ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ
ಗಣ್ಯರಿಂದ "ಕನ್ನಡ ಕವನ-ಹಿತವಾದ ಮಾತುಗಳು' ಪುಸ್ತಕ ಬಿಡುಗಡೆ
Team Udayavani, Dec 29, 2019, 12:25 PM IST
ಹುಣಸಗಿ: ಪುಸ್ತಕಗಳು ಮನೆಯಲ್ಲಿದ್ದರೆ ಜ್ಞಾನದ ಭಂಡಾರವಿದ್ದಂತೆ, ಯುವ ಪೀಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ಸಾಹಿತಿ ಸಿದ್ರಾಮ ಹೊನ್ಕಲ್ ಹೇಳಿದರು.
ಪಟ್ಟಣದ ಡ್ರೀಮ್ಜ್ ಫಂಕ್ಶನ್ ಹಾಲ್ನಲ್ಲಿ ನಡೆದ “ಕನ್ನಡ ಕವನ-ಹಿತವಾದ ಮಾತುಗಳು’ ಎಂಬ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕಲಿಕೆಗೆ ಪೂರಕ ವಾತಾವರಣ ಇಲ್ಲದಿರುವ ಸಮಯದಲ್ಲಿ ಕನ್ನಡ ಪ್ರೇಮ, ಸಾಹಿತ್ಯ ಆಸಕ್ತಿ ಬೆಳೆಸಿಕೊಂಡು ಕವನ ರಚಿಸಿ ಪುಸ್ತಕ ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮನದ ಭಾವಗಳು, ಪ್ರಸಂಗಗಳು ಮಶಾಕ ತಾಳಿಕೋಟೆ ಸಾರಥ್ಯದ
“ಕನ್ನಡ ಕವನ-ಹಿತವಾದ ಮಾತುಗಳು’ ಚೊಚ್ಚಲು ಪುಸ್ತಕದಲ್ಲಿ ಅಡಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಶಿಕ್ಷಕ ಸಂಗಯ್ಯ ಬಾಚ್ಯಾಳ ಮಾತನಾಡಿ, ಮಶಾಕ ತಾಳಿಕೋಟಿ ಸಾಧನೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕವಿ ಮಶಾಕ ತಾಳಿಕೋಟೆ ಮಾತನಾಡಿ, ನನ್ನ ಬಾಲ್ಯದ ಜೀವನ ಕಷ್ಟಕರವಾಗಿದ್ದು, ನಾನು ಈ ಮಟ್ಟಕ್ಕೆ ಬರಲು ಕಾರಣರಾದ ಎಲ್ಲರನ್ನು ಅಭಿನಂದಿಸುವುದಾಗಿ ತಿಳಿಸಿದರು. ಹಿರಿಯ ಸಾಹಿತಿ ವೀರೇಶ ಹಳ್ಳೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿ.ಪಂ ಮಾಜಿ ಸದಸ್ಯ ಎಚ್ .ಸಿ.ಪಾಟೀಲ, ನಾಗಣ್ಣ ದಂಡಿನ್, ಜಿ.ಪಂ. ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ಮಾತನಾಡಿ, ಪುಸ್ತಕ ರಚನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವರಾಜ ಮಲಗಲದಿನ್ನಿ, ಚನ್ನಕುಮಾರ ಚಿಂಚೋಳಿ, ಖಾಸೀಮಸಾಬ ಅವರಾದಿ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಸಿನ್ನೂರು ಸೇರಿದಂತೆ ಸಾಹಿತ್ಯಾಸಕ್ತರು ಇದ್ದರು.
ವಜ್ಜಲ್ ಪ್ರೌಢಶಾಲೆ ಶಿಕ್ಷಕಿ ನೀಲಮ್ಮ ನಾಗರಬೆಟ್ಟ ನಿರೂಪಿಸಿದರು. ಮಶಾಖ ಯಾಳಗಿ ಸ್ವಾಗತಿಸಿದರು. ವೀರಣ್ಣ ಬೆಳ್ಳುಬ್ಬಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ