ಆಧಾರ್ ತಿದ್ದುಪಡಿ ಕೇಂದ್ರಕ್ಕೆ ಆಗ್ರಹ
Team Udayavani, May 21, 2019, 9:07 AM IST
ಹಾನಗಲ್ಲ: ಹೊಬಳಿ ವ್ಯಾಪ್ತಿಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರಗಳನ್ನು ತೆರೆಯಲು ಒತ್ತಾಯಿಸಿ ಸೋಮವಾರ ಲೋಕ್ಮಂಚ್ ಮುಖಂಡರಿಂದ ಮನವಿ ಸಲ್ಲಿಸಲಾಯಿತು.
ಹಾನಗಲ್ಲ: ಆಧಾರ್ ಕಾರ್ಡ್ ದುರಸ್ತಿ, ಹೊಸದಾಗಿ ಕಾರ್ಡ್ ಮಾಡಿಸಲು ಅನುಕೂಲಕ್ಕಾಗಿ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿ ಸೋಮವಾರ ತಾಲೂಕಿನ ಲೋಕ್ಮಂಚ್ ಮುಖಂಡರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಎಲ್ಲ ಪ್ರಕ್ರಿಯೆಗಳಿಗೂ ಆಧಾರ್ ಕಡ್ಡಾಯವಾಗುತ್ತಿದೆ. ತಾಲೂಕಿನ ಹಲವಾರು ಗ್ರಾಮಗಳಲ್ಲಿ ಆಧಾರ್ ಕಾರ್ಡ್ಗಳಲ್ಲಿ ತಿದ್ದುಪಡಿ, ಪೋನ್ ನಂಬರ್ ದಾಖಲಿಸುವುದು ಮತ್ತಿತರ ಸಮಸ್ಯೆ ಸರಿಪಡಿಸಲು ಕಷ್ಟವಾಗುತ್ತಿದೆ. ಹೀಗಾಗಿ ತಾಲೂಕಿನ ಹೊಬಳಿ ಮಟ್ಟದಲ್ಲಿ ಮತ್ತು ತಾಲೂಕು ಕೇಂದ್ರದಲ್ಲಿ ಆಧಾರ್ ಕಾರ್ಡ್ ಮಾಡುವ, ತಿದ್ದುಪಡಿ ಮಾಡಿಕೊಡುವ ಕೇಂದ್ರಗಳನ್ನು ತೆರಯುವ ಮೂಲಕ ಜನರಿಗೆ ಸಹಕಾರ ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ. ವಿವಿಧ ಗ್ರಾಮಗಳ ಲೋಕ್ಮಂಚ್ ಮುಖಂಡರಾದ ಮಂಜುನಾಥ ಕುದರಿ, ಟಿ.ಎಚ್.ಕೊಪ್ಪದ, ಶೇಖಪ್ಪ ಮುರಗೋಡ, ಬಸಣ್ಣ ಕೊತಂಬರಿ, ನೀಲಮ್ಮ ಕಟ್ಟಿಮನಿ, ರಾಮಚಂದ್ರ ಶಿಡ್ಲಾಪೂರ, ಶೇಖಣ್ಣ ಅಡಿವೇರ, ಕಲೀಲ್ ಮಾಸನಕಟ್ಟಿ, ಮಂಗಳಾ ಬೆಣ್ಣಿ, ಚಂದ್ರಪ್ಪ ಅಪ್ಪಗೊಂಡ್ರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ