ಗ್ರಾಮೀಣ ಭಾಗದಲ್ಲಿ ಮಿನಿ ಎಟಿಎಂ ಸಹಕಾರಿ
Team Udayavani, Jul 26, 2019, 2:28 PM IST
ಶಿಗ್ಗಾವಿ: ವೆಬ್ಕಾಸ್ಟ್ ಮಿನಿ ಎಟಿಎಂ ಸೇವೆಗೆ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಚಾಲನೆ ನೀಡಿದರು.
ಶಿಗ್ಗಾವಿ: ಗ್ರಾಮೀಣ ಭಾಗದ ಜನತೆಗೆ ಹಣಕಾಸಿನ ವಹಿವಾಟಿಗೆ ವೆಬ್ಟಾಕ್ ಮಿನಿ ಎಟಿಎಂ ಸೇವೆ ಪ್ರಾರಂಭಿಸುವುದರಿಂದ ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲಕರವಾಗಲಿದೆ ಎಂದು ಪಟ್ಟಣದ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು. ಪಟ್ಟಣದ ರಾಜಶ್ರೀ ಚಲನಚಿತ್ರ ಮಂದಿರದ ಹತ್ತಿರವಿರುವ ಓಂಕಾರೇಶ್ವರ ಆಲೂರ ಅವರ ಮಳಿಗೆಯಲ್ಲಿ ವೆಬಾಟಾಕ್ ಮಿನಿ ಎಟಿಎಂ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರಕ್ಕಾಗಲಿ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ಬ್ಯಾಂಕಗಳ ಮೂಲಕ ಎಟಿಎಂ ವ್ಯವಸ್ಥೆ ನೀಡಲು ಸಾಧ್ಯವಿಲ್ಲ. ಇಂತಹ ಸಮಸ್ಯೆಗಳನ್ನು ಮನಗಂಡು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸಲು ವಿಭಿನ್ನ ಸೇವೆ ಚಾಲನೆಗೊಳಿಸಲಾಗಿದೆ. ಸಾರ್ವಜನಿಕರ ಸೇವೆ ಜತೆಗೆ ಆರ್ಥಿಕವಾಗಿ ಸಬಲೀಕರಣ ಹೊಂದುವಂತಾಗಲಿ ಎಂದು ಖಾಸಗಿ ಕಂಪನಿಗಳು ಮುಂದೆ ಬಂದಿದ್ದು, ಇದೊಂದು ಉತ್ತಮ ಬೆಳವಣಿಗೆ ಎಂದರು.
ಕ್ಲಸ್ಟರ್ ವ್ಯವಸ್ಥಾಪಕ ರಾಘವೇಂದ್ರ ಎಂ. ಮಾತನಾಡಿ, ಇಂದಿನಿಂದ ಶಿಗ್ಗಾವಿ ಪಟ್ಟಣದಲ್ಲಿ ವೆಬ್ಕಾಸ್ಟ್ ಮಿನಿ ಎಟಿಎಂ ಸೇವೆಯನ್ನು ತಾಲೂಕಿನ ಮಣಕಟ್ಟಿ, ಹಿರೇಬೆಂಡಿಗೇರಿ, ಮುಗಳಿ, ಬೆಳಗಲಿ, ಕೋಣನಕೇರಿ, ಕುನ್ನೂರ ಗ್ರಾಮಗಳಲ್ಲಿ ಪ್ರಾರಂಭ ಮಾಡಿದ್ದು, ಇದರ ಸದುಪಯೋಗವನ್ನು ಹೆಚ್ಚು ಹೆಚ್ಚು ಗ್ರಾಮೀಣ ಪ್ರದೇಶದ ಜನರು ಇದರ ಲಾಭ ಪಡೆದುಕೊಳ್ಳಬೇಕು ಮತ್ತು ಯಾವುದೇ ಬ್ಯಾಂಕಿನ ಡೆಬಿಟ್ ಕಾರ್ಡ್ನಿಂದ ಹಣ ಪಡೆದುಕೊಳ್ಳಬಹುದು ಹಾಗೂ ಯಾವುದೇ ಬ್ಯಾಂಕಿನ ಖಾತೆಗೆ ಸುಲಭವಾಗಿ ಹಣ ಜಮೆ ಸಹ ಮಾಡಬುದು ಎಂದು ಹೇಳಿದರು. ಕಂಪನಿ ಸಿಬ್ಬಂದಿ ಶಶಿಕಾಂತ ತಡಸ, ಓಂಕಾರೇಶ್ವರ ಆಲೂರ, ರಾಜಶೇಖರ ಅಂಕಲಕೋಟಿ, ಈರಪ್ಪ ಮಂಟಗಣಿ, ರಂಗನಾಥ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ