ಕರಿಕಾನಮ್ಮನ ಬೆಟ್ಟದಲ್ಲಿ ಬೆಳದಿಂಗಳ ಗಾನಸುಧೆ

14ರಂದು ಆಯೋಜನೆ ಪಂ| ಬಿ.ಎಸ್‌. ಮಠ-ವಿದುಷಿ ಅಕ್ಕಮಹಾದೇವಿ ಅವರಿಗೆ ನಾದ ಮಾಧವ ಪ್ರಶಸ್ತಿ

Team Udayavani, Dec 8, 2019, 6:18 PM IST

8-December-27

ಜೀಯು, ಹೊನ್ನಾವರ
ಹೊನ್ನಾವರ:
ಹಾಲು ಚೆಲ್ಲಿದಂತೆ ಪ್ರಕೃತಿಯ ಮೇಲೆಲ್ಲಾ ಹಬ್ಬಿಕೊಳ್ಳುವ ಬೆಳದಿಂಗಳ ರಾತ್ರಿಯಲ್ಲಿ ಗದ್ದಲದಿಂದ 15ಕಿಮೀ ದೂರ ಬೆಟ್ಟದ ಮೇಲೆ ಸಂಗೀತ ಕೇಳುವ ಖುಷಿಯೇ ಬೇರೆ. ಬೆಳದಿಂಗಳು ಹುಟ್ಟಿಸುವ ಮಂದ ಉನ್ಮಾದದ ಜೊತೆ ಸಂಗೀತದ ನಾದ ಮೇಲೈಸುತ್ತಿದೆ. ಇಂತಹ ಒಂದು ಅಪೂರ್ವ ಕಾರ್ಯಕ್ರಮವನ್ನು ಡಿ.14 ರಂದು ಮುಸ್ಸಂಜೆಯಿಂದ ಮುಂಜಾನೆಯವರೆಗೆ ಕರಿಕಾನಮ್ಮನ ಬೆಟ್ಟದಲ್ಲಿ ಏರ್ಪಡಿಸಲಾಗಿದೆ.

ಹೆಸರಾಂತ ತಬಲಾ ವಾದಕ ಗೋಪಾಲಕೃಷ್ಣ ಹೆಗಡೆ ಸಂಯೋಜನೆಯಲ್ಲಿ ಕಳೆದ 21ವರ್ಷದಿಂದ ನಡೆಯುತ್ತಿರುವ ದೇಶ ಹಾಗೂ ವಿದೇಶದ ಸಂಗೀತ ಪ್ರಿಯರನ್ನು ಆಕರ್ಷಿಸುತ್ತಿರುವ ಈ ನಾದ ಸಮಾರಾಧನೆಗೆ ಕಲಾಮಂಡಲ, ಎಸ್‌ ಕೆಪಿ ಮ್ಯೂಸಿಕ್‌ ಟ್ರಸ್ಟ್‌, ಕರಿಕಾನಮ್ಮ ದೇವಸ್ಥಾನದ ಆಡಳಿತ ಮಂಡಳಿ ಕೈಜೋಡಿಸುತ್ತದೆ.

ನಾದ ಮಾಧವ ಪ್ರಶಸ್ತಿಯನ್ನು ಪಂ. ಬಿ.ಎಸ್‌. ಮಠ ಹಾಗೂ ವಿದುಷಿ ಅಕ್ಕಮಹಾದೇವಿ ಮಠ ಹಿಂದುಸ್ಥಾನಿ ವಾಯೋಲಿನ್‌ ವಾದಕ ಈ ದಂಪತಿಗೆ ಪ್ರದಾನ ಮಾಡಲಾಗುವುದು. ವಿದ್ವಾನ್‌ ಅವಿನಾಶ ಹೆಬ್ಟಾರ ಸಂಸ್ಮರಣ ಯುವ ಪುರಸ್ಕಾರವನ್ನು ಸಾರಂಗಿ ವಾದಕ ಸಫìರಾಜ ಖಾನ್‌ ಬೆಂಗಳೂರು, ಗಾಯಕ ವಿನಾಯಕ ಹುಗ್ಗಣ್ಣವರ್‌ ಮಂಬೈ, ತಬಲಾ ವಾದಕಿ ವಿಜೇತಾ ಹೆಗಡೆಗೆ ಪ್ರದಾನ ಮಾಡಲಾಗುವುದು.

ದೇವಾಲಯದ ಮುಖ್ಯ ಅರ್ಚಕ ಸುಬ್ರಹ್ಮಣ್ಯ ಭಟ್‌ ಆಶೀರ್ವಚನ ನೀಡುವರು. ಡಾ| ಎಂ.ಜಿ. ಹೆಗಡೆ ಅಧ್ಯಕ್ಷತೆ ವಹಿಸುವರು. ಪಂ| ಬಿ.ಎಸ್‌. ಮಠ ಮತ್ತು ವಿದುಷಿ ಅಕ್ಕಮಹಾದೇವಿ ಮಠ ಅವರ ವಾಯೋಲಿನ್‌ ಜುಗಲ್ಬಂದಿ. ಪಂ| ಕೃಷ್ಣ ಭಟ್‌ ಮುಂಬೈ, ವಿದುಷಿ ಶಾರದಾ ಭಟ್‌ ಕಟ್ಟಿಗೆ ಮೈಸೂರು, ಶಿವಾನಂದ ಭಟ್‌ ಹಡಿನಬಾಳ, ಶ್ರೀಧರ ಹೆಗಡೆ ಕಲ್ಭಾಗ, ಡಾ| ಶಿಲ್ಪಾ ಹೆಗಡೆ ಮೈಸೂರು, ರಾಘವೇಂದ್ರ ಉಪಾಧ್ಯಾಯ ಮೂಡಬಿದ್ರಿ ಇವರ ಹಿಂದುಸ್ಥಾನಿ ಗಾಯನ ಮತ್ತು ಉಸ್ತಾದ್‌ ರಫಿಕ್‌ ಖಾನ್‌ ಮತ್ತು ಉಸ್ತಾದ್‌ ಶಫಿಕ್‌ ಖಾನ್‌ರ ಸಿತಾರ್‌ ಜುಗಲ್ಬಂದಿ, ಸರ್ಫರಾಜ ಖಾನ್‌ ಮತ್ತು ವಿನಾಯಕ ಹುಗ್ಗಣ್ಣವರ ಸಾರಂಗಿ ಮತ್ತು ಗಾಯನ ಜುಗಲ್ಬಂದಿ, ಕಿರಣ ಮಗೆಗಾರು ಹಿಂದುಸ್ಥಾನಿ ಬಾನ್ಸುರಿ, ಶ್ರೀನಿಧಿ ಶಿರೂರು ಕರ್ನಾಟಕ ಬಾನ್ಸುರಿ ವಾದನವಿದೆ. ಇವರಿಗೆ ಗೌರೀಶ ಯಾಜಿ ಕೂಜಳ್ಳಿ, ಹರಿಶ್ಚಂದ್ರ ನಾಯ್ಕ ಇಡಗುಂಜಿ, ಭರತ್‌ ಹೆಗಡೆ ಹೆಬ್ಬಲಸು, ಸತೀಶ ಭಟ್‌ ಹೆಗ್ಗಾರ ಸಂವಾದಿನಿ ಸಾಥ್‌ ನೀಡುವರು.

ಗೋಪಾಲಕೃಷ್ಣ ಹೆಗಡೆ ಕಲ್ಭಾಗ, ಭೀಮಾಶಂಕರ ಬಿದನೂರ್‌ ಮೈಸೂರು, ಪರಮೇಶ್ವರ ಹೆಗಡೆ ಮೈಸೂರು, ವಿಜೇತಾ ಹೆಗಡೆ ಪುಣೆ,
ಮಯಾಂಕ ಬೇಡೇಕರ್‌ ಗೋವ, ಮಧು ಕುಡಾಲ್ಕಾರ್‌ ಅಂಕೋಲಾ, ಗಣಪತಿ ಹೆಗಡೆ ಹರಿಕೇರಿ, ಶರತ್‌ ಹೆಗಡೆ ಬೆಂಗಳೂರು ತಬಲಾ ಸಾಥ್‌ ನೀಡುವರು.

ತಂಪಾದ ವಾತಾವರಣ, ಉತ್ತಮ ಆತಿಥ್ಯದ ಜೊತೆಯಲ್ಲಿ ಸಂಗೀತದಲ್ಲಿ, ಪ್ರಕೃತಿಯ ಮಂದ ಬೆಳಕಿನಲ್ಲಿ ನಡೆಯುವ ಈ ಸಂಗೀತ ಕಾರ್ಯಕ್ರಮ ಬಾಳಿಗೆ ಸಾಂತ್ವನ ನೀಡುವ, ಬಹುಕಾಲ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ. ಕಷ್ಟಪಟ್ಟು ಏರ್ಪಡಿಸುತ್ತೇವೆ, ಇಷ್ಟಪಟ್ಟವರೆಲ್ಲಾ ಬನ್ನಿ ಎಂದು ಗೋಪಣ್ಣ ಕರೆದಿದ್ದಾರೆ.

ಟಾಪ್ ನ್ಯೂಸ್

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.