ಮಧ್ಯಾಹ್ನವೇ ಗ್ರಾಮ ಪಂಚಾಯತ್ ಕಚೇರಿ ಬಂದ್: ಜನರ ಆಕ್ರೋಶ
Team Udayavani, May 16, 2019, 1:14 PM IST
ಜಗಳೂರು: ಗುರುಸಿದ್ದಪುರ ಗ್ರಾಮ ಪಂಚಾಯಿತಿಯ ಬಾಗಿಲು ಮುಚ್ಚಿರುವುದು.
ಜಗಳೂರು: ತಾಲೂಕಿನ ಗುರುಸಿದ್ದಪುರ ಗ್ರಾಮ ಪಂಚಾಯಿತಿಯವರು ಮಧ್ಯಾಹ್ನದ ವೇಳೆಗೇ ಕಚೇರಿಯ ಬಾಗಿಲು ಮುಚ್ಚುತ್ತಾರೆ. ಕಳೆದ 4 ತಿಂಗಳಿಂದ ಪಿಡಿಒ ಮುಖ ಸಹ ನಾವು ನೋಡಿಲ್ಲ ಎಂದು ಗ್ರಾಮದ ರೈತ ಸಂಘದ ಮುಖಂಡ ತಿಪ್ಪೇಸ್ವಾಮಿ ದೂರಿದ್ದಾರೆ.
ಗ್ರಾಮಸ್ಥರು ಉದ್ಯೋಗ ಖಾತರಿ, ಕಂದಾಯ ಪಾವತಿ, ಖಾತೆ ಬದಲಾವಣೆ ಸೇರಿದಂತೆ ಇತರೆ ಕೆಲಸಕ್ಕೆ ಬಂದರೆ ಒಬ್ಬ ಸಿಬ್ಬಂದಿ ಸಹ ಕರ್ಚಇಯಲ್ಲಿ ಸಿಗುವುದಿಲ್ಲ. ಇದರಿಂದಾಗಿ ನಮ್ಮ ಕೆಲಸಗಳು ಹಾಗೆಯೇ ಉಳಿಯುತ್ತವೆ. ಗ್ರಾಮದಲ್ಲಿರುವ ಸಮಸ್ಯೆ ಬಗ್ಗೆ ಕೇಳಿದರೆ ಸಿಬ್ಬಂದಿಗಳು ಪಿಡಿಒರತ್ತ ಬೊಟ್ಟು ತೋರಿಸುತ್ತಾರೆ. ಪಿಡಿಒ ನೋಡಿದರೆ ಗ್ರಾಮ ಪಂಚಾಯಿತಿಗೆ ಸರಿಯಾಗಿ ಬಾರುವುದಿಲ್ಲ, ಜನರ ಕೈಗೆ ಸಿಗುವುದಿಲ್ಲ. ದೂರವಾಣಿ ಕೆರೆ ಮಾಡಿದರೂ ಸಹ ಸಿಗುವುದಿಲ್ಲ. ಇವರ ಕೆಲಸ ಕಾರ್ಯಗಳೆಲ್ಲ ದಾವಣಗೆರೆಯಲ್ಲಿಯೇ ನಡೆಯುತ್ತದೆ ಎಂಬುವುದು ಹೊಸ ಕ್ಯಾಂಪ್ ಗ್ರಾಮಸ್ಥರ ಆರೋಪವಾಗಿದೆ.
ಬರಗಾಲದ ಹಿನ್ನೆಲೆಯಲ್ಲಿ ಆದ್ಯತೆಯ ಮೇರೆಗೆ ಜನರ ಸಮಸ್ಯೆ ಪರಿಹರಿಸಬೇಕಾದವರೇ ಕಚೇರಿಗೆ ಬಾರದಿದ್ದರೆ ನಾವು ಯಾರನ್ನು ಕೇಳಬೇಕು ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಕಚೇರಿಯಲ್ಲಿ ಸಿಬ್ಬಂದಿ ಇರದಿರುವ ಕುರಿತು ವಿಚಾರಿಸಿದಾಗ ಸಿಬ್ಬಂದಿಗಳು ಸದರಿ ಗ್ರಾಮದಲ್ಲಿ ತೆರೆಯಲಾಗಿರುವ ಗೋಶಾಲೆಗೆ ನೀರು ಒದಗಿಸುವ ಕೆಲಸಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
•ಜಾನಕಿರಾಮ್, ತಾಪಂ ಇಒ, ಜಗಳೂರು.
ಗ್ರಾಮ ಪಂಚಾಯಿತಿಯಲ್ಲಿ ಎಲ್ಲಾ ಸಿಬ್ಬಂದಿಗಳು ಸರಕಾರ ನಿಗದಿಪಡಿಸಿದ ಸಮಯದವರೆಗೂ ಇರಬೇಕು. ಈ ಘಟನೆ ಕುರಿತು ಪರಿಶೀಲನೆ ನಡೆಸಲಾಗುವುದು.
.ಜಾನಕಿರಾಮ್,
ತಾಪಂ ಇಒ, ಜಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ