ಶಾಲೆ ಅವ್ಯವಸ್ಥೆಗೆ ತಹಶೀಲ್ದಾರ್ ಗರಂ
•ಶೌಚಾಲಯವಾಗಿದೆ ಗೋದಾಮು-ಕಾರದ ಪುಡಿ ಬಿಸಿನೀರೇ ಸಾಂಬಾರ್
Team Udayavani, Jul 4, 2019, 10:12 AM IST
ಜಗಳೂರು: ಶಾಲೆಯಲ್ಲಿ ಕಡತ ಪರಿಶೀಲನೆ ನಡೆಸುತ್ತಿರುವ ತಹಶೀಲ್ದಾರ್ ತಿಮ್ಮಣ್ಣ.
ಜಗಳೂರು: ಮಕ್ಕಳ ಬಿಸಿಯೂಟದ ಸಂಬಾರ್ನಲ್ಲಿ ತರಕಾರಿ ಇಲ್ಲ, ಶೌಚಾಲಯವಿದ್ದರೂ ಬಳಕೆ ಮಾಡದೆ ಗೊದಾಮು ಮಾಡಿಕೊಂಡಿರುವುದು, ಮಣ್ಣು ಮಿಶ್ರಿತ ನೀರು ಮಕ್ಕಳಿಗೆ ನೀಡುತ್ತಿರುವುದನ್ನು ಕಂಡು ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಗರಂ ಆದರು.
ಪಟ್ಟಣದ ಚಳ್ಳಕೆರೆ ರಸ್ತೆಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಪಾಠಶಾಲೆಗೆ ದಿಢೀರ್ ಭೇಟಿ ನೀಡಿದ ತಹಶೀಲ್ದಾರರು ಶಾಲೆಯ ಪರಿಶೀಲನೆ ನಡೆಸಿದರು.
ಅಡುಗೆ ಕೊಣೆಗೆ ನೋಡಿದ ಅವರು, ಸಿಂಟೆಕ್ಸ್ ಟ್ಯಾಂಕ್ನಲ್ಲಿ ಮಣ್ಣು ಮಿಶ್ರಿತ ನೀರು ಕಂಡು ಕೆಂಡಾಮಂಡಲವಾಗಿ, ನಿಮ್ಮ ಮನೆಯಲ್ಲಿ ಇಂಥ ನೀರನ್ನು ಕುಡಿಯುತ್ತೀರಾ? ಏನೂ ಅರಿಯದ ಮಕ್ಕಳಿಗೆ ಇಂಥ ನೀರನ್ನು ಕೊಡುತ್ತೀರಲ್ಲ. ನಿಮಗೆ ನಾಚಿಕೆಯಾಗಬೇಕು ಎಂದು ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ನಂತರ ಶೌಚಾಲಯ ಪರಿಶೀಲನೆ ನಡೆಸಿದರೆ ಅದನ್ನು ಗೋದಾಮು ಮಾಡಿರುವುದು ಕಂಡು ಬಂತು. ಸರ್ ಮಕ್ಕಳೆಲ್ಲ ಬಯಲು ಶೌಚಾಲಯಕ್ಕೆ ತೆರಳುತ್ತಾರೆ ಎಂದು ಶಿಕ್ಷಕರು ವಿವರಿಸಿದರು. ಇದನ್ನು ಸರಿಪಡಿಸದಿದ್ದರೆ ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ತಹಶೀಲ್ದಾರ್ರು, ಊಟದ ಸಮಯವಾದ್ದರಿಂದ ಅಲ್ಲಿಯೇ ಊಟಕ್ಕೆ ಕುಳಿತರು. ಸಾಂಬಾರ್ನಲ್ಲಿ ತರಕಾರಿ ಇಲ್ಲ. ಕಾರದ ಪುಡಿ ಹಾಕಿ ಕುದಿಸಿದ ನೀರನ್ನು ಕೊಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂಥ ಅವ್ಯವಸ್ಥೆ ಬೇರೆ ಎಲ್ಲೂ ಇಲ್ಲ. ಸಮಾಜವನ್ನು ತಿದ್ದುವ ನೀವೇ ಅರ್ಥ ಮಾಡಿಕೊಳ್ಳಬೇಕು. ಇವರಿಗೆ ನೋಟಿಸ್ ನೀಡಿ ಎಂದು ಆರ್ಐಗೆ ಸೂಚನೆ ನೀಡಿದರು. ಆರ್.ಐ. ಸಮೀರ್, ಕುಬೇಂದ್ರನಾಯ್ಕ, ಪ್ರಕಾಶ್, ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ
ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ
Puttur ಎಲೆಕ್ಷನ್ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ