ಮನೆ ಮೇಲೊಂದು ಕೈತೋಟ

ಖಾಲಿ ನಿವೇಶನದಲ್ಲಿ ಕಬ್ಬು-ಬಾಳೆ ಬೆಳೆ-ಕುರಿ ಸಾಕಾಣಿಕೆಗೆ ಆಸಕ್ತಿ

Team Udayavani, Aug 19, 2019, 10:07 AM IST

19-Agust-2

ಜೇವರ್ಗಿ: ಪಟ್ಟಣದ ದತ್ತನಗರದ ನಿವಾಸಿ ಶಂಕರಯ್ಯ ಹೂಗಾರ ಅವರ ತಾರಸಿ ಮೇಲೆ ತರಕಾರಿ ಬೆಳೆ ಬೆಳೆದಿರುವುದು.

ವಿಜಯಕುಮಾರ ಎಸ್‌.ಕಲ್ಲಾ
ಜೇವರ್ಗಿ: ಸಾಮಾನ್ಯವಾಗಿ ಮನೆ ತಾರಸಿ ಮೇಲೆ ಹೂವಿನ ಕುಂಡ ಅಥವಾ ಅಲಂಕಾರಿಕ ಗಿಡಗಳನ್ನು ಬೆಳೆಸುವುದು ನಾವೆಲ್ಲ ನೋಡಿದ್ದೇವೆ. ಆದರೆ ಪಟ್ಟಣದ ದತ್ತನಗರ ನಿವಾಸಿಯೊಬ್ಬ ತನ್ನ ಮನೆಯ ಮೇಲ್ಛಾವಣಿ ಮೇಲೆ ಕುರಿ ಸಾಕಾಣಿಕೆ ಜೊತೆಗೆ ತರಹೇವಾರಿ ತರಕಾರಿ ಬೆಳೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ವಿಜಯಪುರ ರಸ್ತೆಯಲ್ಲಿ ಬರುವ ಪಟ್ಟಣದ ದತ್ತನಗರದ ನಿವಾಸಿಯಾಗಿರುವ ಶಂಕರಯ್ಯ ಹೂಗಾರ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದವರು.

ತೀವ್ರ ಬಡತನವಿರುವ ಕಾರಣ ಅಲ್ಲಲ್ಲಿ ನಡೆಯುವ ಸಂತೆಗಳಲ್ಲಿ ಪೇಡೆ, ಬೆಳ್ಳುಳ್ಳಿ ವ್ಯಾಪಾರ ಮಾಡುವ ಮೂಲಕ ಉಪಜೀವನ ಸಾಗಿಸುತ್ತಿದ್ದರು. ಕಳೆದ 2004ರಲ್ಲಿ ಸ್ವಗ್ರಾಮ ಕೋಹಳ್ಳಿದಿಂದ ಪಟ್ಟಣಕ್ಕೆ ಬಂದು ನೆಲೆಸಿದ ಶಂಕರಯ್ಯ ಅವರ ಬದುಕು ಈಗ ಸಂಪೂರ್ಣ ಬದಲಾಗಿದೆ. ಕಾಲಿ ಕೈಯಲ್ಲಿ ಪಟ್ಟಣಕ್ಕೆ ಬಂದ ಇವರು ಜೇವರ್ಗಿ ಸುತ್ತಮುತ್ತ ಶಹಾಪುರ, ಮೋರಟಗಿ, ಸಿಂದಗಿ ಸೇರಿದಂತೆ ಅನೇಕ ಕಡೆ ನಡೆಯುವ ಸಂತೆಗಳಲ್ಲಿ ಬೆಳ್ಳುಳ್ಳಿ ವ್ಯಾಪಾರ ಮಾಡಲು ಪ್ರಾರಂಭಿಸಿದರು. ಇದರ ಜೊತೆಗೆ ತಳ್ಳುಬಂಡಿಯಲ್ಲಿ ವ್ಯಾಪಾರ ಪ್ರಾರಂಭಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಕಳೆದ ಐದಾರು ವರ್ಷದ ಹಿಂದೆ ಎಂಟು ಲಕ್ಷ ರೂ. ನೀಡಿ ನಿವೇಶನ ಖರೀದಿಸಿ 14 ಲಕ್ಷ ರೂ.ಖರ್ಚು ಮಾಡಿ ಸುಂದರ ಮನೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಅಲ್ಲದೇ ಇತ್ತೀಚೆಗೆ ಏಳು ಲಕ್ಷ ರೂ. ವೆಚ್ಚದ ಮತ್ತೂಂದು ನಿವೇಶನವನ್ನು ಮನೆ ಹತ್ತಿರವೇ ಖರೀದಿಸಿದ್ದಾರೆ. ಕೃಷಿ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಇವರಿಗೆ ಜಮೀನು ಇಲ್ಲದ ನೋವು ಸದಾ ಕಾಡುತ್ತಿತ್ತು. ಆಗ ಅವರಿಗೆ ಮೊದಲು ಹೊಳೆದಿದ್ದೇ ಮನೆ ಮೇಲ್ಛಾವಣಿ.

ಮಳೆಗಾಲದಲ್ಲಿ ಎಲ್ಲರ ತಾರಸಿ ನೀರು ಹೀರಿ ಖಾಲಿಯಾಗಿ ಉಳಿದರೆ, ಇವರ ಮನೆ ತಾರಸಿ ಹಾಗಲ್ಲವೇ ಅಲ್ಲ. ಮಳೆಗಾಲ ಆರಂಭದಿಂದ ಕಡೆಯತನಕ ಅದರಲ್ಲಿ ಹಸಿರೋ ಹಸಿರು.

ಶಂಕರಯ್ಯನವರು ತಮ್ಮ ಮನೆ ತಾರಸಿ ಮೇಲೆ ವಾಟರ್‌ ಫ್ರೂಫ್‌ ಪ್ಲಾಸ್ಟಿಕ್‌ ಬಳಸಿ ಅದರಲ್ಲಿ ಎರೆಮಣ್ಣು ಹಾಕಿದ್ದಾರೆ. ಸಿಂಟೆಕ್ಸ್‌ ಮೂಲಕ ನೀರು ಹರಿಬಿಟ್ಟು ಅದರಲ್ಲಿ ಬೆಂಡೆಕಾಯಿ, ಮೆಂತೆ, ಪಾಲಕ್‌, ಕೊತಂಬರಿ, ಪುಂಡಿ ಪಲ್ಯಾ, ಚವಳಿ ಕಾಯಿ, ಕುಂಬಳಕಾಯಿ ಹಾಗೂ ಗುಲಾಬಿ ಹೂಗಳನ್ನು ಬೆಳೆಯುತ್ತಿದ್ದಾರೆ. ಖಾಲಿ ನಿವೇಶನದಲ್ಲಿ ಕಬ್ಬು, ಬಾಳೆಗಿಡ, ಕುರಿಗಳಿಗಾಗಿ ಮೇವು, ಸಾಗವಾನಿ, ಹೆಬ್ಬೇವಿನ ಗಿಡಗಳನ್ನು ನೆಟ್ಟಿದ್ದಾರೆ. ಅದರ ಜೊತೆಗೆ ಐದಾರು ಕುರಿ ಮರಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಕುರಿ ಸಾಕಾಣಿಕೆ ಇರುವ ಕಾರಣ ತಾರಸಿ ತೋಟಕ್ಕೆ ಬೇಕಾದಷ್ಟು ಗೊಬ್ಬರ ಲಭ್ಯವಾಗುತ್ತಿದೆ.

ನಮಗೆ ಇರಲು ಜಾಗವಿಲ್ಲ, ಇವೆಲ್ಲಾ ಕೈತೋಟ ಎಲ್ಲಿ ಮಾಡೋಣ ಎನ್ನುವುದು ಕೆಲವರ ಪ್ರಶ್ನೆಯಾಗಿರುತ್ತದೆ. ಆದರೆ ಇದಕ್ಕೆ ಶಂಕರಯ್ಯನವರ ತಾರಸಿ ತೋಟ ತಾಜಾ ಉದಾಹರಣೆ. ದೊಡ್ಡ ನಗರಗಳಲ್ಲಿ ಒಂದಡಿ ಜಾಗ ಬಿಡದೇ ಮನೆ ಕಟ್ಟುವ ಪರಿಸ್ಥಿತಿ ಇರುವುದರಿಂದ ಕೈತೋಟ ಮಾಳಿಗೆ ಏರಿ ಕುಳಿತುಕೊಳ್ಳುವಂತಾಗಿದೆ. ಶಂಕರಯ್ಯನವರಿಗೆ ತಾರಸಿ ತೋಟ ಖುಷಿ, ನೆಮ್ಮದಿ ನೀಡುವುದರ ಜೊತೆಗೆ ವಿಷ ರಹಿತವಾದ ತರಕಾರಿ ಪಡೆಯುತ್ತಿದ್ದಾರೆ. ಬೇಸಿಗೆಯಲ್ಲಿ ಬಿಸಿಲಿನಿಂದ ಬಣಗುಡುವ ತಾರಸಿಗೆ ಹಸಿರು ಗಿಡಗಳು, ಪೊದೆಗಳು ತಂಪಾದ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೇ ತಾರಸಿಯ ಕೆಳಗಿನ ಕೋಣೆಗಳು ಬೇಸಿಗೆ ಕಾಲದಲ್ಲಿ ತಂಪಾಗಿರುತ್ತದೆ. ಈ ತೋಟದಿಂದ ವಾರದ ತರಕಾರಿ ಖರ್ಚು ಉಳಿತಾಯ ಹಾಗೂ ಅಕ್ಕಪಕ್ಕದ ಮನೆಯವರಿಗೆ ಉಚಿತವಾಗಿ ನೀಡುತ್ತೇವೆ ಎಂದು ಶಂಕರಯ್ಯನ ಪತ್ನಿ ಗುಂಡಮ್ಮ ತಿಳಿಸುತ್ತಾರೆ.

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.