ರೊಟ್ಟಿ ಪಂಚಮಿ ಹಬ್ಬಕ್ಕೆ ತರಕಾರಿ ಬೆಲೆ ಏರಿಕೆ ಬಿಸಿ
Team Udayavani, Aug 4, 2019, 5:15 PM IST
ಹಾವೇರಿ: ಉಂಡಿಗಾಗಿ ಬೂಂದಿಕಾಳು ಖರೀದಿಸಿದ ಅಜ್ಜಿ.
ಹಾವೇರಿ: ಶ್ರಾವಣ ಮಾಸದ ಮೊದಲ, ನಾಡಿನ ದೊಡ್ಡ ಹಬ್ಬಗಳೊಂದಾದ ನಾಗರ ಪಂಚಮಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಬೆಲೆ ಏರಿಕೆ ನಡುವೆಯೂ ಗ್ರಾಹಕರು ಉತ್ಸಾಹ ಕುಗ್ಗಿಸಿಕೊಳ್ಳದೇ ಹಬ್ಬದ ಸಾಮಗ್ರಿ ಖರೀದಿಯಲ್ಲಿ ತೊಡಗಿದರು.
ಶ್ರಾವಣದಲ್ಲಿ ಪಂಚಮಿ ಹಬ್ಬ ಆರಂಭವಾಗುತ್ತಿದ್ದಂತೆ ಒಂದಾದ ಮೇಲೊಂದರಂತೆ ಸರಣಿ ಹಬ್ಬಗಳು ಪ್ರಾರಂಭವಾಗುತ್ತವೆ. ಪಂಚಮಿ ಹಬ್ಬದ ಅಂಗವಾಗಿಯೇ ಆಚರಿಸುವ ರೊಟ್ಟಿ ಪಂಚಮಿ ಹಬ್ಬಕ್ಕೆ ತರಕಾರಿ ಬೆಲೆ ಏರಿಕೆ ಭರ್ಜರಿ ಶಾಕ್ ನೀಡಿದೆ. ಈ ದರ ಏರಿಕೆ ಶಾಕ್ ನಡುವೆಯೂ ಶನಿವಾರ ನಗರದ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಜೋರಾಗಿತ್ತು.
ರೊಟ್ಟಿ ಪಂಚಮಿಯಲ್ಲಿ ಜೋಳದ ರೊಟ್ಟಿ, ಚಪಾತಿ ಹಾಗೂ ವಿವಿಧ ತರಕಾರಿ ಪಲ್ಯ ಹಾಗೂ ಸೊಪ್ಪುಗಳಿಂದ ಕೂಡಿದ ಪಚಡಿ ಮತ್ತು ಹೆಸರು, ಮಡಿಕೆ, ಅಲಸಂದಿ, ಕಡಲೆ ಸೇರಿದಂತೆ ಇತರ ದ್ವಿದಳ ಧಾನ್ಯಗಳ ಪಲ್ಯ ಮಾಡುವುದು ಈ ಹಬ್ಬದ ವಿಶೇಷ. ಕಳೆದ ಕೆಲ ತಿಂಗಳಿಂದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಗಗನಮುಖೀಯಾಗಿದೆ.
ಒಂದು ಕೆಜಿ ಟೊಮೆಟೋ ಬೆಲೆ 30-40 ರೂ., ಒಂದು ಕೆಜಿ ಹಿರೇಕಾಯಿ 60 ರೂ., ಬೆಂಡೆಕಾಯಿ ರೂ.40, ಹಸಿ ಮೆಣಸಿನಕಾಯಿ 60-90ರೂ., ಉಳ್ಳಾಗಡ್ಡಿ ರೂ. 20-30, ಎಲೆಕೋಸು 40ರೂ., ಗಜ್ಜರಿ ರೂ. 60ರೂ., ಸವತೆಕಾಯಿ 40-60ರೂ., ಬದನೆಕಾಯಿ 60ರೂ., ಕ್ಯಾಬಿಜ್ 40 ರೂ. ಹೀಗೆ ಎಲ್ಲ ತರಕಾರಿ ಬೆಲೆ ಇದೆ. ಅದಕ್ಕಾಗಿ ತರಕಾರಿ ವ್ಯಾಪಾರಸ್ಥರು ಗ್ರಾಹಕರನ್ನು ಸೆಳೆಯಲು ಕೆಜಿ ದರದ ಬದಲು ಕಾಲು ಕೆಜಿ ದರವನ್ನೇ ಹೇಳಿ ಆಕರ್ಷಿಸುತ್ತಿದ್ದಾರೆ. ತರಕಾರಿಯಷ್ಟೇ ಅವಶ್ಯಕವಾಗಿರುವ ಸೊಪ್ಪಿನ ಬೆಲೆಯೂ ತಾನೇನು ಕಮ್ಮಿ ಇಲ್ಲ ಎನ್ನುವಂತೆ ಬೆಲೆ ಏರಿಕೆಯಾಗಿದೆ. ಪೂಜೆಗೆ ನಾಗಪ್ಪನ ಮೂರ್ತಿ ಖರೀದಿಯೂ ಜೋರಾಗಿತ್ತು. ಗಾತ್ರಕ್ಕೆ ತಕ್ಕಂತೆ 25ರೂ.ಗಳಿಂದ 50ರೂ.ವರೆಗೂ ಮಣ್ಣಿನಮೂರ್ತಿ ಮಾರಾಟವಾದವು.
ಪಂಚಮಿ ಹಬ್ಬದಲ್ಲಿ ವಿವಿಧ ಬಗೆಯ ಉಂಡಿಗಳನ್ನು ತಯಾರಿಸಲಾಗುತ್ತದೆ. ಹೀಗಾಗಿ ಬೆಲೆ ಏರಿಕೆ ಬಿಸಿ ಕಿರಾಣಿ ಸಾಮಗ್ರಿಗಳಿಗೂ ಬಿಟ್ಟಿಲ್ಲ. ಒಂದು ಕೆಜಿ ಶೇಂಗಾ ಬೆಲೆ 120 ರೂ., ಒಣಕೊಬ್ಬರಿ ಕೆಜಿಗೆ 200-250ರೂ., ಬೂಂದೆಕಾಳು ಕೆ.ಜಿ.ಗೆ 100ರೂ., ಬೆಲ್ಲ ಕೆಜಿಗೆ 40-45ರೂ., ಎಳ್ಳು ಕೆಜಿಗೆ 250ರೂ., ತೊಗರಿ ಬೆಳೆ 80-100, ಸಕ್ಕರೆ 40-50ರೂ. ಇದೆ.
ಒಟ್ಟಾರೆ ನಾಗರಪಂಚಮಿ ಸಡಗರ ಜಿಲ್ಲೆಯಾದ್ಯಂತ ಮನೆ ಮಾಡಿದ್ದು ಮೊದಲ ಹಬ್ಬದ ಸಂಭ್ರಮ ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri: ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ
Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು
Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು
Ls polls: ರಾಜ್ಯದಲ್ಲಿ ನಾವು 18 -20 ಸೀಟ್ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು