- Friday 13 Dec 2019
ರೈತರ ಸಾಲಮನ್ನಾ ಮರೀಚಿಕೆ!
Team Udayavani, Jul 21, 2019, 12:10 PM IST
ಹಾವೇರಿ: ರಾಜ್ಯದ ಸಮ್ಮಿಶ್ರ ಸರ್ಕಾರ ರೈತರಿಗಾಗಿ ಘೋಷಿಸಿದ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ಎರಡು ಲಕ್ಷ ರೂ. ವರೆಗಿನ ಸಾಲಮನ್ನಾ ಯೋಜನೆಯ ಲಾಭ ಜಿಲ್ಲೆಯ ಎಲ್ಲ ರೈತರಿಗೆ ಸಿಗದೆ ಸಾಲಮನ್ನಾ ಇನ್ನೂ ಮರೀಚಿಕೆಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 1.12 ಲಕ್ಷ ರೈತರು ವಿವಿಧ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಪಡೆದಿದ್ದಾರೆ. ಸರ್ಕಾರದ ಎರಡು ಲಕ್ಷ ರೂ. ಸಾಲಮನ್ನಾ ಯೋಜನೆಯಡಿ ಜಿಲ್ಲೆಯಲ್ಲಿ ರೈತರ 2025 ಕೋಟಿ ರೂ. ಸಾಲಮನ್ನಾ ಆಗಬೇಕಿತ್ತು. ಆದರೆ, ಈ ವರೆಗೆ ಕೇವಲ 425 ಕೋಟಿ ರೂ.ಗಳಷ್ಟು ಮಾತ್ರ ಆಗಿದೆ.
ಹಿರೇಕೆರೂರು ತಾಲೂಕಿನಲ್ಲಿ 21454, ಹಾವೇರಿ ತಾಲೂಕಿನಲ್ಲಿ 20692, ಹಾನಗಲ್ಲ ತಾಲೂಕಿನಲ್ಲಿ 19924, ರಾಣಿಬೆನ್ನೂರಿನಲ್ಲಿ 17,949, ಶಿಗ್ಗಾವಿ ತಾಲೂಕಿನಲ್ಲಿ 13,419, ಸವಣೂರು ತಾಲೂಕಿನಲ್ಲಿ 10,676, ಬ್ಯಾಡಗಿ ತಾಲೂಕಿನಲ್ಲಿ 7609 ರೈತರು ರಾಷ್ಟ್ರಿಕೃತ ಬ್ಯಾಂಕ್ಗಳಲ್ಲಿ ಸಾಲ ಪಡೆದಿದ್ದಾರೆ.
ರೈತರಿಂದ ಘೋಷಣಾ ಪತ್ರ, ಆಧಾರ್ ಕಾರ್ಡ್, ಪಡಿತರಚೀಟಿ, ಹಿಡುವಳಿಯ ಸರ್ವೇ ಕ್ರಮಾಂಕ ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳನ್ನು ರೈತರು ಹಗಲು-ರಾತ್ರಿ ಸರದಿಯಲ್ಲಿ ನಿಂತು ಬ್ಯಾಂಕ್ಗಳಿಗೆ ನೀಡಿದ್ದಾರೆ. ಇನ್ನು ಜಿಲ್ಲಾಡಳಿತವೂ ಸಹ ಆಂದೋಲನ ರೀತಿಯಲ್ಲಿ ದಾಖಲೆ ಸಂಗ್ರಹ ಮಾಡಿ ಯೋಜನೆಯ ಲಾಭ ದೊರಕಿಸುವ ವ್ಯವಸ್ಥೆಯೂ ಮಾಡಿದೆ. ಸಾಲಮನ್ನಾಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದರೂ ಎಲ್ಲ ರೈತರ ಖಾತೆಗೆ ಸಾಲಮನ್ನಾದ ಹಣ ಈವರೆಗೂ ಜಮೆಯಾಗದೆ ಇರುವುದು ಅನ್ನದಾತರದಲ್ಲಿ ಬೇಸರ ಮೂಡಿಸಿದೆ.
ಸಹಕಾರಿಯಲ್ಲೂ ಸಮಸ್ಯೆ: ಸಹಕಾರಿ ಸಂಘಗಳ 21621 ರೈತರಿಗೆ 70.58ಕೋಟಿ ರೂ. ಸಾಲ ಮನ್ನಾ ಹಣ ಬರಬೇಕಿತ್ತು. ಅದರಲ್ಲೂ 25ಕೋಟಿಯಷ್ಟು ಹಣ ಬಾಕಿ ಉಳಿದುಕೊಂಡಿದೆ. ರೈತರು ಬ್ಯಾಂಕ್ಗೆ ಹೋಗಿ ವಿಚಾರಿಸಿದರೆ ‘ಸರ್ಕಾರದಿಂದ ಇನ್ನೂ ಹಣ ಬಂದಿಲ್ಲ’ ಎಂಬ ಉತ್ತರ ಬ್ಯಾಂಕ್ ಅಧಿಕಾರಿಗಳಿಂದ ಬರುತ್ತಿದೆ. ರೈತರ ಸಾಲಮನ್ನಾವೂ ಆಗದೇ ಹೊಸ ಸಾಲವೂ ಸಿಗದೇ ಬರದಲ್ಲಿ ಬಳಲಿರುವ ರೈತರು ಇನ್ನಷ್ಟು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ.
ಕಳೆದ ಬೇಸಿಗೆಯಲ್ಲಿ ನಡೆದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಹೆಸರಲ್ಲಿ ಸಾಲಮನ್ನಾ ಹಣ ಹಾಕಲು ವಿಳಂಬ ಮಾಡಿದ ಅಧಿಕಾರಿಗಳು, ಕೆಲವರ ಖಾತೆಗೆ ಹಣ ಹಾಕಿ ಮತ್ತೆ ವಾಪಸ್ ಪಡೆದಿದ್ದಾರೆ. ಕೆಲವರ ಖಾತೆಗೆ 20ಸಾವಿರ,, 50 ಸಾವಿರ ರೂ. ಹೀಗೆ ಒಂದೊಂದು ರೀತಿಯ ಮೊತ್ತ ಹಾಕಿದ್ದಾರೆ. ಯಾವ ರೈತರಿಗೆ ಎಷ್ಟು ಹಾಕಲಾಗಿದೆ. ಇನ್ನು ಹಲವರಿಗೆ ಒಂದು ಪೈಸೆಯೂ ಕೊಟ್ಟಿಲ್ಲ. ಏಕೆ ಕೊಟ್ಟಿಲ್ಲ ಎಂಬುದು ಸೇರಿದಂತೆ ಯಾವ ಮಾಹಿತಿಯೂ ರೈತರಿಗೆ ಇಲ್ಲದಂತಾಗಿದೆ. ಒಟ್ಟಾರೆ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಸಾಲಮನ್ನಾ ರೈತರ ಪಾಲಿಗೆ ಇನ್ನೂ ಕನ್ನಡಿಯೊಳಗಿನ ಗಂಟಾಗಿ ಪರಿಣಮಿಸಿದೆ.
•ಎಚ್.ಕೆ. ನಟರಾಜ
ಈ ವಿಭಾಗದಿಂದ ಇನ್ನಷ್ಟು
-
ಶಿಗ್ಗಾವಿ: ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸಿ, ಕೊರತೆಯಾದ ಪೋಷಕಾಂಶವನ್ನು ಸರಿದೂಗಿಸುವ ಮೂಲಕ ಕೃಷಿ ಜಮೀನನ್ನು ಫಲವತ್ತಗೊಳಿಸಬೇಕು ಎಂದು ಧುಂಡಶಿ ರೈತ...
-
ಬ್ಯಾಡಗಿ: ಮೋಟೆಬೆನ್ನೂರ-ಗುತ್ತಲ ಮಾರ್ಗ ಮಧ್ಯದ ಅಳಲಗೇರಿ ಗ್ರಾಮದ ಬಳಿ ಒಂದೂವರೆ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆ ಕಾಮಗಾರಿ ಕಳಪೆಯಾಗಿದ್ದು, ಈ...
-
ಹಾವೇರಿ: ಉಪಚುನಾವಣೆ ಭರಾಟೆಯಲ್ಲಿ ನೆರೆ ಹಾಗೂ ಪ್ರವಾಹ ಸಂತ್ರಸ್ತರಿಗೆ ಹಾನಿ ಪರಿಹಾರ ಒದಗಿಸುವ ಕಾರ್ಯ ಕುಂಠಿತಗೊಂಡಿದ್ದರಿಂದ ಸಂತ್ರಸ್ತರಿಂದ ಭಾರಿ ಆಕ್ರೋಶ...
-
ಎಚ್.ಕೆ. ನಟರಾಜ ಹಾವೇರಿ: ಉಪಚುನಾವಣೆ ಭರಾಟೆ ಮುಗಿಯುತ್ತಿದ್ದಂತೆ ಈಗ ಸಚಿವ ಸ್ಥಾನದ ವಿಚಾರ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು. ಜಿಲ್ಲೆಗೆ ಎಷ್ಟು ಸಚಿವ ಸ್ಥಾನ...
-
ರಾಣಿಬೆನ್ನೂರ: ಮನುಷ್ಯನ ವಿಕಾಸತೆಗೆ ಮತ್ತು ನಿತ್ಯದ ಕ್ರೀಯಾ ಚಟುವಟಿಕೆಗೆ ಯೋಗ, ಧ್ಯಾನ, ಪ್ರಾಣಾಯಾಮ ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು...
ಹೊಸ ಸೇರ್ಪಡೆ
-
ಕಲೆಯ ಉನ್ನತಿ ಮತ್ತು ಅವನತಿಗೆ ಪ್ರೇಕ್ಷಕವರ್ಗವೂ ಬಹುಮಟ್ಟಿಗೆ ಕಾರಣರಾಗುತ್ತಾರೆ. ಈ ದೃಷ್ಟಿಯಿಂದ ಪ್ರೇಕ್ಷಕವರ್ಗವೇ ಕಾರ್ಯಕ್ರಮದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ...
-
ಬಜಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಕೆಂಜಾರಿನಲ್ಲಿರುವ ಆಗಮನ ಮತ್ತು ನಿರ್ಗಮನ ಮಾರ್ಗದಲ್ಲಿ ಸಮ ರ್ಪಕ ಸೂಚನ ಫಲಕಗಳ ಕೊರತೆಯಿದ್ದು, ವಿಮಾನ...
-
ಕುಂದಾಪುರ: ಪಂಚಾಯತ್ರಾಜ್ ಕಾಯ್ದೆ ಪ್ರಕಾರ ರಾಜ್ಯದ ಅಷ್ಟೂ ತಾಲೂಕು ಪಂಚಾಯತ್ಗಳಲ್ಲಿ 2006ರಿಂದ ವಾರ್ಷಿಕ ಜಮಾಬಂದಿ ನಡೆಯುತ್ತಿದ್ದರೂ ಉಡುಪಿ ಜಿಲ್ಲೆಯ ಮೂರು...
-
ಉಡುಪಿ ಶ್ರೀಕೃಷ್ಣಮಠದಲ್ಲಿ ಈಗ ಪ್ರತಿನಿತ್ಯ ಬಾಲಕ, ಬಾಲಕಿಯರ ಯಕ್ಷಗಾನ "ಕಿಶೋರ ಯಕ್ಷಗಾನ ಸಂಭ್ರಮ' ನ. 25ರಿಂದ ಪ್ರತಿಭೆ ಪ್ರದರ್ಶನಗೊಳ್ಳುತ್ತಿದೆ. ಪ್ರದರ್ಶನದಲ್ಲಿ...
-
ಮರ್ಡರ್ ಮಿಸ್ಟ್ರಿ ಕತೆಯನ್ನು ರಂಗದ ಮೇಲೆ ಪ್ರಯೋಗಿಸುವುದು ಅಷ್ಟು ಸುಲಭ ಮಾತಲ್ಲ.ಸಮಗ್ರ ರಂಗಭೂಮಿ ನಿರ್ವಹಣೆಯ ಪರಿಕಲ್ಪನೆ, ಅನುಭವ, ರಂಗ ತಾಲೀಮು, ತಂತ್ರಗಾರಿಕೆಗಳಿಂದ...