ಬಿಜೆಪಿ ಗೆಲುವು ಅಭಿವೃದ್ಧಿ ಸಂಕೇತ: ಸ್ಥಾವರಮಠ
Team Udayavani, May 24, 2019, 4:26 PM IST
ಹುಣಸಗಿ: ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಗುರುವಾರ ಸಂಜೆ ವಿಜಯೋತ್ಸವ ಆಚರಿಸಿದರು.
ರಾಯಚೂರು ಲೋಕಸಭಾ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅಭೂತಪೂರ್ವ ಗೆಲುವಿಗೆ ಹಾಗೂ ದೇಶದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಗೆಲುವು ದೊರೆತ ಪ್ರಯುಕ್ತ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪಟ್ಟಣದ ಕಿತ್ತೂರು ಚನ್ನಮ್ಮ ವೃತ್ತದ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ಮಾತನಾಡಿ, ದೇಶದ ಅಭಿವೃದ್ಧಿಯನ್ನು ಜನತೆ ಮೆಚ್ಚಿ ಮತ್ತೂಮ್ಮೆ ಸುಭದ್ರತೆಗೆ ಜನತೆ ನೀಡಿದ ಮಹಾ ತೀರ್ಪು ಇದು ಎಂದು ಬಣ್ಣಿಸಿದರು.
ಹುಣಸಗಿ ತಾಲೂಕಿನ ವಜ್ಜಲ್, ಕಲ್ಲದೇವನಹಳ್ಳಿ, ಕಾಮನಟಗಿ, ಮುದನೂರು, ಕೋಳಿಹಾಳ, ಮಾಳನೂರು, ಗುಳಬಾಳ, ಹೆಬ್ಟಾಳ, ದೇವತಕಲ್ಲ, ರಾಜನಕೋಳೂರು, ಗೆದ್ದಲಮರಿ, ದ್ಯಾಮನಾಳ ಸೇರಿದಂತೆ ಅನೇಕ ಕಡೆ ವಿಜಯೋತ್ಸವ ಆಚರಿಸಿದರು.
ಎಪಿಎಂಸಿ ಸದಸ್ಯ ದೇವಣ್ಣ ಮಲಗಲದಿನ್ನಿ, ಟಿ.ಎಸ್. ಚಂದಾ, ಮಲ್ಲಿಕಾರ್ಜುನಸ್ವಾಮಿ ಹಿರೇಮಠ, ಹೊನ್ನಪ್ಪ ದೇಸಾಯಿ, ಎಮ್.ಎಸ್. ಚಂದಾ, ರವಿ ಪುರಾಣಿಕಮಠ, ಅನೀಲ ಬಳಿ, ಹೋನ್ನಕೇಶವ ದೇಸಾಯಿ, ರೈತ ಮೋರ್ಚಾ ಅಧ್ಯಕ್ಷ ರಾಜು ಮಲಗಲದಿನ್ನಿ, ದೇವು ಬೈಚಬಾಳ, ಆನಂದ ಬಾರಿಗಿಡದ, ನಾನಾಗೌಡ ಲಕ್ಕುಂಡಿ, ಪ್ರಶಾಂತ ಹಿರೇಮಠ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?