ರೆಡ್ಕ್ರಾಸ್ ಪಕ್ಷಾತೀತ-ಜಾತ್ಯತೀತ ಸಂಸ್ಥೆ: ನಾಗಣ್ಣ
ಸಮಾಜಮುಖೀ-ಜನಪರ ಕಾರ್ಯವೇ ರೆಡ್ಕ್ರಾಸ್ ಸಂಸ್ಥೆಯ ಮುಖ್ಯ ಧ್ಯೇಯ
Team Udayavani, Jul 14, 2019, 4:50 PM IST
ಹಿರಿಯೂರು: ರಾಜ್ಯ ರೆಡ್ಕ್ರಾಸ್ ಚೇರ್ಮನ್ ಎಸ್. ನಾಗಣ್ಣ ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯೂರು: ರೆಡ್ಕ್ರಾಸ್ ಹೆಸರನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಟ್ಟಕ್ಕೆ ಹೆಚ್ಚಿಸುವ ಕೆಲಸವನ್ನು ಹಿರಿಯೂರು ರೆಡ್ಕ್ರಾಸ್ ಸಂಸ್ಥೆ ಮಾಡುತ್ತಿದೆ ಎಂದು ರಾಜ್ಯ ರೆಡ್ಕ್ರಾಸ್ ಚೇರ್ಮನ್ ಎಸ್. ನಾಗಣ್ಣ ಹೇಳಿದರು.
ಹಿರಿಯೂರು ರೆಡ್ಕ್ರಾಸ್ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರಿಗೆ ಉಚಿತ ವ್ಹೀಲ್ಚೇರ್, ತ್ರಿಚಕ್ರ ಸೈಕಲ್ ಮತ್ತು ಪರಿಕರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂವಿಧಾನದ ಅಡಿಯಲ್ಲಿ ರೆಡ್ಕ್ರಾಸ್ ಸಂಸ್ಥೆಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಈ ಸಂಸ್ಥೆ ಪಕ್ಷಾತೀತ ಹಾಗೂ ಜಾತ್ಯತೀತ ಸಂಸ್ಥೆಯಾಗಿದೆ. ಸಮಾಜಮುಖೀ ಹಾಗೂ ಜನಪರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಮಾಜದಲ್ಲಿನ ಬಡವರ, ದೀನದಲಿತರ, ನೊಂದವರ, ವಿಕಲಚೇತನರ ಪಾಲಿನ ಆಶಾಕಿರಣವಾಗಿದೆ ಎಂದು ಬಣ್ಣಿಸಿದರು.
ಬೆಂಗಳೂರಿನ ಸಾಲ್ವೆ ರೆಜಿನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ| ರೆಜಿನ ಸೀಲನ್ ಮಾತನಾಡಿ, ವಿಕಲಚೇತನರೂ ಸಹ ಸಮಾಜದಲ್ಲಿ ಎಲ್ಲರಂತೆ ಸಹಜವಾಗಿ ಬದುಕುವ ಮೂಲಕ ಮುಖ್ಯವಾಹಿನಿಗೆ ಬರಬೇಕು. ಈ ಉದ್ದೇಶದಿಂದ ನಮ್ಮ ಟ್ರಸ್ಟ್ ವತಿಯಿಂದ ಅಗತ್ಯ ಪರಿಕರಗಳನ್ನು ನೀಡಲಾಗುತ್ತಿದೆ ಎಮದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಕಲಚೇತನರಿಗೆ 10 ವ್ಹೀಲ್ಚೇರ್, 10 ತ್ರಿಚಕ್ರ ಸೈಕಲ್ ಹಾಗೂ ಕೂಲಿ ಕಾರ್ಮಿಕರಿಗೆ 210 ರೆಡಿಮೇಡ್ ಶರ್ಟ್ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರೆಡ್ಕ್ರಾಸ್ ಸಂಸ್ಥೆಯ ಮಾಜಿ ಚೇರ್ಮನ್ ಬಸ್ರೂರು ರಾಜೇಶ್ ಶೆಟ್ಟಿ, ರೆಡ್ಕ್ರಾಸ್ ಚೇರ್ಮನ್ ಎಚ್.ಎಸ್. ಸುಂದರ್ ರಾಜ್, ಉಪಾಧ್ಯಕ್ಷ ಬಿ.ಎಸ್. ನವಾಬ್ ಸಾಬ್, ಜಿಲ್ಲಾ ವಿಕಲ ಚೇತನರ ನೋಡಲ್
ಅಧಿಕಾರಿ ಮಂಜುನಾಥ ನಾಡರ್, ಜಿಲ್ಲಾ ಯೂತ್ ರೆಡ್ಕ್ರಾಸ್ ನೋಡಲ್ ಅಧಿಕಾರಿ ಎಚ್.ತಿಪ್ಪೇಸ್ವಾಮಿ, ಕೆ.ಆರ್. ವೆಂಕಟೇಶ್, ಎಂ.ಎಸ್. ರಾಘವೇಂದ್ರ, ಎಂ.ಎನ್. ಸೌಭಾಗ್ಯವತಿದೇವರು, ಬಾಲಕೃಷ್ಣ ಶೆಟ್ಟಿ, ಮಹೇಂದ್ರನಾಥ್, ಅರುಣ್ ಕುಮಾರ್, ಶಶಿಕಲಾ ರವಿಶಂಕರ್, ಎಚ್.ಪಿ. ರವೀಂದ್ರನಾಥ್, ಬಿ.ಕೆ. ನಾಗಣ್ಣ, ಮಹಾಬಲೇಶ್ವರ ಶೆಟ್ಟಿ, ವೈ.ಎಸ್. ಉಮಾಶಂಕರ್, ಪರಮೇಶ್ವರ ಭಟ್, ಬಸವರಾಜ್, ಆಲೂರು ಹನುಮಂತರಾಯಪ್ಪ, ಸತೀಶ್ಬಾಬು ಪಾಲ್ಗೊಂಡಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
MUST WATCH
ಹೊಸ ಸೇರ್ಪಡೆ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್