ಅರಳು ಹುರಿಯೋ ಕಾಯಕಕ್ಕೆ ಶತಮಾನದ ಹಿನ್ನೆಲೆ

ನಾಗರ ಪಂಚಮಿಯಲ್ಲಿ ಓಣಿಗೊಂದರಂತೆ ಅರಳಿನ ಭಟ್ಟಿ ಹಾಕುತ್ತಿದ್ದವು ಕೆಲವು ಪರಿವಾರಗಳು

Team Udayavani, Aug 5, 2019, 10:16 AM IST

5-AGUST-4

ಹುಮನಾಬಾದ: ನಾಗರ ಪಂಚಮಿ ನಿಮಿತ್ತ ಪುಟಾಣಿ ಗಲ್ಲಿಯಲ್ಲಿ ಜೋಳದ ಅರಳು ಹುರಿಯುತ್ತಿರುವ ಲಾಂಡೆ ಪರಿವಾರ ಸದಸ್ಯರು.

ಶಶಿಕಂತ ಕೆ.ಭಗೋಜಿ
ಹುಮನಾಬಾದ:
ನಾಗರ ಪಂಚಮಿ ಹಬ್ಬದಂದು ನಾಗದೇವತೆಗೆ ಹಾಲು ಎರೆಯಲು ಹಾಲು, ಜೋಳದ ಅರಳು, ಕಡಲೆ, ಅಳ್ದಿಟ್ಟು ಇತ್ಯಾದಿ ಬೇಕೇ ಬೇಕು. ಅಂಥ ಅರಳು ಹುರಿಯೋ ಕಾಯಕಕ್ಕೆ ಪಟ್ಟಣದ ಪುಟಾಣಿ ಗಲ್ಲಿಯ ವಿವಿಧ ಪರಿವಾರಗಳಿಗೆ ಸರಿ ಸುಮಾರು ಶತಮಾನದ ಹಿನ್ನೆಲೆ ಇದೆ.

ನಾಗರ ಪಂಚಮಿ ಹಬ್ಬದಲ್ಲಿ ನಾಗದೇವತೆಗೆ ನೈವೇದ್ಯಕ್ಕೆ ವಿಶೇಷ ಅಡುಗೆ ಸಿದ್ಧಪಡಿಸಿ, ಸಮರ್ಪಿಸುವುದು ವಾಡಿಕೆ. ಕಳವಿ ಅಕ್ಕಿಯನ್ನು ಕೇವಲ ಪೂಜೆ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತಿತ್ತು. ಆದರೆ ನಿತ್ಯದ ಆಹಾರವಾಗಿ ಅದನ್ನು ಉಳ್ಳವರು ಮಾತ್ರ ಬಳಸುತ್ತಿದ್ದ ಕಾರಣ ಅಕ್ಕಿ ಬಡವರ ಪಾಲಿಗೆ ಗಗನಕುಸುಮವಾಗಿತ್ತು. ಈ ಭಾಗದ ಆಹಾರ ಪದ್ಧತಿ ಅತ್ಯಂತ ಮಹತ್ವದ ಧಾನ್ಯ ಜೋಳವೇ ಆಗಿರುವುದು ಮತ್ತು ದೇಹದ ಆರೋಗ್ಯಕ್ಕೆ ಅತ್ಯುತ್ತಮ ಎಂಬ ಕಾರಣಕ್ಕೆ ಅತ್ಯಂತ ಪವಿತ್ರವಾದ ಜೋಳದ ಅರಳನ್ನೇ ನೈವೇದ್ಯಕ್ಕೆ ಸಮರ್ಪಿಸಲಾಗುತ್ತಿತ್ತು.

ಬೀದರ್‌ನಲ್ಲೇ ಹೆಚ್ಚು ಪ್ರಚಲಿತ: ಜೋಳವನ್ನು ಬೀದರ್‌ ಜಿಲ್ಲೆಯಲ್ಲಿ ಅತೀ ಹೆಚ್ಚು ಬೆಳೆಯಲಾಗುತ್ತಿತ್ತು. ಹೀಗಾಗಿ ನಾಗರ ಪಂಚಮಿ ಹಬ್ಬದಲ್ಲಿ ಇಲ್ಲಿ ಅಕ್ಕಿ (ಕಳವಿ) ಅಳ್ಳಿನ ಬದಲಿಗೆ ಜೋಳದ ಅಳ್ಳನ್ನೇ ಬಳಕೆ ಮಾಡಲಾಗುತ್ತಿತ್ತು. ಶತ‌ಮಾನದಿಂದ ಅಳ್ಳು ಹುರಿಯುವ ಕಾಯಕ ಮಾಡಿಕೊಂಡು ಬಂದ ಪಟ್ಟಣದ ಪುಟಾಣಿ ಗಲ್ಲಿಯ ಸ್ವಾತಂತ್ರ್ಯ ಹೋರಾಟಗಾರ ದತ್ತುರಾವ್‌ ರಾಗೋಜಿ ಸೂರ್ಯವಂಶಿ ಅವರು ಕಳವಿ ಅರಳು ಹುರಿಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಅಕ್ಕಿ ದುಬಾರಿಯಾಗಿ ಯಾರೂ ತರದೇ ಇರುವ ಕಾರಣ ಈ ಭಾಗದ ಜನ ಜೋಳದ ಅರಳನ್ನೇ ಹುರಿಯಲು ಶುರು ಮಾಡಿದ್ದರು.

ಓಣಿಗೊಂದು ಅರಳಿನ ಭಟ್ಟಿ: ವರ್ಷಕ್ಕೊಮ್ಮೆ ಬರುವ ಈ ಹಬ್ಬದಲ್ಲಿ ಗ್ರಾಹಕರು ಜೋಳದ ಅರಳನ್ನೇ ಹುರಿಸಲು ಬರುತ್ತಿರುವುದನ್ನು ಗಮನಿಸಿದ ಸೂರ್ಯವಂಶಿ ಅವರು ತಮ್ಮ ನಿತ್ಯದ ಭಟ್ಟಿಯಲ್ಲಿ ಹುರಿಯಲು ತೊಂದರೆ ಆಗುತ್ತಿದ್ದ ಕಾರಣ ನಾಗರ ಪಂಚಮಿ ಹಬ್ಬದಲ್ಲಿ ಓಣಿಗೊಂದರಂತೆ ಅರಳಿನ ಭಟ್ಟಿ ಹಾಕುತ್ತಿದ್ದರು. ನಾಲ್ಕೈದು ದಶಕಗಳ ಹಿಂದೆ ಜನ ಹುರಿದ ಅರಳು ಪೂಜೆಗಾಗಿ ಮಾತ್ರವಲ್ಲದೇ ಕನಿಷ್ಟ 6 ತಿಂಗಳಿಗೆ ಬೇಕಾಗುಷ್ಟು ಅರಳನ್ನು ಅದಕ್ಕಾಗಿ ಮೀಸಲಾದ ಕಾಗಿ ಜೋಳ ನೆನೆಸಿ, ಆರಿಸಿ ಹುರಿಸಲು ತರುತ್ತಿದ್ದರು. ಮನೆಗೆ ಬರುವ ಅತಿಥಿಗಳಿಗೂ ನಾಲ್ಕಾರು ತಿಂಗಳ ಕಾಲ ಆ ಜೋಳದ ಅರಳಿನಿಂದ ಚೂಡಾ ಮಾಡಿ ಕೊಡುತ್ತಿದ್ದರು. ಜೊತೆಗೆ ಮನೆಯಲ್ಲೇ ಸಾಕಷ್ಟು ಬೆಲ್ಲ ಇರುತ್ತಿದ್ದ ಕಾರಣ ಜೋಳದರಳು ಮತ್ತು ಬೆಲ್ಲದ ಪಾಕು ಮಿಶ್ರಣ ಮಾಡಿ ಉಂಡಿ ಸಿದ್ಧಪಡಿಸಿ, ತಿಂಗಳುಗಟ್ಟಲೇ ಮಕ್ಕಳಿಗೆ ತಿನ್ನಲು ಕೊಡುತ್ತಿದ್ದರು.

ಈ ಕಾಯಕವನ್ನು ಹಳೆ ತಲೆಮಾರಿನ ದತ್ತುರಾವ್‌ ಜಂಬೂರೆ, ನಂದಕುನಮಾರ ಸೂರ್ಯವಂಶಿ, ಹೀರಾಲಾಲ್ ಸೂರ್ಯ ವಂಶಿ, ಸಂಪತ್‌ ಜಂಬೂರೆ, ಸುರೇಖಾಬಾಯಿ ಜಂಬೂರೆ ಮುಂದುವರಿಸಿಕೊಂಡು ಬಂದರು. ಆದರೆ ಬರುಬರುತ್ತ ಅರಳು ಹುರಿಸುವವರ ಸಂಖ್ಯೆ ಕಡಿಮಡೆಯಾಗಿ ಮಣ ಗಟ್ಟಲೇ ಹುರಿಸುವವರು ಕಿಲೋ ಗ್ರಾಂ ತಲುಪಿದ ಕಾರಣ ಈಗ ಓಣಿಗೊಂದು ಭಟ್ಟಿ ಕಾಣುತ್ತಿಲ್ಲ. ಆಗ ಮಣಗಟ್ಟಲೇ ಹುರಿಸುತ್ತಿದ್ದವರು ಬರುಬರುತ್ತ ಸೇರು, ಕೆಜಿಗೆ ಬಂದರು. ಈಗ ಅದೂ ಮಾಯವಾಗಿ ಈಗ ಪೂಜೆಗೆ ಸೀಂಮಿತಗೊಂಡ ನಂತರ ಅದರ ಪ್ರಮಾಣ ಒಂದೆರಡು ಕೆಜಿ ಸಿದ್ಧ ಜೋಳದ ಅರಳನ್ನೇ ಖರೀದಿಸುತ್ತಿರುವ ಕಾರಣ ಜೋಳದ ಅರಳು ಹುರಿಯುವ ವ್ಯಾಪಾರಿಗಳಿಗೆ ಲಾಭದ ಮಾತು ದೂರ ಭಟ್ಟಿ ಸಿದ್ಧತೆಗೆ ತಗುಲುವ ಹಣವೂ ಕೈಗೆ ಬರದಂತಾಗಿದೆ.

ಲಾಭ-ಹಾನಿ ಲೆಕ್ಕವಿಲ್ಲ: ಜನ ಅರಳು ಹುರಿಸಲಿ ಬಿಡಲಿ ಕನಿಷ್ಟ ಹುರಿಸಿದರೂ ಸರಿ. ಆ ಕಾಯಕದಿಂದ ಆದಾಯ ಸಿಗಲಿ, ಸಿಗದೇ ಇರಲಿ ಶತಮಾನದಿಂದ ಚಾಲ್ತಿಯಲ್ಲಿರುವ ಜೋಳದ ಅರಳು ಹುರಿಯುವ ಕಾಯಕವನ್ನು ಆಯಾ ಪರಿವಾರಗಳ ಹೊಸ ತಲೆಮಾರಿನವರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಆ ಪೈಕಿ ದಣ್ಣಾರಾಜ ಮೋರೆ, ವೈಷ್ಣವಿ ಲಾಂಡೆ, ನರೇಶ ಮೋರೆ, ರಾಜೇಶ ಮೋರೆ, ದೇವಿದಾಸ ಸೂರ್ಯವಂಶಿ ಮತ್ತಿತರರು ಕಾಯಕ ಮುಂದುವರಿಸಿಕೊಂಡು ಬರುತ್ತಿರುವುದು ಪರಂಪರೆ ಪ್ರಿಯರಿಗೆ ಸಂತಸ ತಂದಿದೆ.

ದತ್ತುರಾವ್‌ ರಾಘೋಜಿ ಸೂರ್ಯವಂಶಿ, ರಾಜೇಶ ಮೋರೆ, ನೀಲೇಶ ಲಾಂಡೆ ಮೊದಲಾದ ಪರಿವಾರಗಳು ಹಾನಿ ಲಾಭದ ಲೆಕ್ಕ ಹಾಕದೇ ಕಿಂಚಿತ್ತೂ ಬೇಸರಪಡದೇ ಪರಂಪರಾಗತ ಅರಳು ಹುರಿಯುವ ಕಾಯಕವನ್ನು ಯಥಾವತ್‌ ಮುಂದುವರಿಸಿಕೊಂಡು ಬರುತ್ತಿರುವುದು ಪ್ರಶಂಸನೀಯ.
ರವಿಕುಮಾರ ಘವಾಳ್ಕರ್‌,
 ಕಾರ್ಮಿಕ ಪಡೆ ಅಧ್ಯಕ್ಷ

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.