ಬದ್ಧತೆ-ಪ್ರಬುದ್ಧತೆ ಕಲ್ಯಾಣ ದರ್ಶನದ ಆಶಯ

ಬಸವಣ್ಣ ಜಾತಿಯ ಮಿತಿ ಮೀರಿದ ಶ್ರೇಷ್ಠ ದಾರ್ಶನಿಕ•ಡಾ| ಶಿವಮೂರ್ತಿ ಮುರುಘಾ ಶರಣರ ಬಣ್ಣನೆ

Team Udayavani, Aug 30, 2019, 3:17 PM IST

30-Agust-25

ಹೊಳಲ್ಕೆರೆ: 'ಕಲ್ಯಾಣ ದರ್ಶನ' ಸಮಾರೋಪ ಸಮಾರಂಭದಲ್ಲಿ ಡಾ| ಶಿವಮೂರ್ತಿ ಮುರುಘಾ ಶರಣರು ಆಶೀರ್ವಚನ ನೀಡಿದರು.

ಹೊಳಲ್ಕೆರೆ: ಕಲ್ಯಾಣ ದರ್ಶನದ ಮಹತ್ತರವಾದ ಉದ್ದೇಶ ವಿಶ್ವ ದರ್ಶನ. ಯಾರು ಅಂತರಂಗ ಬಹಿರಂಗದಲ್ಲಿ ವಿಶ್ವ ಮಾನವ ಪ್ರಜ್ಞೆಯನ್ನು ಇಟ್ಟುಕೊಂಡಿರುತ್ತಾರೋ ಅವರ ಬದುಕಿನಲ್ಲಿ ವಿಶ್ವ ದರ್ಶನ ಭಾಗ್ಯವೂ ಇರುತ್ತದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಚಿತ್ರದುರ್ಗ ಮುರುಘಾ ಮಠದ ವತಿಯಿಂದ ಪಟ್ಟಣದ ಡಾ| ಬಿ.ಆರ್‌. ಅಂಬೇಡ್ಕರ್‌ ರಂಗಮಂದಿರದಲ್ಲಿ ಶನಿವಾರ ನಡೆದ ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು. ಬದ್ಧತೆ ಮತ್ತು ಪ್ರಬುದ್ಧತೆಯನ್ನು ಜನರಲ್ಲಿ ಕಲ್ಯಾಣ ದರ್ಶನದ ಆಶಯ. ಕಲ್ಯಾಣ ದರ್ಶನ ಒಂದು ದಿನದ ಒಂದು ತಿಂಗಳ ಕಾರ್ಯಕ್ರಮವಲ್ಲ. ಇದು ನಿತ್ಯ ಕಲ್ಯಾಣವಾಗಿದೆ ಎಂದರು.

ಜಾತಿಗಳಿಗೆ ಮಿತಿಗಳಿದ್ದು, ಜಾತಿಯ ಮಿತಿಯನ್ನು ಮೀರಿದ ಶ್ರೇಷ್ಠರೆಂದರೆ ಬಸವಣ್ಣನವರು. ಅವರು ಜಾತಿಯಿಂದ ನೀತಿಯ ಕಡೆಗೆ ಬಂದರು. ವಿಶ್ವ ಪರಿಕಲ್ಪನೆಯ ಕಡೆ ಬಂದ ವಿಶಾಲ ಹೃದಯಿಯಾಗಿದ್ದರು. ಬಸವಾದಿ ಶರಣರ ಸೈದ್ಧಾಂತಿಕ ನಿಲುವು ತುಂಬ ಸ್ಪಷ್ಟ. ಆದರೆ ಇಂದಿನ ಜನಜೀವನದಲ್ಲಿ ಅಸ್ಪಷ್ಟತೆಗಳಿವೆ. ವಿಚಾರ ಮತ್ತು ಆಲೋಚನೆಗಳಲ್ಲಿ ಸ್ಪಷ್ಟತೆ ಇಲ್ಲ. ಆದರೆ ಬಸವಣ್ಣನವರಿಗೆ ಸಿಕ್ಕ 776 ಅಮರಗಣಂಗಳು ಬದ್ಧತೆ, ವಿಚಾರ ಸ್ಪಷ್ಟತೆಯಿಂದ ಇದ್ದಿದ್ದದರಿಂದ ಬಸವಣ್ಣನವರು ಕಲ್ಯಾಣ ಕಟ್ಟಲು ಸುಲಭವಾಯಿತು ಎಂದು ತಿಳಿಸಿದರು.

ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಭಾರತ ವಿಶ್ವದಲ್ಲೇ ವಿಶೇಷ ರಾಷ್ಟ್ರ. ವಿಶ್ವವೇ ಒಪ್ಪಿಕೊಳ್ಳುವ ದಾರ್ಶನಿಕರು, ದಾಸ ಶ್ರೇಷ್ಠರು, ಸಾಧಕರು ಇಲ್ಲಿ ಆಗಿಹೋಗಿದ್ದಾರೆ. ಅಂಥ ಬಸವಾದಿ ಪ್ರಮಥರ ವಿಚಾರಗಳನ್ನು ಮುರುಘಾ ಶರಣರು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸುತ್ತಿದ್ದಾರೆ. ಜಾತಿಯ ವಿಷಮತೆಯನ್ನು ನಾವು ಇಂದೂ ಕಾಣುತ್ತೇವೆ. ಮುರುಘಾ ಶರಣರು ಇದರ ವಿರುದ್ಧ ಸದಾ ಹೋರಾಟ ನಡೆಸಿಕೊಂಡು ಬಂದಿದ್ದಾರೆ ಎಂದು ಶ್ಲಾಘಿಸಿದರು. ಚಿಂತಕ ರಂಜಾನ್‌ ದರ್ಗಾ ಮಾತನಾಡಿ, ಇಡೀ ಜಗತ್ತು ಇಂದು ವಚನಗಳ ಕಡೆ ನೋಡುತ್ತಿದೆ. ಒಂದೊಂದು ವಚನವೂ ಜಗತ್ತನ್ನು ಎಚ್ಚರಿಸುತ್ತವೆ. ಶೋಷಣೆಗೆ ಒಳಗಾದವರು, ಬಡವರು, ಸಾಮಾನ್ಯರು ಶಾಂತಿಯನ್ನು ಬಯಸುತ್ತಾರೆ. ಎಲ್ಲ್ಲಿ ಪಾವಿತ್ರ್ಯತೆ, ವ್ಯಕ್ತಿ ಘನತೆ, ಸಮಾನತೆ ಇರುತ್ತದೆಯೋ ಅದು ಮುಕ್ತ ಕ್ಷೇತ್ರ ಹಾಗೂ ಶಿವಭಕ್ತರ ಕ್ಷೇತ್ರವಾಗಿರುತ್ತದೆ. ಈ ಕಲ್ಯಾಣ ದರ್ಶನ ನೀರಿನ ದರ್ಶನ, ಭೂಮಿಯ ದರ್ಶನ, ಆಹಾರ ದರ್ಶನ ಹೀಗೆ ಹಲವಾರು ಮುಖಗಳ ದರ್ಶನವನ್ನು ಮಾಡಿಸುವ ಕಾರ್ಯಕ್ರಮ. ಇದು ಜಗತ್ತಿನ ದರ್ಶನ, ಸರ್ವರ ದರ್ಶನವಾಗಿದೆ. ಕಲ್ಯಾಣದರ್ಶನ ಮಾನವ ಕುಲದ ದಿಗ್ದರ್ಶನ. ಕಲ್ಯಾಣದಲ್ಲಿ ಬಿಜ್ಜಳನ ಕಲ್ಯಾಣ ಮತ್ತು ಶರಣರ ಕಲ್ಯಾಣಗಳಿದ್ದವು. ಜನರನ್ನು ಹೊರತುಪಡಿಸಿದ ಕಲ್ಯಾಣ ಇಲ್ಲವೇ ಇಲ್ಲ. ಇದು ಜನಸಾಮಾನ್ಯರ, ಮಕ್ಕಳ, ಮಹಿಳೆಯರ ಕಲ್ಯಾಣ. ವಚನಗಳು ಇಡೀ ಜಗತ್ತಿಗೆ ಆಧಾರಸ್ತಂಭಗಳು ಎಂದು ತಿಳಿಸಿದರು.

ಕಲ್ಯಾಣ ದರ್ಶನ ಲಿಂಗಾಯತ ಸ್ವಾಮಿಗಳಿಂದ ಮತ್ತು ಮಠಗಳಿಂದ ಮಾತ್ರ ಸಾಧ್ಯ. ಮಾನವ ಸಮಾನತೆಯ ಪರವಾಗಿ ಮಾತನಾಡುವುದೇ ಕಲ್ಯಾಣ ದರ್ಶನ. ನಡೆ, ನುಡಿ, ಸಿದ್ಧಾಂತದಲ್ಲಿ, ಅರಿವು, ಆಚಾರದಲ್ಲಿ ಶರಣರು ಮಾದರಿಯಾಗಿದ್ದರು. ಮೊದಲು ಅಂತರಂಗದ ಶುದ್ಧಿಯಾಗಬೇಕು. ಬಳಿಕ ಬಹಿರಂಗದ ಶುದ್ಧಿ. ಮನುಷ್ಯ ಅಸ್ತಿತ್ವದಲ್ಲಿರುವುದು ಬೇರೆ, ಬದುಕುವುದು ಬೇರೆಯಾಗಿದೆ. ಬದುಕುವುದು ಎಂದರೆ ಶರಣರು ಇದ್ದಂತೆ. ಪ್ರೀತಿಯಿಂದ, ಸಮಾನತೆಯಿಂದ, ಶಾಂತಿಯಿಂದ ನೆಮ್ಮದಿಯಿಂದ ಬದುಕುವುದಾಗಿದೆ ಎಂದರು.

ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ ಮಾತನಾಡಿ, 12ನೇ ಶತಮಾನದ ವಿಚಾರಪೂರ್ಣ ಸಂದೇಶಗಳು ಮರೆಯಾಗದೆ ಸಮಾಜಕ್ಕೆ ಸದಾ ಮಾರ್ಗದರ್ಶಿಯಾಗಿರಬೇಕೆಂಬ ಹಿನ್ನೆಲೆಯಲ್ಲಿ ಕಲ್ಯಾಣ ದರ್ಶನ ಕಾರ್ಯಕ್ರಮವನ್ನು ಮುರುಘಾ ಶರಣರು ಒಂದು ತಿಂಗಳ ಕಾಲ ಶ್ರಾವಣ ಮಾಸದಲ್ಲಿ ನಡೆಸಿದ್ದಾರೆ. ವಚನಗಳು ಒಂದು ವೇಳೆ ಆಂಗ್ಲಭಾಷೆಗೆ ತರ್ಜುಮೆ ಆಗಿದ್ದರೆ ಡಾ| ಅಂಬೇಡ್ಕರ್‌ ಸಹ ಬಸವಣ್ಣನವರ ಧರ್ಮದ ಅನುಯಾಯಿಯಾಗುತ್ತಿದ್ದರು ಎಂದು ತಿಳಿಸಿದರು.

ಮಾಜಿ ಶಾಸಕ ಎ.ವಿ. ಉಮಾಪತಿ ಮಾತನಾಡಿ, ಹಳ್ಳಿಗಳಲ್ಲಿರುವ ಮೌಡ್ಯತೆಯನ್ನು ಹೋಗಲಾಡಿಸುವಲ್ಲಿ, ಜನರಲ್ಲಿ ಶಾಂತಿ ಸೌಹಾರ್ದತೆ ಸಾಮರಸ್ಯತೆ ಭಾವೈಕ್ಯತೆ ಬೆಳೆಸುವಲ್ಲಿ ಮುರುಘಾ ಶರಣರು ಹಮ್ಮಿಕೊಂಡಿದ್ದ ಕಲ್ಯಾಣ ದರ್ಶನ ನೆರವಾಗಿದೆ. ಮುರುಘಾಮಠ ಹೀಗೆ ಅನೇಕ ಸಮಾಜಮುಖೀ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಮಾಜಿ ಶಾಸಕ ಪಿ. ರಮೇಶ್‌, ಜಿಪಂ ಮಾಜಿ ಅಧ್ಯಕ್ಷ ಎಲ್.ಬಿ. ರಾಜಶೇಖರ್‌, ಡಾ| ಎನ್‌.ಬಿ. ಸಜ್ಜನ್‌, ಪಪಂ ಸದಸ್ಯರಾದ ಕೆ.ಸಿ. ರಮೇಶ್‌, ಎಚ್.ಆರ್‌. ನಾಗರತ್ನ ವೇದಮೂರ್ತಿ ಪಿ.ಆರ್‌. ಮಲ್ಲಿಕಾರ್ಜುನ್‌, ಬಿ.ಎಸ್‌. ರುದ್ರಪ್ಪ, ವಿಜಯ, ಪೂರ್ಣಿಮಾ ಬಸವರಾಜ್‌, ಅಶೋಕ್‌, ಧ್ರುವಕುಮಾರ್‌, ಜಿಪಂ ಮಾಜಿ ಸದಸ್ಯ ಲೋಹಿತ್‌ಕುಮಾರ್‌, ತಾಪಂ ಮಾಜಿ ಸದಸ್ಯ ರಾಮಗಿರಿ ರಾಮಪ್ಪ, ಮಾರುತೇಶ್‌, ಎಸ್‌.ಬಿ. ಶಿವರುದ್ರಪ್ಪ ಇದ್ದರು. ನ್ಯಾಯವಾದಿ ಎಸ್‌. ವೇದಮೂರ್ತಿ ಸ್ವಾಗತಿಸಿದರು. ಪಪಂ ಸದಸ್ಯ ಮುರುಗೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಲಪ್ಪ ನಿರೂಪಿಸಿದರು. ಚಂದ್ರಶೇಖರ್‌ ವಂದಿಸಿದರು. ಇದಕ್ಕೂ ಮುನ್ನ ವಿಶೇಷ ಸಾರೋಟಿನಲ್ಲಿ ಡಾ| ಶಿವಮೂರ್ತಿ ಶರಣರು, ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹಾಗೂ ಶ್ರೀ ಬಸವ ಮಾಚಿದೇವ ಸ್ವಾಮೀಜಿಯವರನ್ನು ಮೆರವಣಿಗೆ ಮಾಡಲಾಯಿತು. ಸಮ್ಮಾಳ, ನಂದಿಕೋಲು ಜಾನಪದ ವಾದ್ಯಗಳು ಮೆರವಣಿಗೆಗೆ ಮೆರುಗು ನೀಡಿದವು.

ಟಾಪ್ ನ್ಯೂಸ್

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.