ವಸತಿ ನಿಲಯ ಬಾಗಿಲು ಇನ್ನೂ ತೆರೆದಿಲ್ಲ
ಅಧಿಕಾರಿ ನಿರ್ಲಕ್ಷ್ಯಕ್ಕೆ ಪಾಲಕರ ಆಕ್ರೋಶವಾರಕ್ಕೊಮ್ಮೆ ಬರುತ್ತಾರೆ ಮೇಲ್ವಿಚಾರಕ
Team Udayavani, Oct 26, 2019, 11:04 AM IST
ವಿಜಯಕುಮಾರ ಕಲ್ಲಾ
ಜೇವರ್ಗಿ: ತಾಲೂಕಿನ ಆಂದೋಲಾ ಕರುಣೇಶ್ವರ ಮಠದ ಹಿಂದೆ ಲಕ್ಷಾಂತರ ರೂ. ಖರ್ಚು ಮಾಡಿ ಭವ್ಯವಾದ ವಸತಿ ನಿಲಯ ನಿರ್ಮಿಸಲಾಗಿದ್ದರೂ ಇಲ್ಲಿನ ಮಕ್ಕಳಿಗೆ ಕುಡಿಯುವ ನೀರು, ಊಟ, ಉಪಹಾರ ಸೇರಿದಂತೆ ಯಾವುದೇ ಸೌಲಭ್ಯ ಸಮರ್ಪಕವಾಗಿ ದೊರೆಯುತ್ತಿಲ್ಲ.
ದಸರಾ ರಜೆ ಮುಗಿದು ಐದಾರು ದಿನಗಳು ಕಳೆದರೂ ತಾಲೂಕಿನ ಆಂದೋಲಾ ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಬಾಗಿಲು ಇನ್ನೂ ತೆರೆದಿಲ್ಲ.
ಇದರಿಂದ ಬಡ ವಿದ್ಯಾರ್ಥಿಗಳು ಊಟ, ವಸತಿಗಾಗಿ ಪರದಾಡುವಂತೆ ಆಗಿದೆ. ಈ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಸ್ತೀರ್ಣಾಧಿಕಾರಿ ಹಾಗೂ ಮೇಲ್ವಿಚಾರಕರನ್ನು ಸಂಪರ್ಕಿಸಿದರೆ ಉಡಾಫೆಯಿಂದ ಮಾತನಾಡುತ್ತಾರೆ.
ಈ ಇಲಾಖೆಯ ತಾಲೂಕು ಅಧಿಕಾರಿಗಳು ಸ್ಥಳೀಯರಾಗಿರುವುದರಿಂದ ರಾಜಕೀಯ ಪ್ರಭಾವ ಬೆಳೆಸಿ ಕಳೆದ ಎರಡು ದಶಕಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆ ಎದುರಾಗಿದೆ.
ತಾಲೂಕಿನಲ್ಲಿ ಆಡಳಿತಯಂತ್ರ ಸಂಪೂರ್ಣ ಕುಸಿದಿದೆ ಎಂದು ವಿದ್ಯಾರ್ಥಿಗಳು, ಪಾಲಕರು ಆರೋಪಿಸುತ್ತಿದ್ದಾರೆ. ಆಂದೋಲಾ ಗ್ರಾಮದ ಈ ವಸತಿ ನಿಲಯಕ್ಕೆ ವಾರಕ್ಕೊಮ್ಮೆ ಮೇಲ್ವಿಚಾರಕರು ಬಂದು ಹೋಗುವುದರಿಂದ ಮಕ್ಕಳಿಗೆ ಯಾವುದೇ ಸೌಲಭ್ಯ ದೊರಕುತ್ತಿಲ್ಲ. ಆಂದೋಲಾ ಸೇರಿದಂತೆ ಜೈನಾಪುರ, ಕೆಲ್ಲೂರ, ಬಿರಾಳ, ಮಲ್ಲಾ.ಕೆ, ಮಲ್ಲಾ ಬಿ. ಗ್ರಾಮದ ನೂರು ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿದ್ದು, ಕನಿಷ್ಠ ಸೌಲಭ್ಯಗಳು ಮಕ್ಕಳಿಗೆ ತಲುಪುತ್ತಿಲ್ಲ.
ಸಮಯಕ್ಕೆ ಸಿಗದ ಊಟ, ಸಂಜೆ ನೀಡುವ ಅಲ್ಪ ಉಪಹಾರವೂ ಕಟ್, ಮೊಟ್ಟೆ ಬಾಳೆಹಣ್ಣು ಸಿಗದೇ ಇಲ್ಲಿನ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಕಳೆದ ಅನೇಕ ದಿನಗಳಿಂದ ಸರಕಾರದಿಂದ ಸಿಗಬೇಕಾದ ಅಲ್ಪ ಉಪಹಾರವನ್ನು ವಸತಿ ನಿಲಯ ಮೇಲ್ವಿಚಾರಕರು ನೀಡುತ್ತಿಲ್ಲ. ಅಲ್ಲದೇ ಪ್ರತಿ ರವಿವಾರ ಮೊಟ್ಟೆ , ಬಾಳೆಹಣ್ಣು ವಿತರಣೆ ಮಾಡಬೇಕು. ಆದರೆ ಈ ವಸತಿ ನಿಲಯದ ವಿದ್ಯಾರ್ಥಿಗಳು ಅಲ್ಪ ಉಪಹಾರ, ಸಿಹಿ ಊಟದಿಂದ ವಂಚಿತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
MUST WATCH
ಹೊಸ ಸೇರ್ಪಡೆ
Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!