ಮಳೆಗಾಗಿ ಬೋರ್ಗಲ್ಗೆ ನೀರು ಸುರಿದು ಪೂಜೆ
Team Udayavani, Jul 5, 2020, 2:28 PM IST
ಬ್ಯಾಡಗಿ: “ಬೋರ್ಗಲ್ ಮೇಲೆ ನೀರು ಸುರಿದಂತೆ’ ಎಂದು ನಿರರ್ಥಕ ಕೆಲಸಗಳಿಗೆ ಬಳಸುವ ವಾಕ್ಯವೊಂದಿದೆ. ಆದರೆ ಸಕಾಲಕ್ಕೆ ಮಳೆಯಾಗದೇ ಪಟ್ಟಣದ ರೈತರು ಶನಿವಾರ ಕೆಸಿಸಿ ಬ್ಯಾಂಕ್ ಬಳಿಯಿರುವ ಬೋರ್ಗಲ್ಗೆ ನೀರು ಸುರಿದು ಪೂಜೆ ಸಲ್ಲಿಸಿದ ಪ್ರಸಂಗ ನಡೆದಿದೆ.
ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಆರ್ಭಿಟಿಸಿದ್ದ ಮಳೆ ಮೇ ಮತ್ತು ಜೂನ್ ತಿಂಗಳಲ್ಲಿ ಬಿತ್ತನೆಗೆ ಚಾಲನೆ ನೀಡಿತ್ತು. ಆದರೆ ಬಿತ್ತನೆ ಕಾರ್ಯ ಮುಗಿದ ಬಳಿಕ ಮುಂಗಾರು ಕೈ ಕೊಟ್ಟ ಹಿನ್ನೆಲೆಯಲ್ಲಿ ತಾಲೂಕಿನ ರೈತರು ಕಾಂಗಾಲಾಗಿದ್ದರು. ಬಿತ್ತನೆ ಬೀಜ ಅರ್ಧ ಹಸಿಯಿಂದ ಮೊಳಕೆಯೊಡೆಯದೇ ಹಾಗೆಯೇ ಉಳಿದಿದ್ದು, ಇಂತಹ ಸಂದರ್ಭದಲ್ಲಿ ಮಳೆ ಕೈಕೊಟ್ಟಲ್ಲಿ ಬಹಳ ತೊಂದರೆ ಎದುರಿಸಬೇಕಾಗುತ್ತದೆ. ಇದರಿಂದ ಮುಂದೆ ಒಂದು ವೇಳೆ ಮಳೆಯಾದರೂ ಸಹ ಹುಟ್ಟುವ ಬೀಜ ತನ್ನ ಎಂದಿನ ಶಕ್ತಿ ಕಳೆದುಕೊಳ್ಳುತ್ತದೆ. ಹೀಗಾಗಿ ಜೂನ್ ತಿಂಗಳು ಕಳೆದ ಬಳಿಕ ಮಳೆಗಾಗಿ ದೇವರ ಪ್ರಾರ್ಥನೆ ಅನಿವಾರ್ಯವಾಗಿತ್ತು. ಪಟ್ಟಣದ ಬಾಲಮುತ್ತೆ$çದೆಯರು ಪಟ್ಟಣದ ಹೊಂಡದಲ್ಲಿನ 101 ಬಿಂದಿಗೆಗಳಲ್ಲಿ ನೀರು ತಂದು ಬೋರ್ಗಲ್ (ಚತುರ್ಮುಖ ಬ್ರಹ್ಮ) ದೇವರಿಗೆ ಅಭಿಷೇಕ ಮಾಡಿದರು. ಇದರಿಂದ ಈ ಪೂಜಾ ವಿಧಾನದ ಬಳಿಕ ಸಂಜೆ ಸಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು ಕಾಕತಾಳೀಯ. ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ, ರೈತ ಮುಖಂಡರಾದ ಚಿಕ್ಕಪ್ಪ ಛತ್ರದ, ಎಂ.ಆರ್. ಭದ್ರಗೌಡ್ರ, ಅಶೋಕ ಮಾಳೇನಹಳ್ಳಿ, ಶಂಕರಪ್ಪ ಬಿದರಿ, ಬಸವರಾಜ ಸಂಕಣ್ಣನವರ ಇನ್ನಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri: ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ
Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು
Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು
Ls polls: ರಾಜ್ಯದಲ್ಲಿ ನಾವು 18 -20 ಸೀಟ್ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ