ನರಗುಂದದಲ್ಲಿ ಅಪರೂಪದ ಹಕ್ಕಿರೆಕ್ಕೆ ಚಿಟ್ಟೆ; ­ಬಹುದೂರ, ಎತ್ತರ ಹಾರುವ ಸಾಮರ್ಥ್ಯ

­ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಪತ್ತೆ; ­ಈ ಚಿಟ್ಟೆಯ ಜೀವಿತಾವಧಿ ಕೇವಲ 19 ದಿವಸ

Team Udayavani, Oct 4, 2022, 3:38 PM IST

14

ನರಗುಂದ: ಪಟ್ಟಣದ ಗುಡ್ಡದ ವಾರೆಯಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಪ್ಯಾಪಿಲಿಯೋನಿಡೇ ಕುಟುಂಬಕ್ಕೆ ಸೇರಿದ ಕಾಮನ್‌ ಬರ್ಡ್‌ವಿಂಗ್‌(ಟ್ರಾಯ್ಡ್ಸ್ ಹೆಲೆನಾ)ಅಪರೂಪದ ಚಿಟ್ಟೆ ಪತ್ತೆಯಾಗಿದೆ. ನಮ್ಮ ದೇಶದಲ್ಲಿ ಅತಿ ದೊಡ್ಡ ಚಿಟ್ಟೆಯ ಜಾತಿಯ ಚಿಟ್ಟೆಗಳಲ್ಲಿ ಇದು ಒಂದು. ಇದರ ರೆಕ್ಕೆಗಳು 140 ರಿಂದ170 ಮಿಮೀ ಅಗಲವಾಗಿರುತ್ತವೆ. ಮುಂದಿನ ರೆಕ್ಕೆಗಳು ಕಪ್ಪಾಗಿದ್ದು, ಹಿಂದಿನ ರೆಕ್ಕೆಗಳು ಹಳದಿ ಬಣ್ಣದಿಂದ ಕೂಡಿದ್ದು ಕಪ್ಪುಚುಕ್ಕೆ ಇರುತ್ತವೆ. ಕಪ್ಪು-ಹಳದಿ ವರ್ಣದಿಂದ ಕೂಡಿದ್ದರಿಂದ ಈ ಚಿಟ್ಟೆ ನೋಡಲು ಆಕರ್ಷಕವಾಗಿರುತ್ತದೆ.

ಇತರೆ ಜಾತಿಯ ಚಿಟ್ಟೆಗಳ ಹಾರಾಟ ಹೋಲಿಸಿದರೆ ಈ ಚಿಟ್ಟೆ ಬಹುದೂರ ಮತ್ತು ಬಹು ಎತ್ತರ ಹಾರುವ ಸಾಮರ್ಥಯ ಹೊಂದಿದೆ. ಈ ಚಿಟ್ಟೆಗೆ ಬರ್ಡ್‌ವಿಂಗ್‌ ಚಿಟ್ಟೆ(ಹಕ್ಕಿರೆಕ್ಕೆ ಚಿಟ್ಟೆ)ಎಂದೇ ಕರೆಯುತ್ತಾರೆ. ಇದರ ಜೀವಿತಾವಧಿ 19 ದಿವಸವಾಗಿರುತ್ತದೆ. ಈ ಚಿಟ್ಟೆ ಸಾಮಾನ್ಯವಾಗಿ ಭಾರತದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಅರಿಸ್ಟ್ಲೋಕಿಯಾ ಜಾತಿಯ ಸಸ್ಯಗಳು ಈ ಚಿಟ್ಟೆಯ ಲಾರ್ವಾಗಳಿಗೆ ಆತಿಥ್ಯ ಸಸ್ಯವಾಗಿದ್ದು, ಪ್ರಬುದ್ಧ ಚಿಟ್ಟೆಗಳು ಕ್ಲಿರೆಡೆಂಡ್ರಾನ್‌, ಅಕೇಶಿಯಾ ಮತ್ತು ರಥಪುಷ್ಪ ಜಾತಿ ಸಸ್ಯಗಳ ಹೂವಿನ ಮಕರಂದ ಸೇವಿಸುತ್ತವೆ. ಚಿಟ್ಟೆಗಳು ಪರಾಗಸ್ಪರ್ಶ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿ ಸಸ್ಯಗಳ ಸಂತತಿ ವೃದ್ಧಿಸುತ್ತವೆ. ಪಶ್ಚಿಮಘಟ್ಟದ ಸದರ್ನ್ ಬರ್ಡ್‌ವಿಂಗ್‌ ಚಿಟ್ಟೆಯನ್ನು 2019ರಲ್ಲಿ ಕರ್ನಾಟಕದ ರಾಜ್ಯ ಚಿಟ್ಟೆಯೆಂದು ಅಧಿಕೃತವಾಗಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಬರ್ಡ್‌ವಿಂಗ್‌ ಪ್ರಭೇದದ ಚಿಟ್ಟೆಗಳು ಸಹಾ ಐಯುಸಿಎನ್‌ ಪ್ರಕಾರ ಸಂರಕ್ಷಣೆ ಪಡೆದಿರುತ್ತವೆ.

ಜೀವವೈವಿಧ್ಯತೆ ಸೌಂದರ್ಯ ಹೆಚ್ಚಿಸುವುದಲ್ಲದೆ ಚಿಟ್ಟೆಗಳು ಸಹ ಆರೋಗ್ಯ ಪರಿಸರದ ಸೂಚಕಗಳಾಗಿವೆ. ಚಿಟ್ಟೆಗಳ ಸಂರಕ್ಷಣೆಗೆಂದೇ ಕರ್ನಾಟಕ ಅರಣ್ಯ ಇಲಾಖೆ ರಾಜ್ಯದ ಹಲವೆಡೆ ಚಿಟ್ಟೆ ಪಾರ್ಕ್‌ ನಿರ್ಮಿಸಿದೆ.

ಪಕ್ಷಿ, ಹಲ್ಲಿ ಇನ್ನಿತರೆ ಕೀಟಗಳಿಗೆ ಚಿಟ್ಟೆ ಮತ್ತು ಚಿಟ್ಟೆ ಲಾರ್ವಾ ಆಹಾರ ಪೂರೈಸುವ ಮೂಲಕ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅರಣ್ಯನಾಶ, ನಗರೀಕರಣ, ಮಿತಿಮೀರಿದ ಕೀಟನಾಶಕ ಬಳಕೆ ಮತ್ತು ಪರಿಸರ ಮಾಲಿನ್ಯದಿಂದ ಅದೆಷ್ಟೋ ಚಿಟ್ಟೆಗಳು ಅಳಿವಿನಂಚಿಗೆ ತಲುಪಿವೆ.  –ಮಂಜುನಾಥ ಎಸ್‌. ನಾಯಕ್‌, ಜೈವಿಕ ವೈವಿಧ್ಯ ಸಂಶೋಧಕರು, ನರಗುಂದ

„ಸಿದ್ಧಲಿಂಗಯ್ಯ ಮಣ್ಣೂರಮಠ

ಟಾಪ್ ನ್ಯೂಸ್

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ

Haveri: ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.