ದಸರಾದಲ್ಲಿ ಮಿಂಚಲಿದೆ ಶಂಖನಾದ ಕನಕದಾಸ
Team Udayavani, Sep 21, 2019, 10:50 AM IST
ಹಾವೇರಿ: ಈ ಬಾರಿಯ ಮೈಸೂರು ದಸರಾ ಉತ್ಸವದಲ್ಲಿ ಜಿಲ್ಲಾಡಳಿತದಿಂದ ಶಂಖನಾದ ಮೊಳಗಿಸುತ್ತಿರುವ ದಾಸಶ್ರೇಷ್ಠ ಕನಕದಾಸರು ಹಾಗೂ ಅವರ ಗದ್ದುಗೆ ಸ್ತಬ್ಧಚಿತ್ರ ಮಾಡಲು ನಿರ್ಧರಿಸಿದೆ.
ಭೂಮಿಯೊಳಗಿಂದ ಮೇಲೆದ್ದು ಗಗನಮುಖೀಯಾಗಿ ಶಂಖನಾದ ಮೊಳಗಿಸುವ ಕನಕದಾಸರ ಮೂರ್ತಿಯ ಹಿಂದೆಒಂದು ಕಥೆ ಇದ್ದು, ಕನಕದಾಸರು ಒಂದೇ ಉಸಿರಿನಿಂದ ಶಂಖ ಊದಿ ಶಬ್ಧ ಹೊರಹೊಮ್ಮಿದಷ್ಟು ಅಪಾರ ವಿಸ್ತೀರ್ಣದ ಭೂಮಿಯನ್ನು ಆನೆಗೊಂದಿ ಅರಸರಿಂದ ಕೊಡುಗೆಯಾಗಿ ಪಡೆದರು ಎನ್ನಲಾಗುತ್ತದೆ. ಜತೆಗೆ ಅವರ “ಕುಲಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ ಬಲ್ಲಿರಾ..’ ಎಂಬುದು ಸೇರಿದಂತೆ ಸಮ ಸಮಾಜಕ್ಕಾಗಿ ನೀಡಿದ ಸಂದೇಶವನ್ನು ಶಂಖದ ಮೂಲಕ ಸಾರುವ ಕಲ್ಪನೆ ಈ ಸ್ತಬ್ಧಚಿತ್ರ ಒಳಗೊಂಡಿದೆ.
ಈ ಸ್ತಬ್ದಚಿತ್ರವನ್ನು ಹಾವೇರಿಯ ಕಲಾವಿದ ಶ್ರೀಕಾಂತ ಪೂಜಾರ ತಯಾರಿಸುತ್ತಿದ್ದಾರೆ. ಈ ಪರಿಕಲ್ಪನೆಯ ಮೂಲ ಕಾಗಿನೆಲೆಯದ್ದಾಗಿದೆ. ಕನಕದಾಸರ ಕರ್ಮಭೂಮಿ ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಪರಿಸರಸ್ನೇಹಿ “ಕನಕ’ ಉದ್ಯಾನದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾ ಧಿಕಾರದಿಂದ ಶಂಖನಾದ ಮೊಳಗಿಸುತ್ತಿರುವ ಕನಕದಾಸರ ಬೃಹತ್ ಸುಂದರ ಮೂರ್ತಿ ನಿರ್ಮಿಸಲಾಗಿದೆ. ಈ ಮೂರ್ತಿ ಹಾಗೂ ಕಾಗಿನೆಲೆಯಲ್ಲಿರುವ ಕನಕದಾಸರ ಗದ್ದುಗೆ ಇರುವ ದೇವಸ್ಥಾನ ಮಾದರಿಯನ್ನಿಟ್ಟುಕೊಂಡು ಸ್ತಬ್ಧಚಿತ್ರ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ