ಅಡಕೆಗೆ ಪೋಷಕಾಂಶ ಕೊರತೆ
Team Udayavani, Jun 28, 2020, 3:20 PM IST
ರಾಣಿಬೆನ್ನೂರ: ಲಘು ಪೋಷಕಾಂಶ ಕೊರತೆ, ಅತೀ ಹೆಚ್ಚು ಕೆರೆ ಮಣ್ಣನ್ನು ತೋಟಗಳಲ್ಲಿ ಹಾಕಿದಾಗ ಅಡಕೆ ತೋಟಗಳಲ್ಲಿ ಕಾಯಿ ಮತ್ತು ಈಚು ಉದುರುವ ಸಮಸ್ಯೆ ಕಂಡು ಬರುತ್ತದೆ ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಡಾ| ಅಶೋಕ ಪಿ. ಹೇಳಿದರು.
ತಾಲೂಕಿನ ಮೆಣಸಿನಹಾಳ ಹಾಗೂ ತಿಮ್ಮೇನಹಳ್ಳಿ ಗ್ರಾಮದ ಪ್ರಗತಿಪರ ರೈತರಾದ ತಿಮ್ಮಪ್ಪ ಮೆಣಸಿನಾಳ ಮತ್ತು ಚಂದ್ರಪ್ಪ ಅವರ ಅಡಕೆ ತೋಟಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಹಿರೇಕೆರೂರ ಮತ್ತು ಹಾನಗಲ್ ತಾಲೂಕಿನಲ್ಲೂ ಅಡಕೆ ಕೃಷಿಯನ್ನು ರೈತರು ಕೈಗೊಳ್ಳುತ್ತಿದ್ದು, ಕಾಯಿ ಮತ್ತು ಈಚು ಉದುರುವ ಸಮಸ್ಯೆ ಸಾಮಾನ್ಯವಾಗಿದೆ ಎಂದರು. ಇದಕ್ಕೆ ಕಾರಣಗಳು ಹಲವು ಇದ್ದು. ಅವುಗಳಲ್ಲಿ ಮುಖ್ಯವಾಗಿ ನೀರು ಬಸಿಯದೇ ಇರುವ ತೋಟಗಳಲ್ಲಿ ಬೇಸಿಗೆಯಲ್ಲಿ ಅತೀ ಹೆಚ್ಚು ಉಷ್ಣಾಂಶವಿದ್ದಾಗ ಒಮ್ಮೊಮ್ಮೆ ತೇವಾಂಶದ ಕೊರತೆಯೂ ಈ ಸಮಸ್ಯೆಗೆ ಕಾರಣ. ತೋಟಗಳಲ್ಲಿ ಬಹಳ ದೀರ್ಘವಾಗಿ ನೀರು ಬಿಡದೇ ಒಮ್ಮೆಲೇ ಹೆಚ್ಚು ನೀರು ಕೊಟ್ಟಾಗ ಅಥವಾ ಅತಿಯಾದ ಮಳೆಯಾದಾಗ ಕಾಯಿ ಮತ್ತು ಈಚು ಉದುರುವ ಸಮಸ್ಯೆ ಕಂಡು ಬರುತ್ತದೆ ಎಂದರು.
ಮಣ್ಣು ವಿಜ್ಞಾನಿ ಡಾ| ರಾಜಕುಮಾರ ಜಿ.ಆರ್ ಮಾತನಾಡಿ, ಇದರ ನಿರ್ವಹಣೆಗೆ ಸಮತೋಲನದಿಂದ ಪೋಷಕಾಂಶ ಪೂರೈಸಬೇಕು. ಪೋಟ್ಯಾಷ-150 ಗ್ರಾಂ, ಬೋರಾಕ್ಸ್-25 ಗ್ರಾಂ, ಸತುವಿನ ಸಲ್ಪೇಟ್-50 ಗ್ರಾಂ ಪ್ರತಿ ಮರಕ್ಕೆ ನೀಡಬೇಕು. ಮರದ ಸುತ್ತಲೂ ಗುಣಿ ಮಾಡಿ ತಿಪ್ಪೆಗೊಬ್ಬರ ಅಥವಾ ಎರೆಹುಳು ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಈ ಪೋಷಕಾಂಶಗಳನ್ನು ನೀಡಬೇಕು. ನೀರು ಬಸಿಯದ ತೋಟಗಳಲ್ಲಿ ಬಸಿಗಾಲುವೆಗಳ ನಿರ್ಮಾಣ ಮಾಡಬೇಕು. ಈಗಾಗಲೇ ಕೆರೆಗೋಡು ಹಾಕಿರುವ ತೋಟಗಳಲ್ಲಿ ಹಸಿರೆಲೆ ಗೊಬ್ಬರದ ಬಳಕೆ, ಹೆಚ್ಚು ಸಾವಯವ ಪರಿಕರಗಳನ್ನು ಬಳಸುವುದು ಜೀವಾಮೃತ ಹಾಕಬೇಕು ಎಂದರು.
ಬೇರುಗಳ ಬೆಳವಣಿಗೆ ವೃದ್ಧಿಸಲು ಗೊಬ್ಬರವನ್ನು 20ಗ್ರಾಂ ಪ್ರತಿಗಿಡಕ್ಕೆ ನೀಡಿ, ಬೇಸಿಗೆಯಲ್ಲಿ ಸಮನಾಗಿ ಹನಿ ನೀರವರಿ ಮೂಲಕ ತೇವಾಂಶ ನಿರ್ವಹಿಸುವುದು ಒಳಿತು. ಶಿಫಾರಸ್ಸಿನ ಗೊಬ್ಬರವನ್ನುಜೂನ್-ಜುಲೈ ಮತ್ತು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಕೊಡಬೇಕು. ಜನೆವರಿಯಲ್ಲಿ ಹೊಸ ಸಿಂಗಾರ ಬಂದಾಗ ಲಘು ಪೋಷಕಾಂಶದ ಮಿಶ್ರಣವನ್ನು ಪ್ರತಿ ಲೀಟರ್ ನೀರಿಗೆ 0.5 ಗ್ರಾಂ ಬೆರೆಸಿ ಸಿಂಪಡಿಸಿ ಎಂದರು. ನಗರದ ಎನ್ಜಿಒ ಸಂಸ್ಥೆಯ ವನಸಿರಿ ಅಧಿಕಾರಿ ಶಂಶುದ್ದೀನ ಬಳಿಗಾರ ಸೇರಿದಂತೆ ರೈತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು
Ls polls: ರಾಜ್ಯದಲ್ಲಿ ನಾವು 18 -20 ಸೀಟ್ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ
ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ
ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ
LokSabha Election; ಕಾಂಗ್ರೆಸ್ ನ ಬಹುಮತ ಹೇಳಿಕೆಯೇ ಹಾಸ್ಯಾಸ್ಪದ: ಬಸವರಾಜ ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ