ಎಳ್ಳಅಮಾವಾಸ್ಯೆಸಂಭ್ರಮ
Team Udayavani, Dec 26, 2019, 5:13 PM IST
ಹೊಳೆಆಲೂರ: ಎಳ್ಳ ಅಮಾವಾಸ್ಯೆ ಅಂಗವಾಗಿ ಹೊಳೆಆಲೂರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ರೈತ ಬಾಂಧವರು ತಮ್ಮ ಚಕ್ಕಡಿ, ಆಟೋ, ಟ್ರ್ಯಾಕ್ಟರ್ಗಳಲ್ಲಿ ತಮ್ಮ ತಮ್ಮ ಹೊಲಗಳಿಗೆ ತೆರಳಿ ಭೂಮಿ ತಾಯಿಗೆ ಉಡಿ ತುಂಬಿ, ಹೊಲದ ತುಂಬಾ ಚರಗಾ ಚೆಲ್ಲಿ ಸಂತಸಪಟ್ಟರು.
ಕಳೆದ ಎರಡು ತಿಂಗಳ ಹಿಂದೆ ಮಲಪ್ರಭಾ ನೆರೆ ಹಾವಳಿಗೆ ರೈತರು ಸಾಕಷ್ಟು ಹಾನಿ ಅನುಭವಿಸಿದ್ದರೂ ತಂಪು ವಾತಾವರಣದ ಪರಿಣಾಮ ಈ ಬಾರಿ ಹೊಲದಲ್ಲಿ ಹಿಂಗಾರು ಬೆಳೆ ಉತ್ತಮವಾಗಿ ಬೆಳೆದು ನಿಂತಿರುವ ಕಡಲೆ, ಬಿಳಿಜೋಳ, ಗೋಧಿ, ಮೆಣಸಿನಕಾಯಿ ರೈತರ ಮೊಗದಲ್ಲಿ ಸಂತಸಕ್ಕೆ ಕಾರಣವಾಗಿದೆ.
ಕಡಬು, ಎಳ್ಳ ಹೋಳಿಗೆ, ಶೆಂಗಾ ಹೋಳಿಗೆ, ಪುಂಡಿ ಪಲ್ಲೆ, ಬದನೆಕಾತಿ, ಹೆಸರು ಕಾಳು, ವಿವಿಧ ಚಟ್ನಿಯ ದೊಡ್ಡ ದೊಡ್ಡ ಬುತ್ತಿಗಂಟು ಗಾಡಿಯಲ್ಲಿ ಹೇರಿಕೊಂಡು ಹೊಲ ಇಲ್ಲದ ನೆರೆ ಹೊರೆಯವರನ್ನು ಕರೆದುಕೊಂಡು ಅರಿಸಿನ, ಕುಂಕಮ, ಬಳೆ, ಸೀರೆಯಿಂದ ಹೊಲದ ಮಧ್ಯದಲ್ಲಿರುವ ಬನ್ನಿ ಗಿಡಕ್ಕೆ ಭೂಮಿ ತಾಯಿ ಎಂದು ಭಾವಿಸಿಕೊಂಡು ಉಡಿ ತುಂಬಿದರು. ನಂತರ ಸಾಮೂಹಿಕ ಭೋಜನ ಮಾಡಿ ಸಂತಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
MUST WATCH
ಹೊಸ ಸೇರ್ಪಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!