ಜಲಶಕ್ತಿ ಅಭಿಯಾನ ಯಶಸ್ಸಿಗೆ ಪ್ರತಿಯೊಬ್ಬರು ಕೈಜೋಡಿಸಲಿ
Team Udayavani, Sep 29, 2019, 11:54 AM IST
ಬ್ಯಾಡಗಿ: ಜಾಗತೀಕರಣದ ಬೆನ್ನತ್ತಿರುವ ಮಾನವ ಪರಿಸರ ಹಾಳು ಮಾಡಿ ಯಥೇಚ್ಚವಾಗಿ ನೀರು ಪೋಲು ಮಾಡುತ್ತಿದ್ದಾನೆ. ನೀರು ಇದ್ದರೆ ಮಾತ್ರ ಭೂಮಿಯ ಮೇಲೆ ಬದುಕು ಎಂಬುದನ್ನ ಮರೆತಿರುವಂತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಜಲಶಕ್ತಿ ಅಭಿಯಾನದ ಐಇಸಿ ಚಟುವಟಿಕೆಯಡಿ ಜಲಮೂಲ ರಕ್ಷಣೆಗೆ ಜಾಗೃತಿ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಲಶಕ್ತಿ ಅಭಿಯಾನದಂಥ ಯೋಜನೆಗಳು ಯಶಸ್ವಿಗೊಳ್ಳಲು ಸಾರ್ವಜನಿಕರ ಪಾತ್ರ ಅತ್ಯವಶ್ಯವಾಗಿದೆ. ನೀರಿನ ಸಂರಕ್ಷಣೆ ಕೇವಲ ಪುರಸಭೆ ಕೆಲಸ ಎಂದು ಕೈಕಟ್ಟಿಕೂರದೆ ಯೋಜನೆ ಹಿಂದಿನ ಮಹತ್ವ ಅರಿತು ನೀರು ಉಳಿಸಲು ಎಲ್ಲರೂ ಕಂಕಣಬದ್ಧರಾಗಬೇಕಿದೆ ಎಂದರು.
ಸೈಕಲ್ ಜಾಥಾ: ಜಲಶಕ್ತಿ ಅಭಿಯಾನದ ಕುರಿತಂತೆ ನಡೆದ ಸೈಕಲ್ ಜಾಥಾ ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ಜಲಮೂ ರಕ್ಷಣೆ ಹಾಗೂ ಮಳೆ ಕೊಯ್ಲಿನ ಕುರಿತು ಜಾಗೃತಿ ಮೂಡಿಸಲಾಯಿತು. ಪುರಸಭೆ ಸದಸ್ಯ ರಾಮಣ್ಣ ಕೋಡಿಹಳ್ಳಿ, ಪುರಸಭೆ ವ್ಯವಸ್ಥಾಪಕ ಎನ್.ಟಿ ಹೊಸಮನಿ, ಹರೀಶಕುಮಾರ ಕೆ., ಎಂ.ಟಿ. ಯಲ್ಲಣ್ಣನವರ, ತಬಸುಮಬಾನು, ಮಾಲತೇಶ ಹಳ್ಳಿ, ರಾಜು ಮಡಿವಾಳರ, ಎಂ.ಎಚ್.ಭೋವಿ, ಜಿ.ಎಸ್. ವರದ, ಕೆ.ವೀರಾಚಾರಿ, ಸೌಭಾಗ್ಯ ಬಳಿಗಾರ, ಕವಿತಾ ಸಂಕಣ್ಣನವರ, ರೋಹಿಣಿ ಗೊಲ್ಲರ ಪ್ರತಾತ ಗಂಗಮ್ಮನವರ, ಪರಶುರಾಮ ಹರಿಜನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri: ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ
Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು
Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು
Ls polls: ರಾಜ್ಯದಲ್ಲಿ ನಾವು 18 -20 ಸೀಟ್ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ