ಕಣ್ಣೆದುರೇ ಕಟ್ಟಿಕೊಂಡ ಕನಸು ನಾಶ!

•ಅಡಕೆ ಬೆಳೆಗೆ ವ್ಯಾಪಕ ಕೊಳೆ- ಬೆಳೆಗಾರರು ತಲ್ಲಣ •ನಗರ ಹೋಬಳಿಯಲ್ಲಿ ಹೆಚ್ಚು ಕೊಳೆ

Team Udayavani, Aug 26, 2019, 12:40 PM IST

26-Agust-20

ಹೊಸನಗರ: ತೋಟದಲ್ಲಿ ಕೊಳೆಯಿಂದ ಉದುರಿದ ಅಡಕೆ.

ಕುಮುದಾ ಬಿದನೂರು
ಹೊಸನಗರ:
ಬಂಗಾರದ ಬೆಲೆಯ ಅಡಕೆ ಬೆಳೆಯುವ ರೈತರ ಮನದಲ್ಲಿ ಆತಂಕ ಮನೆ ಮಾಡಿದೆ. ಬದುಕಿಗೆ ಆಶ್ರಯವಾಗಿದ್ದ ವರ್ಷದ ಉತ್ಪತ್ತಿಗೆ ಸಂಚಕಾರ ಬಂದಿದ್ದು ತೋಟದಲ್ಲಿ ಮಹಾಮಾರಿ ಕೊಳೆ ತನ್ನ ಅಟ್ಟಹಾಸ ಮೆರೆಯುತ್ತಿದೆ. ವರ್ಷದ ಬೆಳೆಯನ್ನೇ ನಂಬಿದ್ದ ರೈತರಿಗೆ ಮುಂದೇನು ? ಎಂಬ ಉತ್ತರವಿಲ್ಲದ ಪ್ರಶ್ನೆ ಕಾಡುತ್ತಿದೆ. ಅವರ ಮನ, ಮನೆಯಲ್ಲಿ ನೀರವ ಮೌನ ವ್ಯಾಪಿಸಿದೆ.

ಹೌದು, ಅಡಕೆ ಬೆಳೆಯುವ ರೈತ ಇಂದು ಆತಂಕದಲ್ಲಿದ್ದಾನೆ. 10 ದಿನಗಳ ಕಾಲ ಎಡೆಬಿಡದೆ ಸುರಿದ ಮಹಾಮಳೆಗೆ ಅಡಕೆಗೆ ಮಹಾಮಾರಿ ಕೊಳೆ ರೋಗ ಭಾದಿಸಿದೆ. ರೈತರು ಕಟ್ಟಿಕೊಂಡ ಕನಸು ಕಣ್ಣೆದುರೇ ನುಚ್ಚುನೂರಾಗುತ್ತಿದೆ.

ಹೊಸನಗರ ತಾಲೂಕಿನ ಘಟ್ಟ ಪ್ರದೇಶ ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆ ಬಿದ್ದಿದೆ. ಈಗಾಗಲೇ 5340 ಮಿಮೀಗೂ ಹೆಚ್ಚು ಮಳೆ ಸುರಿದಿದೆ. ಅದರ ನೇರ ಪರಿಣಾಮ ಅಡಕೆ ಬೆಳೆಯ ಮೇಲೆರಗಿದೆ.

ಸಾಧಾರಣವಾಗಿ ಶೀತ ವಾತಾವರಣ, ಕನಿಷ್ಟ 20 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ವಾರ ಕಾಲ ಇದ್ದಲ್ಲಿ ಅಡಕೆಗೆ ಕೊಳೆ ತಗುಲಿತು ಎಂದೇ ಲೆಕ್ಕ. ಅತಿಯಾದ ಮಳೆಗೆ ಸಹಜವಾಗಿಯೇ ಕೊಳೆ ಕಾಣಿಸಿಕೊಂಡಿದೆ. ಬಂದ ಕೊಳೆ ಹತೋಟಿಗೆ ಬಾರದೆ ಮಹಾಮಾರಿಯಾಗಿ ಕಾಡಿದೆ. ಅಡಕೆ ಬೆಳೆಗಾರರ ನೆಮ್ಮದಿಗೆ ಕೊಳ್ಳಿ ಇಟ್ಟಿದೆ.

ನಗರ ಹೋಬಳಿಯಲ್ಲಿ ಕೊಳೆ ಪ್ರಮಾಣ ಹೆಚ್ಚು: ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾದ ತಾಲೂಕಿನ ನಗರ ಹೋಬಳಿಯಲ್ಲಿ ಕೊಳೆ ಪ್ರಮಾಣ ಹೆಚ್ಚಿದೆ. ಪಕ್ಕದ ಹುಂಚಾ ಹೋಬಳಿಯಲ್ಲೂ ಕೊಳೆ ಬಾಧೆ ವ್ಯಾಪಕವಾಗಿದೆ. ನಗರ, ಮಾಸ್ತಿಕಟ್ಟೆ, ಯಡೂರು, ಸಂಪೇಕಟ್ಟೆ, ನಿಟ್ಟೂರು, ಕಾರಗಡಿ, ಸೊನಲೆ ಭಾಗಗಳಲ್ಲಿ ಭಾರೀ ಪ್ರಮಾಣದ ಕೊಳೆ ಕಂಡು ಬಂದಿದೆ. ಮರದ ಎರಡು ಮೂರು ಕೊನೆಗಳು ಕೊಳೆ ಹೊಡೆತಕ್ಕೆ ಕೊಳೆತು ಉದುರಿಬಿದ್ದಿದ್ದು ತೋಟದ ತುಂಬೆಲ್ಲ ಅಡಕೆ ಹಾಸಿ ಹೋಗಿದೆ. ತೋಟ ಭಾಗಶಃ ಕೊಳೆಗೆ ಆಹುತಿಯಾಗಿದೆ. 10 ಕ್ವಿಂಟಲ್ ಬೆಳೆಯುವ ರೈತ 4-5 ಕ್ವಿಂಟಲ್ಗೆ ತೃಪ್ತಿಪಡಬೇಕಿದೆ. ಅಲ್ಲದೆ ರೋಗ ತಗುಲಿದ ಮರಗಳಿಗೆ ಜ್ವರ ಬಂದು ಸಾಯುತ್ತಿವೆ. ಮೊದಲು ನೀರುಗೊಳೆಯಾಗಿ ಕಾಣಿಸಿಕೊಂಡ ಕೊಳೆ ಇದೀಗ ಬೂದುಗೊಳೆಯಾಗಿ ಮಾರ್ಪಾಟಾಗಿದೆ. ರೋಗ ನಿಯಂತ್ರಣ ಮಾಡುವಲ್ಲಿ ರೈತರು ಹರಸಾಹಸ ಪಡುತ್ತಿದ್ದಾರೆ. ಪದೇ ಪದೇ ಔಷಧೋಪಚಾರ ನಡೆಯು ತ್ತಿದ್ದರೂ ಕೊಳೆಯ ಮೆರವಣಿಗೆ ಸಾಗುತ್ತಲೇ ಇದೆ.

ಬೋರ್ಡೋಗೆ ಬಗ್ಗದ ಕೊಳೆ: ಅಡಕೆ ಕೊಳೆ ರೋಗಕ್ಕೆ ಭೋರ್ಡೋ ದ್ರಾವಣ ಪರಿಣಾಮಕಾರಿ ಔಷಧವಾಗಿದೆ. ಈಗಾಗಲೇ ಮೂರು ಸಾರಿ ದ್ರಾವಣ ಸಿಂಪಡಣೆ ಮಾಡಿದರೂ ಕೊಳೆ ಹತೋಟಿಗೆ ಬರುತ್ತಿಲ್ಲ. ಒಮ್ಮೆ ಕಾಣಿಸಿಕೊಂಡ ಕೊಳೆ ಅಷ್ಟು ಸುಲಭವಾಗಿ ತಹಬದಿಗೆ ಬಾರದಾಗಿದೆ. ಕೊಳೆ ಬರುವ ಮುನ್ನವೇ ಔಷಧೋಪಚಾರ ನಡೆದಿದ್ದರೆ ಕೊಳೆ ಇಷ್ಟು ಉಲ್ಬಣಿಸುತ್ತಿರಲಿಲ್ಲ. ಆದರೆ ಔಷಧ ಸಿಂಪಡಣೆಗೆ ಮಳೆ ಅಡ್ಡಿಯಾಗಿದ್ದು ದಿನವೂ ಸುರಿದಿದೆ. ಮಳೆಯಲ್ಲಿಯೇ ಔಷಧ ಹೊಡೆದರೂ ಅದು ಪರಿಣಾಮ ಬೀರಿಲ್ಲ. ಹಠ ಬಿಡದ ರೈತರು ವಿವಿಧ ಔಷಧ ಸಿಂಪಡಣೆಯಲ್ಲಿ ತಲ್ಲೀನರಾಗಿದ್ದಾರೆ.

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.