ಮುರಿದ ಬದುಕು ಮರು ನಿರ್ಮಾಣ

•ಹೊಸ ಭರವಸೆಯಲ್ಲಿಯೇ ಬದುಕು ಕಟ್ಟಿಕೊಳ್ಳುವ ಕಾರ್ಯ•ಮನೆಗಳಿಗೆ ನೀರು ನುಗ್ಗಿ ಕಸ-ಕಡ್ಡಿ ಸಂಗ್ರಹ

Team Udayavani, Aug 14, 2019, 1:18 PM IST

HV-TDY-1

ಹಾವೇರಿ: ಇಲ್ಲಿಯ ಜನರು ಸಾಮೂಹಿಕವಾಗಿ ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿದ್ದಾರೆ. ಬಟ್ಟೆ-ಬರೆ, ಪಾತ್ರೆ- ಪಗಡೆ ತೊಳೆದುಕೊಳ್ಳುತ್ತಿದ್ದಾರೆ. ಮನೆಯ ಒಂದಿಷ್ಟು ಕಾಗದ ಪತ್ರ, ಮಕ್ಕಳ ಪುಸ್ತಕ ಸೇರಿದಂತೆ ಕೆಲ ಸಾಮಗ್ರಿಗಳನ್ನು ಬಿಸಿಲಿಗೆ ಹಾಕಿ ಒಣಗಿಸಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ತಗಡು, ತಾಡಪತ್ರಿ ತಂದು ಮನೆಗೆ ಮೇಲ್ಛಾವಣಿ ಹಾಕುತ್ತಿದ್ದಾರೆ. ಇನ್ನು ಕೆಲವರು ನೀರು ಹರಿದು ಹೋಗಲು ಕಾಲುವೆ ಮಾಡಿಕೊಳ್ಳುತ್ತಿದ್ದಾರೆ.

ಗ್ರಾಮಗಳಲ್ಲಿನ ಈ ಸಾಮೂಹಿಕ ಚಟುವಟಿಕೆಯನ್ನು ಮೇಲ್ನೋಟಕ್ಕೆ ಗಮನಿಸಿದರೆ ಊರಲ್ಲಿ ಉತ್ಸವ ಇಲ್ಲವೇ ಹಬ್ಬದ ಸಡಗರ ನಡೆದಿರಬಹುದೇನೋ ಎಂದೆನಿಸುತ್ತದೆ. ಆದರೆ, ವಾಸ್ತವ ಸಂಗತಿ ಅದಲ್ಲ. ಕಳೆದ ವಾರ ಬಿಟ್ಟೂ ಬಿಡದೆ ಸುರಿದ ಮಳೆ, ಉಕ್ಕಿ ಹರಿದ ನೆರೆಯಿಂದ ಜಲಾವೃತವಾದ ಗ್ರಾಮಗಳಲ್ಲಿನ ಜನರು ಮರು ಬದುಕು ಕಟ್ಟಿಕೊಳ್ಳುವ ಚಿತ್ರಣವಿದು.

ಉಕ್ಕಿ ಹರಿದು ಆರ್ಭಟ ತೋರಿದ ಕುಮದ್ವತಿ, ಧರ್ಮಾ ವರದೆ, ತುಂಗೆ ಈಗ ಶಾಂತರಾಗಿದ್ದಾರೆ. ವರುಣ ತುಸು ಹೊಳವು ನೀಡಿದ್ದು ಸೂರ್ಯ ಪ್ರಖರತೆ ಬೀರಿದ್ದಾನೆ. ಹೀಗಾಗಿ ಪರಿಹಾರ ಕೇಂದ್ರದಲ್ಲಿದ್ದ ಸಂತ್ರಸ್ತರು ಈಗ ತಮ್ಮ ಮನೆಗಳತ್ತ ಧಾವಿಸಿ ಈ ರೀತಿಯ ಚಟುವಟಿಕೆಯಲ್ಲಿ ಮಗ್ನರಾಗಿದ್ದಾರೆ.

ಕೆಲವು ಮನೆಗಳಿಗೆ ನೀರು ನುಗ್ಗಿ ಕಸ-ಕಡ್ಡಿ ಸಂಗ್ರಹವಾಗಿದೆ. ಕೆಲ ಮನೆಗಳಲ್ಲಿ ಹಾವು, ಕಪ್ಪೆ, ಹುಳುಹುಪ್ಪಡಿಗಳು ಸೇರಿವೆ. ಅವುಗಳನ್ನೆಲ್ಲ ಹೊರಹಾಕುವುದು, ಮನೆಯೊಳಗೆ ತುಂಬಿರುವ ನೀರು ಹೊರಚೆಲ್ಲುವುದು, ಮನೆ ಸುತ್ತ ನಿಂತ ನೀರು ಹರಿದು ಹೋಗಲು ಕಾಲುವೆ ಮಾಡುವುದು, ನೀರಿಗೆ ನೆಂದ ಸಾಮಗ್ರಿಗಳನ್ನು ಬಿಸಿಲಿಗೆ ಹಾಕುವುದು, ನೆಂದ ದವಸಧಾನ್ಯ, ಕಾಳು ಕಡಿಯನ್ನು ಬಿಸಿಲಿಗೆ ಒಣಗಿಸಿ ಸ್ವಚ್ಛಗೊಳಿಸುವುದರಲ್ಲಿ ನೆರೆಪೀಡಿತ ಗ್ರಾಮದ ಜನರು ತೊಡಗಿಕೊಂಡಿದ್ದಾರೆ.

ತಾತ್ಕಾಲಿಕ ಶೆಡ್‌: ಸಂಪೂರ್ಣವಾಗಿ ಮನೆ ಕುಸಿದು ನೆಲೆ ಕಳೆದುಕೊಂಡವರು ಪರಿಹಾರಕ್ಕಾಗಿ ಫೋಟೋ ತೆಗೆಸುವುದು, ಅವರಿವರ ಸಲಹೆ ಕೇಳುವುದು. ತಾತ್ಕಾಲಿಕ ವಾಸಕ್ಕಾಗಿ ಗುಡಿಸಲು, ತಾಡಪತ್ರಿಯ ಆಸರೆ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಜಾನುವಾರುಗಳನ್ನು ಸುರಕ್ಷಿತ ಸ್ಥಳದಲ್ಲಿ ಕಟ್ಟಲು ವ್ಯವಸ್ಥೆ ಮಾಡುವುದು, ನೆಂದಿರುವ ಬಣಿವೆ ಕೈಬಿಟ್ಟು ದೂರದಿಂದ ಮೇವು ತಂದು ಇಡುವುದು, ಜಾನುವಾರುಗಳಿಗೆ ಮೈತೊಳೆಸುವುದು, ಹೊಲಗಳಲ್ಲಿ ನಿಂತಿರುವ ನೀರು ಹರಿದು ಹೋಗಲು ಬಸಿಗಾಲುವೆ ಮಾಡುವುದು ಹೀಗೆ ಹೊಸ ಭರವಸೆಗಳೊಂದಿಗೆ ನೆರೆಪೀಡಿತ ಗ್ರಾಮಗಳ ಜನರು ಹೊಸ ಜೀವನ ಕಟ್ಟಿಕೊಳ್ಳಲು ಅಣಿಯಾಗುತ್ತಿದ್ದಾರೆ.

ಊಟದ ಕೇಂದ್ರ: ಅಡುಗೆ ಮಾಡಿಕೊಳ್ಳಲು, ಉಳಿಯಲು ಸಹ ವ್ಯವಸ್ಥೆ ಮಾಡಿಕೊಳ್ಳಲಾಗದ ಸಂತ್ರಸ್ತರು ಪರಿಹಾರ ಕೇಂದ್ರವನ್ನು ಊಟ, ವಸತಿಯ ಕೇಂದ್ರವನ್ನಾಗಿಸಿಕೊಂಡಿದ್ದಾರೆ. ರಾತ್ರಿ ವಸತಿಗೆ, ಮಧ್ಯಾಹ್ನ, ರಾತ್ರಿ ಊಟಕ್ಕೆ ಹಾಗೂ ಬೆಳಗಿನ ಉಪಹಾರಕ್ಕಾಗಿ ಪರಿಹಾರ ಕೇಂದ್ರ ಅವಲಂಬಿಸಿದ್ದು, ಇಡೀ ದಿನ ಮನೆ ಸ್ವಚ್ಛತೆ, ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮನೆ ವ್ಯವಸ್ಥೆ ಸರಿಯಾಗುತ್ತಿದ್ದಂತೆ ಒಬ್ಬೊಬ್ಬರಾಗಿ ಪರಿಹಾರ ಕೇಂದ್ರ ತೊರೆಯುತ್ತಿದ್ದಾರೆ.

ಕಗ್ಗತ್ತಲಲ್ಲಿ ಹಳ್ಳಿ: ನೆರೆಪೀಡಿತ ಗ್ರಾಮಗಳಲ್ಲಿ ಇನ್ನೂ ಎಲ್ಲೆಡೆ ನೀರು ನಿಂತಿದು,್ದ ವಿದ್ಯುತ್‌ ಕಂಬಗಳು ನೀರಲ್ಲಿಯೇ ಇವೆ. ಹಲವು ಕಡೆಗಳಲ್ಲಿ ವಿದ್ಯುತ್‌ ಕಂಬಗಳು ಮುರಿದುಬಿದ್ದಿದ್ದು, ದುರಸ್ತಿ ಕಾರ್ಯ ನಡೆದಿದೆ. ಹೀಗಾಗಿ ಹಲವು ಗ್ರಾಮಗಳ ಮನೆಗಳಲ್ಲಿ ರಾತ್ರಿ ಕಗ್ಗತ್ತಲು ಆವರಿಸಿದೆ. ಸೀಮೆಯೆಣ್ಣೆಯೂ ಎಲ್ಲೆಡೆ ಸಿಗದೆ ಇರುವುದರಿಂದ ಬ್ಯಾಟರಿ, ಮೊಂಬತ್ತಿ ಬೆಳಕಲ್ಲಿ ರಾತ್ರಿ ಕಳೆಯುತ್ತಿದ್ದು ಟಿವಿಗಳಂತೂ ಸಂಪೂರ್ಣ ಸ್ಥಬ್ಧಗೊಂಡಿವೆ. ನಿರಂತರ ಸುರಿದ ಮಳೆಯಿಂದ ಗ್ರಾಮಗಳಲ್ಲಿ ತುಂಬಿಕೊಂಡ ನೀರು ಇನ್ನೂ ಹಾಗೆಯೇ ಇದೆ. ಹಲವು ಮನೆ, ಸರ್ಕಾರಿ ಕಚೇರಿ, ಬಸ್‌ನಿಲ್ದಾಣಗಳ ಸುತ್ತ ನೀರು ನಿಂತು ಕೊಂಡಿದೆ.

 

•ಎಚ್.ಕೆ. ನಟರಾಜ

ಟಾಪ್ ನ್ಯೂಸ್

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ

Haveri: ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ

Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು

Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.