ಪಟ್ಟಣದಲ್ಲಿ ಚರಂಡಿ ಕಾಮಗಾರಿ ಅಪೂರ್ಣ
ಹೊಂಡದಲ್ಲಿ ತ್ಯಾಜ್ಯ ನೀರು ಶೇಖರಣೆ ಖಾಸಗಿ ಜಮೀನಿಗೆ ಕೊಳಚೆ ಹರಿಸಲು ಹುನ್ನಾರ; ತಡೆಯಾಜ್ಞೆ
Team Udayavani, Nov 7, 2019, 4:37 PM IST
ಹುಳಿಯಾರು: ಕಳೆದೊಂದು ವರ್ಷದಿಂದ ಹುಳಿಯಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿದ್ದು, ಜೊತೆಗೆ ಚರಂಡಿ ಕಾಮಗಾರಿ ಎರಡೂ ಬದಿಯಲ್ಲಿ ನಡೆಯುತ್ತಿರುವುದರಿಂದ ತ್ಯಾಜ್ಯದ ನೀರು ಹರಿದು ಹೋಗುವುದೆಲ್ಲಿ ಎಂಬುದು ಯಕ್ಷಪ್ರಶ್ನೆ ಎದುರಾಗಿದೆ.
ರಾಷ್ಟ್ರೀಯ ಹೆದ್ದಾರಿ 234ರ ಕಾಮಗಾರಿ ಪಟ್ಟಣದಲ್ಲಿ ಬಹುತೇಕ ಪೂರ್ಣಗೊಂಡಿದ್ದು, ಹೆದ್ದಾರಿ ಬದಿ ನಿರ್ಮಿಸಲಾಗಿರುವ ಚರಂಡಿ ಸಾಕಷ್ಟು ಕಡೆ ಅಪೂರ್ಣವಾಗಿದೆ. ಜೋರು ಮಳೆ ಬಂದಲ್ಲಿ ನೀರು ಹರಿದು ಹೋಗದೆ ಸಾಕಷ್ಟು ಸಮಸ್ಯೆ ಎದುರಾಗಲಿದೆ.
ಯೋಜನೆ ಪ್ರಕಾರ ಚರಂಡಿ ಕಾಮಗಾರಿ ನಡೆದಿದ್ದರೂ ಒಂದೆಡೆ ತಗ್ಗು ಮತ್ತೂಂದೆಡೆ ಎತ್ತರವಾಗಿ ಚರಂಡಿ ನಿರ್ಮಾಣವಾಗಿದ್ದು, ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವುದು ಅನುಮಾನ ಹಾಗೂ ಹರಿದರೂ ನೀರು ಎಲ್ಲಿಗೆ ಸೇರಲಿದೆ ಎಂಬುದು ತಿಳಿಯದಾಗಿದೆ.
ಹೊಂಡ ನಿರ್ಮಾಣ: ರಾಮಗೋಪಾಲ್ ಸರ್ಕಲ್ ಬಳಿ ಹಳೆಯ ಎಬಿಎಂ ಬ್ಯಾಂಕ್ ಬಳಿ ಚರಂಡಿ ಕಾಮಗಾರಿ ಅಪೂರ್ಣವಾಗಿದ್ದು, ಬಾಲಾಜಿ ಟಾಕೀಸ್ ಹಾಗೂ ಎಪಿಎಂಸಿ ಕಡೆಯಿಂದಲೂ ನೀರು ಹರಿದು ಬರುವಂತೆ ಮಾಡಿರುವುದರಿಂದ ದೊಡ್ಡ ಹೊಂಡವೇ ನಿರ್ಮಾಣವಾಗಿದೆ. ಕಳೆದ 20 ದಿನಗಳಿಂದ ಬರುತ್ತಿರುವ ಮಳೆಗೆ ಹೊಂಡದಲ್ಲಿ ನೀರು ತುಂಬಿದ್ದು, ಕಳೆದ ತಿಂಗಳ ಹಿಂದಷ್ಟೆ ವ್ಯಕ್ತಿಯೊಬ್ಬರು ಬಿದ್ದು ಮೃತಪಟ್ಟಿರುವ ಘಟನೆಯೂ ನಡೆದಿದೆ.
ಹೀಗಿದ್ದಾಗಿಯೂ ಹೊಂಡದಲ್ಲಿರುವ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡುವಲ್ಲಿ ಹೆದ್ದಾರಿ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದಾರೆ. ತ್ಯಾಜ್ಯ ಶೇಖರಣೆ: ಎಪಿಎಂಸಿ ಭಾಗದಿಂದ ಪಟ್ಟಣದ ಹೊರ ಭಾಗಕ್ಕೆ ಹರಿದು ಹೋಗಬೇಕಿದ್ದ ಚರಂಡಿ ನೀರು ಮುಂದಕ್ಕೆ ಸಾಗುವ ಬದಲಿಗೆ ರಾಮ ಗೋಪಾಲ್ ಸರ್ಕಲ್ ಕಡೆ ಹರಿದು ಹೋಗುವಂತೆ ಚರಂಡಿ ನಿರ್ಮಿಸಿದ್ದು, ಇದರಿಂದ ಕೊಳಚೆ ನೀರು ಪಟ್ಟಣದ ಒಳಭಾಗದಲ್ಲಿ ಶೇಖರಣೆಯಾಗಿ ಸಮಸ್ಯೆಗೆ ಕಾರಣವಾಗಿದೆ.
ತಡೆಯಾಜ್ಞೆ: ಸದರಿ ನಿವೇಶನದ ಮಾಲೀಕ ಸಿದ್ದಲಿಂಗ ಸ್ವಾಮಿ ಆರೋಪಿಸಿದ್ದಾರೆ. ಈ ಬಗ್ಗೆ ಹೆದ್ದಾರಿ ಎಂಜಿನಿಯರ್ ಅವರನ್ನು ನಿರಂತರವಾಗಿ ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಕೇಳುತ್ತಿದ್ದರೂ ಯಾರೂ ಇತ್ತ ಗಮನ ಹರಿಸಿಲ್ಲ. ಇದರಿಂದ ಬೇಸತ್ತು ನ್ಯಾಯಾಲಯದ ಮೆಟ್ಟಿಲೇರಿ ಚರಂಡಿ ನೀರು ಜಮೀನು ಕಡೆಗೆ ಬಿಡದಂತೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ.
ಹೊಂಡದಲ್ಲಿ ಶೇರಣೆಯಾಗಿರುವ ನೀರು ಖಾಸಗಿ ಜಮೀನಿಗೆ ಬಿಡುವ ಉದ್ದೇಶ ಹೊಂದಿದ್ದ ಗುತ್ತಿಗೆ ದಾರರು ಮುಂದೇನು ಮಾಡಬೇಕೆಂದು ತಿಳಿಯದೆ ಕೆಲಸ ಸ್ಥಗಿತಗೊಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’