ಭೂ ಕುಸಿತ; ಮುಂದುವರಿದ ಅಧ್ಯಯನ


Team Udayavani, Nov 1, 2019, 2:37 PM IST

hv-tdy-1

ನರಗುಂದ: ದಶಕದಿಂದ ಸಾರ್ವಜನಿಕರ ನಿದ್ದೆಗೆಡಿಸಿದ ಅಂತರ್ಜಲ ಹೆಚ್ಚಳದಿಂದ ಉಂಟಾಗುತ್ತಿರುವ ಭೂ ಕುಸಿತಕ್ಕೆ ಕಾರಣ ಕಂಡು ಹಿಡಿಯಲು ಆಗಮಿಸಿದ ವಿಜ್ಞಾನಿಗಳ ತಂಡ 2 ದಿನಗಳಿಂದ ಅಧ್ಯಯನ ನಡೆಸಿದೆ.

ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಆದೇಶ ಮೇರೆಗೆ ಇಲಾಖೆ ನಿರ್ದೇಶನದೊಂದಿಗೆ ಭೂ ವಿಜ್ಞಾನಿ ಬಿ.ಜಿ. ದಿಲೀಪಕುಮಾರ ನೇತೃತ್ವದ ವಿಜ್ಞಾನಿಗಳ ತಂಡ 2ನೇ ದಿನ ಗುರುವಾರವೂ ಕುಡಿವ ನೀರಿನ ಜಲಾಶಯ ಕೆಂಪಗೆರಿ ದಂಡೆಯಲ್ಲಿದ್ದ ಕಲ್ಲೊಂದರ ಜಾಡು ಹಿಡಿದು ಹೋಗಿ ದೇಸಾಯಿ ಬಾವಿಯಿಂದ ಗುಡ್ಡದವರೆಗೆ ಅಧ್ಯಯನ ನಡೆಸಿದೆ.

ಕಲ್ಲೊಂದರ ಜಾಡು: ಗುಡ್ಡದ ವಾರೆಯಲ್ಲಿರುವ ಕೆಂಪಗೆರಿ ದಂಡೆಯಲ್ಲಿ ಕಂಡು ಬಂದ ಕಲ್ಲಿನ ಪಡೆಯೊಂದು ವಿಜ್ಞಾನಿಗಳ ಗಮನ ಸೆಳೆದಿದ್ದು, ಕೂಡಲೇ ಆ ಕಲ್ಲನ್ನು ತಪಾಸಿಸಿ ಅದರ ಜಾಡು ಹಿಡಿದು ದೇಸಾಯಿ ಬಾವಿ ಓಣಿಗೆ ತೆರಳಿ ಅಲ್ಲಿನ ಬಾವಿ ನೀರು ಖಾಲಿ ಮಾಡಿದ್ದರಿಂದ ಅಂತರ್ಜಲ ದಿಕ್ಕು ಪರಿಶೀಲನೆ ನಡೆಸಿದೆ. ಅಲ್ಲಿಂದ ಗುಡ್ಡದ ಮುಂಭಾಗ ವೆಂಕಟೇಶ್ವರ ದೇವಸ್ಥಾನ ಎದುರಿಗೆ ಗುಡ್ಡದ ವಾರೆಯಲ್ಲಿ ಕಲ್ಲಿನ ಪಡುವು ಪರಿಶೀಲಿಸಿತ್ತಲ್ಲದೇ, ಗುಡ್ಡದ ಕಲ್ಲುಗಳ ಪಡುವಿನ ಗುಣ ಲಕ್ಷಣ ಅವಲೋಕಿಸಿದೆ. ನಂತರ ಎರಡು ತಂಡಗಳಾಗಿ ಬೇರ್ಪಟ್ಟು ಎನ್‌ಬಿಸಿ ಕಾಲುವೆ ಮತ್ತು ಗುಡ್ಡ ಬದಿಗೆ ಮೇಲ್ಭಾಗದಲ್ಲಿ ಯಾತಾಳ ಸ್ವಾಮಿ ಗುಡಿ ಬಳಿ ತೆರಳಿ ಗುಡ್ಡದ ಇಳಿಜಾರು ಪ್ರದೇಶ ವೀಕ್ಷಿಸಿತು.

ಡೊಲೋರೇಟ್‌ ಕಲ್ಲು?: ವಿಜ್ಞಾನಿಗಳು ಗುರುತಿಸಿದಂತೆ ಕೆಂಪಗೆರಿ ದಂಡೆಯಲ್ಲಿ ಗೋಚರಿಸಿದ ಕಲ್ಲು ಡೊಲೋರೇಟ್‌ಎನ್ನಲಾಗಿದ್ದು, ವಿಶೇಷವಾಗಿ ಈ ಕಲ್ಲು ಬೆಲ್‌ ನಂತೆ ವಿಸ್ತಾರ ಹೊಂದಿದೆ. ಬೇರೆ ಕಲ್ಲಿನ ಮಧ್ಯ ಕೊರೆದು ಮುಂದೆ ಸಾಗಿರುತ್ತದೆ. ಈ ಕಲ್ಲು ಭೂಮಿಯೊಳಗೆ ತಡೆಗೋಡೆಯಂತೆ ನಿರ್ಮಾಣವಾಗಿ ಅಂತರ್ಜಲ ಒಂದು ಕಡೆಗೆ ತಡೆ ಹಿಡಿಯುತ್ತದೆ ಎನ್ನಲಾಗಿದೆ.

ಹಗೇವಿನಿಂದ ಸಿದ್ದೇಶ್ವರ ಗುಡಿವರೆಗೆ: ಬೆಳಗ್ಗೆ ಲಯನ್ಸ್‌ ಕನ್ನಡ ಮಾಧ್ಯಮ ಶಾಲೆ ಹಿಂಭಾಗ ಪುರಸಭೆ ನಿರ್ಮಿಸಿದ ತಡೆಗೋಡೆಯೊಂದನ್ನು ಅವಲೋಕಿಸಿದ ವಿಜ್ಞಾನಿಗಳು, ಅಲ್ಲಿ ಪದರಿನಿಂದ ಕೂಡಿದ ಕಲ್ಲೊಂದರ ಜಾಡು ಹಿಡಿದು ಗುಡ್ಡದ ಎತ್ತರ ಪ್ರದೇಶದಲ್ಲಿನ ಸಿದ್ದೇಶ್ವರ ದೇವಸ್ಥಾನವರೆಗೆ ತೆರಳಿ ಬಳಿಕ ಕಾಂಕ್ರೀಟ್‌ ರಸ್ತೆ ಮೂಲಕ ಪರಿಶೀಲನೆ ಮಾಡುತ್ತ ಕೆಳಗಿಳಿದರು. ಒಟ್ಟಾರೆ ಪಟ್ಟಣದಲ್ಲಿ ಭೂ ಕುಸಿತಕ್ಕೆ ಕಾರಣವಾದ ಅಂತರ್ಜಲ ಯಾವ ಭಾಗದಿಂದ ಪಟ್ಟಣದೊಳಗೆ ಪ್ರವೇಶಿಸುತ್ತದೆ ಎಂಬುದರ ಸಮಗ್ರ ಅಧ್ಯಯನ ನಡೆಸಿದರು. ದೇಸಾಯಿ ಬಾವಿಗೆ ಗುಡ್ಡದ ಕಡೆಗೆ ಉತ್ತರ ಭಾಗದಿಂದ ಅಂತರ್ಜಲ ಹರಿದು ಬರುತ್ತಿದೆ ಎಂದು ವಿಜ್ಞಾನಿಗಳ ತಂಡ ಅಭಿಪ್ರಾಯಪಟ್ಟಿದೆ ಎಂದು ಹೇಳಲಾಗಿದೆ.

 

-ಸಿದ್ಧಲಿಂಗಯ್ಯ ಮಣ್ಣೂರಮಠ

ಟಾಪ್ ನ್ಯೂಸ್

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ

Haveri: ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ

Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು

Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.