ರಸ್ತೆಗೆ ಬಂತು ಫಸಲು ಹಸನು ಮಾಡುವ ಕಣ ಸಂಸ್ಕೃತಿ!

ಕಣದ ಬದಲು ರಸ್ತೆ ಮೇಲೆ ತೆನೆ ಚೆಲ್ಲಿ ಫಸಲು ಹಸನು

Team Udayavani, Dec 25, 2019, 11:34 AM IST

25-December-4

„ಎಂ.ಪಿ.ಎಂ. ವಿಜಯಾನಂದಸ್ವಾಮಿ
ಹೊನ್ನಾಳಿ:
ಒಂದು ಕಾಲದಲ್ಲಿ ರೈತರು ಜಮೀನಿನಲ್ಲಿ ಬೆಳೆದ ಫಸಲನ್ನು ಹಸನು ಮಾಡುವುದನ್ನೇ ಹಬ್ಬದ ರೂಪದಲ್ಲಿ ಆಚರಣೆ ಮಾಡಿ ಜೋಳ, ರಾಗಿ, ಭತ್ತ, ಕಾಳು ಕಡಿಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು.

ಗ್ರಾಮಗಳ ಹೊರ ವಲಯದಲ್ಲಿರುವ ತಮ್ಮ ವೃತ್ತಾಕಾರದ ಕಣಗಳನ್ನು ಸ್ವಚ್ಛ ಮಾಡಿ, ಕಣದ ಮಧ್ಯೆ ಮರದ ಗೂಟ ನೆಟ್ಟು, ಸೆಗಣಿಯಿಂದ ಸಾರಿಸಿ, ಕಣದ ಪೂಜೆ ಮಾಡಿ, ಜೋಳದ ತೆನೆ ಕೊಯ್ದು ಹಂತಿ(ಕಲ್ಲಿನ ದುಂಡಿ) ಹೊಡೆಯುವುದರ ಮೂಲಕ ತೆನೆಯ ಕಾಳುಗಳನ್ನು ಬೇರ್ಪಡಿಸಿ ನಂತರ ಗಾಳಿಗೆ ತೂರಿ ಜೋಳದ ಕಾಳುಗಳನ್ನು ಸ್ವಚ್ಛ ಮಾಡಿ ಗ್ರಾಮದಲ್ಲಿರುವ ಹಗೇವು(ಭೂಮಿ ಒಳಭಾಗದ ಸಂಗ್ರಹಗಾರ)ನಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಇದೇ ರೀತಿ ಬೇರೆ ಬೇರೆ ಬೆಳೆಗಳನ್ನು ಹಸನು ಮಾಡುವ ಕ್ರಿಯೆ ಮಾಡಲಾಗುತ್ತಿತ್ತು. ಕಾಲ ಬದಲಾದಂತೆ ರೈತನ ಬದುಕು ಬದಲಾಗುತ್ತಾ ಹೋಯಿತು. ಇಂದು ರೈತ ಬೆಳೆದ ಎಲ್ಲ ಬೆಳೆಗಳನ್ನು ತಂದು ರಸ್ತೆಗೆ ಹಾಕುತ್ತಾನೆ. ರಸ್ತೆಯಲ್ಲಿ ಓಡಾಡುವ ವಾಹನಗಳು ಫಸಲಿನ ಕಾಳುಗಳನ್ನು ಬೇರ್ಪಡಿಸುತ್ತವೆ.

ರಸ್ತೆ ಬದಿಯಲ್ಲಿಯೇ ತೆನೆಯಿಂದ ಬೇರ್ಪಟ್ಟ ಕಾಳುಗಳನ್ನು ತೂರುವ ಕಾರ್ಯ ಮಾಡಿಕೊಂಡು ಚೀಲದಲ್ಲಿ ಕಾಳುಗಳನ್ನು ತುಂಬಿಕೊಂಡು ಮನೆಗೆ ಬರುತ್ತಾನೆ. ಇದರಿಂದ ಕಣ ಸ್ವಚ್ಛ ಮಾಡುವ, ಸೆಗಣಿ ಸಾರುವ, ಎತ್ತುಗಳಿಂದ ಹಂತಿ ಹೊಡೆಯುವ ಕೆಲಸ ಕಾರ್ಯಗಳು ತಪ್ಪುತ್ತವೆ ಎನ್ನುವ ಜಾಣ್ಮೆ ರೈತನದಾಗಿದೆ. ಫಸಲು ಹಸನು ಮಾಡುವ ಕಣ ಸಂಸ್ಕೃತಿ ಮಾಯವಾಗಿ ರಸ್ತೆಯಲ್ಲಿ ಒಕ್ಕಲುತನ ಮಾಡುವ ಸಂಸ್ಕೃತಿ ಬಂದ ಮೇಲೆ ಅಪಘಾತಗಳು ಹೆಚ್ಚಾಗಿವೆ.

ಜೋಳ, ರಾಗಿ, ಭತ್ತ, ತೊಗರಿ ಸೇರಿದಂತೆ ಇತರ ಬೆಳೆಗಳನ್ನು ರೈತರು ತಂದು ರಸ್ತೆಯುದ್ದಕ್ಕೂ ಹಾಕುವುದರಿಂದ ವಾಹನ ಚಾಲಕರು ಕೆಲವೊಮ್ಮೆ ಫಸಲಿನ ಮೇಲೆ ವಾಹನಗಳನ್ನು ಓಡಿಸದೆ ರಸ್ತೆ ಬಿಟ್ಟು ಸಂಚರಿಸುತ್ತಾರೆ. ಇದರಿಂದ ವಾಹನ ಪಲ್ಟಿಯಾಗಿ ದೊಡ್ಡ ಅಪಘಾತಗಳು ಸಂಭವಿಸಿವೆ.

ರೈತರು ರಸ್ತೆಯಲ್ಲಿ ನಿಂತು ಕೆಲಸ ಮಾಡುವ ಸಂದರ್ಭದಲ್ಲಿ ಅಪಘಾತಕ್ಕೀಡಾದ ಸಂದರ್ಭಗಳು ಉಂಟು. ಈಚೆಗೆ ಸಿಸಿ ರಸ್ತೆಗಳು ಗ್ರಾಮಗಳಲ್ಲಿ ನಿರ್ಮಾಣವಾಗಿವೆ. ಕಳಪೆ ಸಿಸಿ ರಸ್ತೆ ಮೇಲೆ ಬೆಳೆ ಹಸನ ಮಾಡುವ ಕ್ರಿಯೆಯಲ್ಲಿ ಜೋಳ, ಭತ್ತ, ತೊಗರಿ, ರಾಗಿಯೊಂದಿಗೆ ಧೂಳು, ಸಿಮೆಂಟಿನ ಹಾಗೂ ಕಲ್ಲಿನ ಚೂರುಗಳು ಸೇರಿಕೊಂಡು ಆಹಾರ ಪದಾರ್ಥಗಳು ಮತ್ತಷ್ಟೂ ಮಲೀನಗೊಳ್ಳುತ್ತವೆ. ರಸ್ತೆ ಕಣ ಸಂಸ್ಕೃತಿಗೆ ಇತಿಶ್ರೀ ಹಾಡಬೇಕಿದೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವುದು ಒಳಿತು ಎಂದು ಹಿರಿಯ ರೈತರು ಹೇಳುತ್ತಾರೆ.

ಇತ್ತೀಚೆಗೆ ಕೃಷಿ ಕುಟುಂಬಗಳು ಒಡೆದು ಅವಿಭಕ್ತ ಕುಟುಂಬಗಳಾಗ ಕಣಗಳಲ್ಲಿ ಕೂಡ ಮನೆಗಳಾಗಿವೆ. ಮನೆಯಲ್ಲಿ ಧಾನ್ಯಗಳ ಸಂಗ್ರಹಕ್ಕೆ ಕೂಡ ಸ್ಥಳಾವಕಾಶ ಇಲ್ಲದೇ ರಸ್ತೆಯಲ್ಲಿಯೇ ಹಸನು ಮಾಡಿ ಮಾರುಕಟ್ಟೆಗೆ ಸಾಗಿಸಲಾಗುತ್ತದೆ.
ಸುರೇಶ್‌,
ಸಹಾಯಕ ಕೃಷಿ ನಿರ್ದೇಶಕರು, ಹೊನ್ನಾಳಿ

ರಸ್ತೆಯಲ್ಲಿ ಒಕ್ಕಲುತನ ಮಾಡುವುದರಿಂದ ಅವಘಡಗಳು ಜರುಗಿವೆ. ಕಾನೂನು ಪ್ರಕಾರ ರಸ್ತೆಯಲ್ಲಿ ಕೃಷಿ ಕಾರ್ಯ ಮಾಡುವ ಹಾಗಿಲ್ಲ. ದೂರು ಬಂದರೆ ಕ್ರಮ ವಹಿಸುತ್ತೇವೆ.
ದೇವರಾಜ್‌, ಸಿಪಿಐ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.