಿ ಫಕ್ಕಣ್ಣನವರ, ಗ್ರಾಪಂ ಸದಸ್ಯರು, ಆಶಾಹಾಗೂ ಅಂಗನವಾಡಿ ಕಾರ್ಯಕರ್ತೆಯರು,ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri: ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ
Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು
Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು
Ls polls: ರಾಜ್ಯದಲ್ಲಿ ನಾವು 18 -20 ಸೀಟ್ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ