ಕಲಾವಿದ ಶಂಕರಗೆ ಪ್ರಶಸ್ತಿಯ ಗರಿ


Team Udayavani, Dec 28, 2018, 5:14 PM IST

28-december-17.jpg

ಹಾವೇರಿ: ಉತ್ತರ ಕರ್ನಾಟಕದ ಗಂಡುಕಲೆ ಎನಿಸಿದ “ದೊಡ್ಡಾಟ’ದಲ್ಲಿ ಪಾತ್ರದ ಗತ್ತಿಗೆ ತಕ್ಕಂತೆ ಮೆರಗು ನೀಡುವುದು ಪಾತ್ರಧಾರಿಯ ವೇಷಭೂಷಣ. ಅಪರೂಪದ ಈ ಪ್ರಸಾದನ ಕಲೆಯಲ್ಲಿ ಕೌಶಲ್ಯ ಹೊಂದಿರುವ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಶಂಕರ ಅರ್ಕಸಾಲಿಯವರಿಗೆ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಸಕ್ತ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ದೊಡ್ಡಾಟದ ಪ್ರಸಂಗಗಳಲ್ಲಿ ಬರುವ ಪಾತ್ರಗಳ ಘನತೆ, ಅಂತಸ್ತಿಗೆ ತಕ್ಕಂತೆ ವೇಷ ಭೂಷಣಗನ್ನು ಸಿದ್ಧಪಡಿಸುತ್ತಾರೆ. ರಾಜರು, ಮಹಾರಾಜರು, ರಾಕ್ಷಸರು, ಯಕ್ಷ -ಗಂಧರ್ವ, ಕಿನ್ನರಿ, ಕಿಂಪುರುಷರು ಪ್ರಸಂಗಗಳಲ್ಲಿ ಬರುತ್ತಾರೆ. ಅವರಿಗೆ ತಕ್ಕಂತೆ ವೇಷ ಭೂಷಣ ಸಿದ್ಧಪಡಿಸುವುದು ಶಂಕರ ಅರ್ಕಸಾಲಿಯವರಿಗೆ ಕರಗತವಾಗಿದೆ.

ದೊಡ್ಡಾಟದ ಜತೆಗೆ ಸಣ್ಣಾಟದ ಪಾತ್ರಧಾರಿಗಳ ವೇಷಭೂಷಣ ತಯಾರಿಕೆಯ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅರ್ಕಸಾಲಿ, ಸಿದ್ಧಪಡಿಸಿದ ವೇಷ ಭೂಷಣಗಳು, ರಾಜ್ಯ, ದೇಶವಷ್ಟೇ ಅಲ್ಲ ಬೆಲ್ಜಿಯಂ ದೇಶದ ರಂಗಭೂಮಿ ವಿದ್ಯಾರ್ಥಿಗಳ ಪ್ರಾತ್ಯಕ್ಷಿತೆಗೂ ಬಳಕೆಯಾಗಿ ಉತ್ತರ ಕರ್ನಾಟಕದ ಹೆಮ್ಮೆ ಹೆಚ್ಚಿಸಿವೆ. ಶಂಕರ ಅವರು ಬಾಲ್ಯದಿಂದಲೇ ಈ ಕೌಶಲ್ಯವನ್ನು ಕರಗತ ಮಾಡಿಕೊಂಡಿದ್ದಾರೆ. ಹಿರಿಯ ಕಲಾವಿದ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅಜ್ಜ ರಾಮಚಂದ್ರಪ್ಪ ಅರ್ಕಸಾಲಿ ಅವರ ಗರಡಿಯಲ್ಲಿ ತರಬೇತಿ ಪಡೆದಿದ್ದು, ಕಳೆದ 25 ವರ್ಷಗಳಿಂದ ಪ್ರಸಾದನ ಕಲೆಯನ್ನೇ ತಮ್ಮ ಬದುಕಿಗೆ ಆಧಾರವಾಗಿಸಿಕೊಂಡಿದ್ದಾರೆ.

ವೇಷಭೂಷಣ ಸರಕು: ಒಬ್ಬ ಪುರುಷ ವೇಷಧಾರಿಗೆ ಭುಜಕಿರೀಟ, ಎದೆಪದಕ, ಕಂಠಹಾರ, ವೀರಗಾಸೆ (ಸೊಂಟಪಟ್ಟಿ) ನಾಗರಪಣಿ, ಚಕ್ರ, ಕರ್ಣಕುಂಡಲ, ತಲೆ ಕಿರೀಟ, ಮುಂಗಕಟ್ಟು, ಆಭರಣಗಳು ಮತ್ತು ಉಡಿಗೆಗಾಗಿ 16 ಮೊಳ ಉದ್ದದ ಗಟ್ಟಿದಡಿಯ ಕರಿಸೀರೆ, ಬಣ್ಣದ ನಿಲುವಂಗಿ, ದೋತ್ರ, ದಡಿದೋತ್ರ, ಉಂಡಿರುಮಾಲು ಬೇಕಾಗುತ್ತವೆ. ಇನ್ನು ಸ್ತ್ರೀ ವೇಷಧಾರಿಗೆ ಕಿರೀಟ, ಲೌಲಕ್‌, ಬಾಜುಬಂದ್‌, ನತ್ತು, ಟಿಕೀಸರ, ಸೊಂಟಪಟ್ಟಿ, ಬಳೇಕಟ್ಟು, ಆಭರಣ, 16 ಮೊಳ ಉದ್ದದ ಇಳಕಲ್‌ ಸೀರೆ(ಕಚ್ಚೆ ಸೀರೆ ಉಡಲು) ರವಿಕೆ, ಮೊದಲಾದ ವಸ್ತ್ರಗಳು ಬೇಕಾಗುತ್ತವೆ. ವಿವಿಧ ಪಾತ್ರಗಳಿಗೆ ತಕ್ಕಂತೆ ಈ ಸಾಮಗ್ರಿಗಳು ಸಂಖ್ಯೆ ಅಧಿಕವಾಗುತ್ತದೆ.

ಪುರುಷ, ಸ್ತ್ರೀ ಪಾತ್ರಧಾರಿ ವೇಷಭೂಷಣ ಸಿದ್ಧಪಡಿಸಲು 20 ದಿನಗಳು ಬೇಕು. ಅದಕ್ಕಾಗಿ ಕನಿಷ್ಟ 20 ಸಾವಿರ ಹಣ ಖರ್ಚು ಮಾಡಲಾಗುತ್ತದೆ. ಒಬ್ಬ ಪಾತ್ರಧಾರಿ ಸಿದ್ಧಗೊಳಿಸಲು ಅರ್ಧ ತಾಸು ಅವಧಿ 
ಬೇಕಾಗುತ್ತದೆ. ಸಿದ್ಧಪಡಿಸುವ ಅವಧಿ ಆಯಾ ಪಾತ್ರಧಾರಿಗೆ ತಕ್ಕಂತೆ ಹೆಚ್ಚು-ಕಡಿಮೆ ಆಗುತ್ತದೆ. ಇಷ್ಟೆಲ್ಲ ಸಿದ್ಧಪಡಿಸಿದ ಮೇಲೆಯೇ ಆ ಪಾತ್ರಧಾರಿಗೆ ನಿಜವಾದ ಜೀವಕಳೆ ತುಂಬಿಕೊಳ್ಳುತ್ತದೆ. ಇಂಥ ಅಪರೂಪದ ಪ್ರಸಾದನ ಕಲಾವಿದ ಶಂಕರ ಅರ್ಕಸಾಲಿ ಅವರಿಗೆ ಬಯಲಾಟ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಕಲಾವಿದರಲ್ಲಿ ಸಂತಸ ಮೂಡಿಸಿದೆ.

ಬಯಲಾಟ ಅಕಾಡೆಮಿ ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿ ತಂದಿದೆ. ದೊಡ್ಡಾಟ, ಸಣ್ಣಾಟದಂಥ ಕಲೆ ಉಳಿಸಲು ಕಲಾವಿದರು ಶ್ರಮಿಸಿದರೆ ಸಾಲದು ಜತೆಗೆ ಸಂಘ, ಸಂಸ್ಥೆಗಳು ಮತ್ತು ಸರ್ಕಾರಗಳು ಕಲಾವಿದರಿಗೆ, ವೇಷಭೂಷಣಗಳನ್ನು ಸಿದ್ಧಪಡಿಸಿ ಪಾತ್ರಗಳಿಗೆ ಜೀವಕಳೆ ತುಂಬುವ ಪ್ರಸಾದನ ಕಲಾವಿದರಿಗೆ ನೆರವು ನೀಡಬೇಕು. ಆಗ ಮಾತ್ರ ಪರಂಪರಾಗತವಾಗಿ ಬಂದಿರುವ ನಾಡಿನ ಕಲೆ ಉಳಿಸಿ, ಬೆಳಸಲು ಸಾಧ್ಯ.
. ಶಂಕರ ಅರ್ಕಸಾಲಿ,
ಪ್ರಸಾದನ ಕಲಾವಿದ

ಟಾಪ್ ನ್ಯೂಸ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ

ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ

ಬಸವರಾಜ ಬೊಮ್ಮಾಯಿ

LokSabha Election; ಕಾಂಗ್ರೆಸ್ ನ ಬಹುಮತ ಹೇಳಿಕೆಯೇ ಹಾಸ್ಯಾಸ್ಪದ: ಬಸವರಾಜ ಬೊಮ್ಮಾಯಿ

Haveri; ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ

Haveri; ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.