ಎಲ್ಲರೂ ಸಸಿ ಬೆಳೆಸಲು ಆದ್ಯತೆ ನೀಡಿ: ಶಾಂತರಡ್ಡಿ
Team Udayavani, Jun 7, 2019, 11:28 AM IST
ಹುಣಸಗಿ: ಕಲ್ಲದೇವನಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಿಸಲಾಯಿತು
ಹುಣಸಗಿ: ಮಾನವನ ದುರಾಸೆಯಿಂದ ಪರಿಸರ ಅಳಿವಿನ ಅಂಚಿನಲ್ಲಿದ್ದು, ಆದ್ದರಿಂದ ಎಲ್ಲರೂ ಸಸಿಗಳನ್ನು ಬೆಳೆಸಲು ಒತ್ತು ನೀಡಬೇಕಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಶಾಂತರಡ್ಡಿ ಹೇಳಿದರು.
ಸಮೀಪದ ಕಲ್ಲದೇವನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿ ಅವರು ಮಾತನಾಡಿದರು.
ನಿಮ್ಮ ಕುಟುಂಬದ ಯಾವುದೇ ಕಾರ್ಯಕ್ರಮ ಇರಲಿ ಅದರ ನೆನಪಿಗೋಸ್ಕರ ಒಂದು ಗಿಡ ನೆಟ್ಟು ಪಾಲನೆ ಪೋಷಣೆ ಮಾಡಿ ಅದರಿಂದ ನಿಮಗೂ ಅನುಕೂಲ ಮತ್ತು ಸಾಮಾಜಿಕ ಕಳಕಳಿ ತೋರಿಸಿದಂತಾಗುತ್ತದೆ ಎಂದರು.
ನಮ್ಮಲ್ಲಿ ಕೂಡ ಪರಮಾನಂದ ಗುಡ್ಡ, ಕಲ್ಲದೇವನಹಳ್ಳಿ, ಕಚನೂರು, ವಜ್ಜಲ, ಬೈಲಾಪುರ, ದ್ಯಾಮನಾಳ, ಮಾಳನೂರು, ರಾಜನಕೋಳುರು, ನಾರಾಯಣಪುರ ಎಡದಂಡೆ ವಿತರಣಾ ಕಾಲುವೆ, ಕೃಷ್ಣೆಯ ನದಿ ದಂಡೆಯ ಭಾಗದಲ್ಲಿ ಅನೇಕ ಹಸಿರು ಗಿಡಗಳ ಬೀಜದ ನಾಟಿ ಆಗಬೇಕು. ಅದನ್ನು ಹತ್ತು ವರ್ಷಗಳ ಕಾಲ ನಾವೆಲ್ಲರೂ ನಿಗಾ ವಹಿಸಿದಲ್ಲಿ ನಾವು ಕುಡ ಕಾಡು ಬೆಳೆಸಿದಂತಾಗುತ್ತದೆ ಎಂದು ಹೇಳಿದರು.
ಇನ್ನೋರ್ವ ವಲಯ ಅರಣ್ಯಾಧಿಕಾರಿ ಪುಷ್ಪಲತಾ, ಯುವ ಸಾಹಿತಿ ಅಮರಯ್ಯಸ್ವಾಮಿ ಜಾಲಿಬೆಂಚಿ ಮಾತನಾಡಿ, ಗಿಡ ಮರಗಳ ಬೆಳೆಸುವುದರಿಂದ ಮಾನವರಿಗೆ ಮಾತ್ರವಲ್ಲದೆ ಪ್ರಕೃತಿಯ ಎಲ್ಲ ಜೀವ ಸಂಕುಲಗಳಿಗೂ ಆಹಾರ, ನೀರು, ನೆರಳು, ಗಾಳಿ ದೊರೆಯುತ್ತದೆ. ಅದಕ್ಕಾಗಿ ನಮ್ಮ ಪ್ರತಿ ಚಲನವಲನ ಪರಿಸರ ಮುಖೀಯಾಗಿರಬೇಕು ಎಂದರು.
ಮುಖ್ಯ ಶಿಕ್ಷಕ ಹಸನಸಾ ಬೆಕಿನಾಳ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪರಮಾನಂದ ಚೆಟ್ಟಿ, ಮುತ್ತಣ್ಣ ಮೇಟಿ, ಶ್ರೀಕಾಂತ ಗಣಾಚಾರಿ, ನಾಗೇಶ ದೊರೆ, ಸಂಜೀವಪ್ಪ, ಶಿವಪ್ಪ ಬಡಿಗೇರ್, ಈರಣ್ಣ ದೇಸಾಯಿ ಇದ್ದರು. ನಂತರ ಶಾಲಾ ಮಕ್ಕಳು ಸೇರಿದಂತೆ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕನಕಪ್ಪ ವಾಗಿಣಗೇರಾ ನಿರೂಪಿಸಿದರು. ಶಾರದಾ ಸ್ವಾಗತಿಸಿದರು. ಹುಲಗಪ್ಪ ಹಡಗಿನಾಳ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
MUST WATCH
ಹೊಸ ಸೇರ್ಪಡೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!