- Monday 16 Dec 2019
ಜಡಿ ಮಳೆಯಲ್ಲೂ ಮಾರ್ದನಿಸಿದ ಶರಾವತಿ ಕೂಗು
ಮುಳುಗಡೆ ತವರು ನಗರ ಹೋಬಳಿಯ ಪ್ರತಿಭಟನೆಗೆ ಹರಿದು ಬಂದ ಸಂತ್ರಸ್ತರು
Team Udayavani, Jul 7, 2019, 11:11 AM IST
ಹೊಸನಗರ: ತಾಲೂಕಿನ ಬಿದನೂರು ನಗರದಲ್ಲಿ ನಡೆದ ಶರಾವತಿ ಉಳಿಸಿ ಪ್ರತಿಭಟನೆಯಲ್ಲಿ ಹರಿದು ಬಂದ ಜನಸಾಗರ.
ಹೊಸನಗರ: ಬೆಂಗಳೂರಿಗೆ ಲಿಂಗನಮಕ್ಕಿ ನೀರು ಹರಿಸುವ ಸಂಬಂಧ ವಿರೋಧ ಹೆಚ್ಚಾಗುತ್ತಿರುವ ಮಧ್ಯದಲ್ಲಿ ಮುಳುಗಡೆ ತವರು ನಗರ ಹೋಬಳಿಯಲ್ಲಿ ವಿನೂತನ ಹೋರಾಟವೊಂದು ದಾಖಲಾಗಿ ಗಮನ ಸೆಳೆದಿದೆ.
ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾಗಿರುವ ನಗರ ಹೋಬಳಿಯಲ್ಲಿ ಕಳೆದೆರಡು ದಿನದಿಂದ ಭಾರೀ ಮಳೆ ಸುರಿಯುತ್ತಿದ್ದರೂ ಕೂಡ ಹೋಬಳಿಯ ಜನರು ಸ್ವಯಂಪ್ರೇರಿತಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಆಗಮಿಸಿ ‘ಶರಾವತಿ ನಮ್ಮದು’.. ‘ಪ್ರಾಣ ಕೊಟ್ಟೇವು ಆದರೆ ನೀರು ಕೊಡೆವು’ ಎಂಬ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಹೋಬಳಿ ಕೇಂದ್ರ ನಗರದ ನೂಲಿಗ್ಗೇರಿಯಿಂದ ಸುಮಾರು 3 ಕಿಮೀ ದೂರ ಪಾದಯಾತ್ರೆ ಮೆರವಣಿಗೆ ನಡೆಸಿದ ಜನರು ನಗರ ಗ್ರಾಪಂ ಕಚೇರಿಗೆ ಆಗಮಿಸಿ ಲಿಂಗನಮಕ್ಕಿ ನೀರು ಬೆಂಗಳೂರಿಗೆ ಹರಿಸದಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಮೆರವಣಿಗೆಯಲ್ಲಿ ಗಮನ ಸೆಳೆದಿದ್ದು: ಮೆರವಣಿಗೆಯಲ್ಲಿ ಪ್ರತಿಮನೆ ಮನೆಯಿಂದ ಗೃಹಿಣಿಯರು ಹೆಚ್ಚಾಗಿ ಹರಿದು ಬಂದಿದ್ದು ಒಂದೆಡೆಯಾದರೆ ಬಿರುಸಿನ ಗಾಳಿ ಮಳೆಯನ್ನು ಲೆಕ್ಕಿಸಿದೆ ಕೊಡೆ ಹಿಡಿದು ಸಾಗಿದ್ದು ಗಮನ ಸೆಳೆಯಿತು.
ಇನ್ನು ಪ್ರತಿಭಟನೆಯಲ್ಲಿ ಹಲವರು ಮಂಡಾಳೆ ಮತ್ತು ಕಂಬಳಿಕೊಪ್ಪೆ ಧರಿಸಿ ಬಂದಿದ್ದು ವಿಶೇಷವಾಗಿತ್ತು. ಹಳ್ಳಿ ಸೊಗಡಿನ ಮೂಲಕ ಜನಜಾಗೃತಿ ಮೂಡಿಸಿದ್ದರು. ಅಲ್ಲದೆ ವಿನೂತನ ಪ್ರತಿಭಟನೆಗೂ ಇದು ಸಾಕ್ಷಿಯಾಯಿತು.
ಪ್ರತಿಭಟನೆಯಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಗುರುಗಳು, ಸಮುದಾಯ ಬಾಂಧವರು ಸ್ವಯಂಪ್ರೇರಿತರಾಗಿ ಜೊತೆಯಾಗಿ ಹೆಜ್ಜೆ ಹಾಕಿದರು.
ನಗರ ವಿದ್ಯಾರ್ಥಿಗಳು ಕೂಡ ಸ್ವಯಂಸ್ಫೂರ್ತಿಯಿಂದ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಆಕ್ರೋಶ ಹೊರಹಾಕಿದ್ದು ಖ್ಯಾತ ಸಾಹಿತಿ ನಾಡಿಸೋಜ ಮತ್ತು ಧರ್ಮಗುರುಗಳ ಪ್ರಶಂಸೆಗೆ ಪಾತ್ರವಾಯಿತು.
ಮೆರವಣಿಗೆ ಸಾಗುವ ಮಧ್ಯದಲ್ಲಿ ಐತಿಹಾಸಿಕ ಬಿದನೂರು ಕೋಟೆಯ ಮುಂಭಾಗ ಕೆಲಹೊತ್ತು ಕಳೆದು ಶರಾವತಿ ಉಳಿವಿಗಾಗಿ ಘೋಷಣೆ ಕೂಗಿದ್ದು ಗಮನ ಸೆಳೆಯಿತು.
ಈ ವಿಭಾಗದಿಂದ ಇನ್ನಷ್ಟು
-
ಸುಳ್ಯ : ಸುಮಾರು 150ಕ್ಕೂ ಅಧಿಕ ಕುಟುಂಬಗಳ ಪಿಂಡಿ ಪಯಣಕ್ಕೆ ವಿದಾಯ ಹೇಳಿ ಬಳ್ಳಿ ಸೇತುವೆ ಮೂಲಕ ಜನರನ್ನು ಸ್ವಾಗತಿಸಿದ ಸುಳ್ಯ- ದೊಡ್ಡೇರಿ ಸಂಪರ್ಕದ ಓಡಬಾೖ ತೂಗು...
-
ಉಡುಪಿ: ಸಂಘಟನ ಶಕ್ತಿಯಿಂದ ಎಂತಹ ಕಠಿನವಾದ ಸಮಸ್ಯೆಯನ್ನೂ ಲೀಲಾಜಾಲವಾಗಿ ಬಗೆಹರಿಸಲು ಸಾಧ್ಯವಿದೆ ಎನ್ನುವುದಕ್ಕೆ ಶ್ರೀ ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ...
-
ಬೆಳ್ಮಣ್: ಶಿರ್ವ-ಬೆಳ್ಮಣ್ ರಸ್ತೆಯ ಪುನಾರು ಶ್ರೀ ಶಾಸ್ತಾವು ಬ್ರಹ್ಮಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿ ತಿರುವಿನಲ್ಲಿ ನಿರಂತರ ಅಪಘಾತ ನಡೆಯುತ್ತಿದ್ದು...
-
ಮಂಗಳೂರು: ಕರಾವಳಿಯ ಸಾಂಸ್ಕೃತಿಕ ಮತ್ತು ಸಾಹಿತ್ಯ ಚರಿತ್ರೆಯ ದಾಖಲಾತಿ ಕೊರತೆ ಇದೆ. ಅದನ್ನು ನೀಗಿಸುವಲ್ಲಿ ಡಾ| ಬಿ.ಎ. ವಿವೇಕ ರೈ ಅವರ "ಕಲಿತದ್ದು ಕಲಿಸಿದ್ದು'...
-
ಮಹಾನಗರ: "ಇಂದಿನ ಪೀಳಿಗೆ ಶಾಸ್ತ್ರೀಯ ಸಂಗೀತವನ್ನು ಇಷ್ಟಪಡುವುದಿಲ್ಲ. ಪಾಶ್ಚಾತ್ಯ ಸಂಗೀತದತ್ತ ಅವರ ಒಲವು ಹೆಚ್ಚುತ್ತಿದೆ ಎಂಬುದಾಗಿ ಪ್ರಚಲಿತ ಕೇಳಿಬರುತ್ತಿರುವ...
ಹೊಸ ಸೇರ್ಪಡೆ
-
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಕಿಚ್ಚು ರಾಷ್ಟ್ರ ರಾಜಧಾನಿ ಹೊಸದಿಲ್ಲಿಗೂ ಹಬ್ಬಿದೆ....
-
ರಾಂಚಿ: ಜಾರ್ಖಂಡ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಜಾರಿಯಲ್ಲಿದ್ದು ನಾಲ್ಕನೇ ಹಂತದ ಮತದಾನ ಸೋಮವಾರ ನಡೆಯುತ್ತಿದೆ. ಮತದಾನ ನಡೆಯುವ ಕ್ಷೇತ್ರಗಳಲ್ಲಿ ಬಿಗಿ...
-
ಕೋಲ್ಕತಾ: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್)ನಲ್ಲಿ ಕೇಂದ್ರ ಸರಕಾರ ತಾನು ಹೊಂದಿರುವ ಶೇ.28ರಷ್ಟು ಷೇರುಗಳನ್ನು ಮಾರುವ ಸಾಧ್ಯತೆ ಇದೆ. ಉಳಿದಿರುವ...
-
ಹೊಸದಿಲ್ಲಿ: ಉನ್ನಾವ್ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಿಲ್ಲಿಯ ಸ್ಥಳೀಯ ಕೋರ್ಟ್ ಸೋಮವಾರ (ಡಿ.16) ತೀರ್ಪು ಪ್ರಕಟಿಸಲಿದೆ. ಬಿಜೆಪಿಯ...
-
"ನನ್ನ 38 ವರ್ಷಗಳ ಸಿನಿಮಾ ಜರ್ನಿ ಸಾರ್ಥಕವೆನಿಸಿದೆ. ಸಿನಿಮಾರಂಗದಲ್ಲಿ ನೆಮ್ಮದಿ ಸಿಕ್ಕಾಗಿದೆ. ಇನ್ನು ಸಾಕು ಅಂದುಕೊಂಡಿದ್ದೆ. ಆದರೆ, ಕವಿರಾಜ್, ನೀವು ಸುಮ್ಮನೆ...