ಪ್ರಧಾನಿ ಮೋದಿ ಟೀಕೆ ಮಾಡದಿದ್ರೆ ಸಿದ್ದರಾಮಯ್ಯಗೆ ತಿಂದಿರುವ ಅನ್ನ ಕರಗೋದಿಲ್ಲ
Team Udayavani, Dec 23, 2019, 4:37 PM IST
ಹಾವೇರಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕೆ ಮಾಡದಿದ್ದರೆ ಸಿದ್ದರಾಮಯ್ಯಗೆ ತಿಂದಿರುವ ಅನ್ನ ಕರಗೋದಿಲ್ಲ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಮೋದಿ ಟೀಕೆ ಮಾಡುವ ನಾನೇ ದೊಡ್ಡ ನಾಯಕ ಅನ್ನೋ ಭ್ರಮಯಲ್ಲಿದ್ದಾರೆ ಸಿದ್ದರಾಮಯ್ಯ. ಪೌರತ್ವ ತಿದ್ದುಪಡಿಯನ್ನ ಮುಸ್ಲಿಂ ನಾಯಕರೆ ಸ್ವಾಗತ ಮಾಡಿದ್ದಾರೆ. ಆದರೂ ಟೀಕೆ ಮಾಡಲು ಕಾರಣವೇನು ಎಂದು ಪ್ರಶ್ನಿಸಿದರು.
ಎಷ್ಟು ಚುನಾವಣೆ ಸೋತ ಮೇಲೆ ಬುದ್ಧಿ ಬರುತ್ತೆ ಎನ್ನುವುದನ್ನು ಸಿದ್ದರಾಮಯ್ಯ ಹೇಳಬೇಕು. ಚಾಮುಂಡೇಶ್ವರಿ ಸೋತ್ರೂ ಬುದ್ಧಿ ಬರ್ಲಿಲ್ಲ. ಬಿಜೆಪಿಗೆ ಒಂದೇ ಒಂದು ಎಂಪಿ ಸೀಟು ಬರುವುದಿಲ್ಲ ಎಂದರು, ಆದರೆ ಇಪ್ಪತ್ತೈದು ಸೀಟು ಬಂತು. ಉಪಚುನಾವಣೆಯಲ್ಲೂ ಬಿಜೆಪಿಗೆ ಹೆಚ್ವಿನ ಸೀಟು ಬಂದವು ಆಗಲೂ ಬುದ್ಧಿ ಬರ್ಲಿಲ್ಲ ಎಂದು ಟೀಕಿಸಿದರು.