ಪಾರ್ಕ್ ಇದ್ದೂ ಏನು ಪ್ರಯೋಜನ? ಅಂತಾರೆ ಜನ
Team Udayavani, Jun 17, 2019, 2:52 PM IST
ಜಗಳೂರು: ಪಟ್ಣಣದ ಗಂಗಾಂಬಿಕಾ ಬಡಾವಣೆಯ ಪಾರ್ಕ್ ಮರಗಿಡಗಳಿಲ್ಲದೇ ಬಿಕೋ ಎನ್ನುತ್ತಿದೆ.
ಜಗಳೂರು: ಪಟ್ಟಣದ ಗಂಗಾಂಬಿಕಾ ಬಡಾವಣೆಯ ಪಾರ್ಕ್ ಸೂಕ್ತ ನಿರ್ವಹಣೆ ಇಲ್ಲದೆ ಸಾರ್ವಜನಿಕರ ಉಪಯೋಗಕ್ಕೆ ಬಾರದಂತ ದುಸ್ಥಿತಿ ತಲುಪಿದೆ.
ಪಟ್ಟಣದ ವಿದ್ಯಾ ನಗರದಲ್ಲಿರುವ ಪಾರ್ಕ್ ಬಿಟ್ಟರೆ ಇರುವುದಿದೊಂದೇ ಪಾರ್ಕ್. ಇದೂ ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಲಕ್ಷಗಟ್ಟಲೇ ವೆಚ್ಚಮಾಡಿದ ಪಾರ್ಕ್ಗಳು ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಇದ್ದರೆ ನಿರ್ಮಿಸಿ ಏನು ಪ್ರಯೋಜನ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಪಟ್ಟಣ ಪಂಚಾಯಿತಿ ವತಿಯಿಂದ ಕಳೆದ ಎರಡು ವರ್ಷಗಳ ಹಿಂದೆ 37 ಲಕ್ಷ ರೂ. ವೆಚ್ಚದಲ್ಲಿ ಗಂಗಾಂಬಿಕಾ ಬಡಾವಣೆಯಲ್ಲಿ ಪಾರ್ಕ್ ನಿರ್ಮಿಸಲಾಯಿತು.
ಈ ಉದ್ಯಾನವನದ ರಕ್ಷಾ ಗೋಡೆ ಹೊರತುಪಡಿಸಿ ನೆರಳಿಗೆ ಒಂದು ಗಿಡ ಮರ ಕೂಡ ಇಲ್ಲ. ಇರುವ ಗಿಡ, ಸಸ್ಯಗಳು ನೀರು, ನಿರ್ವಹಣೆ ಇಲ್ಲದೇ ಬಿಸಿಲಿನ ತಾಪಕ್ಕೆ ಸಂಪೂರ್ಣವಾಗಿ ಒಣಗಿ ಹೋಗಿವೆ.
10 ಲಕ್ಷ ರೂ. ವೆಚ್ಚದಲ್ಲಿ ಹಸು ,ಆನೆ, ನವಿಲು ಮೊದಲಾದ ಕಲಾಕೃತಿಗಳನ್ನು ಕಲೆ ಮತ್ತು ಶಿಲ್ಪ ನಿಗಮದ ವತಿಯಿಂದ ನಿರ್ಮಿಸಿ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಲಾಗಿತ್ತು. ಕಲಾಕೃತಿಗಳಿಗೆ ಸೂಕ್ತ ಭದ್ರತೆ ಇಲ್ಲದೆ ಇಲ್ಲಿ ಬರುವ ಮಕ್ಕಳು ಅವುಗಳನ್ನು ಮುಟ್ಟಿ ವಿರೂಪಗೊಳಿಸಿದ್ದಾರೆ.
ಇಲ್ಲಗಳೇ ಬಹಳ: ಉದ್ಯಾನವನಲ್ಲಿ ಬೋರ್ವೆಲ್ ಇದ್ದರೂ ನಿರ್ವಹಣೆ ಇಲ್ಲದೇ ದುರಸ್ತಿಗೆ ಬಂದಿದೆ. ಹೀಗಾಗಿ ಗಿಡ, ಮರಗಳು, ವಿವಿಧ ಅಲಂಕಾರಿಕ ಸಸ್ಯಗಳು ನೀರಿಲ್ಲೇ ಒಣಗಿವೆ.
ಉದ್ಯಾನವನಕ್ಕೆ ಬರುವ ವಿಹಾರಿಗಳಿಗೆ ಕುಳಿತುಕೊಳ್ಳಲು ಒಂದೂ ಆಸನದ ವ್ಯವಸ್ಥೆ ಇಲ್ಲ. ಹೀಗಾಗಿ ಜನ ಇತ್ತ ಸುಳಿಯುವುದೇ ಇಲ್ಲ. ಕುಡಿಯಲು ನೀರು, ಶೌಚಾಲಯದ ವ್ಯವಸ್ಥೆ ಇಲ್ಲ. 37 ಲಕ್ಷ ರೂ ವೆಚ್ಚದ ಈ ಉದ್ಯಾನವನ ಹೆಸರಿಗೆ ಮಾತ್ರ ಇದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಪವನ್.
ಉದ್ಯಾನವನ ನಿರ್ಮಾಣವಾಗಿ ಸುಮಾರು 3 ವರ್ಷಗಳಾಗುತ್ತಿವೆ. ಮೊದಲು ಉದ್ಯಾನವನ ಹಚ್ಚ ಹಸಿರಿನಿಂದ ಕೂಡಿರುತ್ತಿತ್ತು. ಆದರೆ ಸೂಕ್ತ ನಿರ್ವಹಣೆ ಇಲ್ಲದೇ ಇಂಥ ದುಸ್ಥಿತಿಗೆ ತಲುಪಿದೆ.
• ಅಂಜಿನಪ್ಪ,
ನರೇಂದ್ರಪ್ಪ, ಸ್ಥಳಿಯ ನಿವಾಸಿಗಳು.
ಉದ್ಯಾನವನದ ಕೊಳವೆಬಾವಿಯಲ್ಲಿ ನೀರಿಲ್ಲ. ಹೀಗಾಗಿ ಗಿಡಗಳು ಒಣಗಿವೆ. ನಿರ್ವಹಣೆಗೆ ಸಿಬ್ಬಂದಿ ನೇಮಕಕ್ಕೆ ಅವಕಾಶವಿಲ್ಲ. ಮಕ್ಕಳು ಆಟವಾಡುವ ಸಂದರ್ಭದಲ್ಲಿ ಕಲಾಕೃತಿಗಳಿಗೆ ಧಕ್ಕೆಯಾಗಿದೆ. ಉದ್ಯಾನವನ ನಮ್ಮದು ಎಂಬ ಭಾವನೆ ಪ್ರತಿಯೊಬ್ಬರಲ್ಲಿಯೂ ಮೂಡಬೇಕು.
•ಕಂಪಳಮ್ಮ,
ಪಪಂ ಮುಖ್ಯಾಧಿಕಾರಿ, ಜಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
MUST WATCH
ಹೊಸ ಸೇರ್ಪಡೆ
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ