ಮೂಗು ಮುಚ್ಚಿಕೊಂಡೇ ಓದುವ ಸ್ಥಿತಿ!

ಮಲ-ಮೂತ್ರ ವಿಸರ್ಜನೆ ತಾಣವಾದ ಶ್ರೀ ಕೃಷ್ಣ ರಾಜೇಂದ್ರ ಗ್ರಂಥಾಲಯ ಪ್ರದೇಶ

Team Udayavani, Oct 20, 2019, 5:51 PM IST

20-October-19

ಕಡೂರು: ತಾಲೂಕು ಕೇಂದ್ರ ಕಡೂರು ಪಟ್ಟಣದ ಶ್ರೀ ಕೃಷ್ಣರಾಜೇಂದ್ರ ಗ್ರಂಥಾಲಯ ಶೀಘ್ರದಲ್ಲೇ ಡಿಜಿಟಲೀಕರಣಗೊಳ್ಳಲಿದೆ. ಆದರೆ, ಗ್ರಂಥಾಲಯದ ಬಳಿ ಸಾರ್ವಜನಿಕರು ಮಲ, ಮೂತ್ರ ವಿಸರ್ಜನೆ ಮಾಡುವುದರಿಂದ ಹೊರಸೂಸುವ ದುರ್ವಾಸನೆಯಿಂದ ಓದುಗರು ಮೂಗು, ಬಾಯಿ ಮುಚ್ಚಿಕೊಂಡೇ ಓದುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಮಾರು 45 ವರ್ಷಗಳ ಇತಿಹಾಸ ಇರುವ ಕಡೂರು ಗ್ರಂಥಾಲಯ 2002ರಲ್ಲಿ ಅಂದಿನ ಶಾಸಕ ಕೆ.ಎಂ.ಕೃಷ್ಣಮೂರ್ತಿ, ಸಂಸದ ಶ್ರೀಕಂಠಪ್ಪನವರಿಂದ ಉದ್ಘಾಟನೆಗೊಂಡಿದೆ. ನೂತನ ಕಟ್ಟಡದ ಆವರಣ ಇದೀಗ ಸಾರ್ವಜನಿಕರ ಬಯಲು ಶೌಚಾಲಯ, ದೂರದ ಊರುಗಳಿಗೆ ಹೋಗುವವರ ದ್ವಿಚಕ್ರ ವಾಹನಗಳ ನಿಲುಗಡೆಯ ತಾಣವಾಗಿ ಆರ್‌ಟಿಒ ಕಚೇರಿಯಂತೆ ಕಂಡು ಬರುತ್ತಿದೆ ಹಾಗೂ ಹೂವು, ತರಕಾರಿ ಮಾರಾಟಗಾರರ ಮಳಿಗೆಯಾಗಿಯೂ ಮಾರ್ಪಟ್ಟಿದೆ.

ಪಟ್ಟಣದ ಜನಸಂಖ್ಯೆಗಿಂತ ಗ್ರಂಥಾಲಯದ ಪುಸ್ತಕಗಳ ಸಂಖ್ಯೆ ಹೆಚ್ಚಾಗಿದ್ದು, ಸುಮಾರು 35 ಸಾವಿರ ಪುಸ್ತಕಗಳ ಬೃಹತ್‌ ಸಂಗ್ರಹವೇ ಇಲ್ಲಿದೆ. ಕಾದಂಬರಿ, ಮಕ್ಕಳ ಕಥೆಗಳ ಪುಸ್ತಕಗಳು, ದಿನಪತ್ರಿಕೆಗಳು, ವಾರ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಹತ್ತು ಹಲವು ವಿಧವಾದ ಪುಸ್ತಕಗಳ ಭಂಡಾರವಾಗಿದೆ. ಆದರೆ, ಉಪಯೋಗಿಸಿಕೊಳ್ಳುವವರ ಸಂಖ್ಯೆ ಮಾತ್ರ ತೀರಾ ಕಡಿಮೆ.

ಸೋಮವಾರ ವಾರದ ರಜೆ ಇದ್ದು, ಉಳಿದಂತೆ ಎಲ್ಲಾ ದಿನಗಳಲ್ಲೂ ತೆರೆದಿರುವ
ಗ್ರಂಥಾಲಯಕ್ಕೆ ತೆರೆದ ದಿನಗಳಂದು ಹೆಚ್ಚಾ ಕಡಿಮೆ 120 ಜನರು ಬಂದು ಹೋಗುತ್ತಾರೆ. ಅದರಲ್ಲಿ ಹೆಚ್ಚಿನ ಭಾಗ ದಿನಪತ್ರಿಕೆಗಳನ್ನು ಓದುವವರೇ ಹೆಚ್ಚಾಗಿರುತ್ತಾರೆ. ಕಾದಂಬರಿಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಗ್ರಂಥಾಲಯದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬೆಳಕಿನ ವ್ಯವಸ್ಥೆ ಅಷ್ಟಕಷ್ಟೇ. ಮುಂದಿನ ಕಾಂಪೌಂಡ ಅನ್ನು ಪುರಸಭೆ ಆಡಳಿತ ಚರಂಡಿ ನಿರ್ಮಿಸಲು ಕೆಡವಿದ್ದರ ಪರಿಣಾಮ ಸಾರ್ವಜನಿಕರು ಬಯಲು ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಗ್ರಂಥಾಲಯದ ಸಹವರ್ತಿ ಎಚ್‌. ಗೋವಿಂದಪ್ಪ ದೂರುತ್ತಾರೆ.

ಡಿಜಿಟಲ್‌ ಗ್ರಂಥಾಲಯದಲ್ಲಿ 10ಕ್ಕೂ ಹೆಚ್ಚಿನ ಕಂಪ್ಯೂಟರ್‌ ಅಳವಡಿಸಲಿದ್ದು,
ಪ್ರತಿಯೊಂದು ಕಂಪ್ಯೂಟರ್‌ಗೆ ನೆಟ್‌ ಕನೆಕ್ಷನ್‌ ಇದೆ. ಯಾವುದೇ ಮಾಹಿತಿಯನ್ನು ಗಣಕ ಯಂತ್ರದ ಮೂಲಕ ಓದಿಕೊಳ್ಳಲು ನೂತನ ಪ್ರಯೋಗ ಆರಂಭವಾಗಲಿದೆ.

ಒಟ್ಟಾರೆ ಬಯಲು ಮುಕ್ತ ಶೌಚಾಲಯ ನಿರ್ಮಾಣವಾದರೆ ಓದುಗರಿಗೆ ಉಪಯುಕ್ತವಾಗಲಿದೆ. ಡಿಜಿಟಲ್‌ ಗ್ರಂಥಾಲಯ ಶೀಘ್ರವೇ ಆರಂಭವಾದರೆ ವಿದ್ಯಾರ್ಥಿಗಳನ್ನು ಸೆಳೆಯಬಹುದು. ಈ ಗ್ರಂಥಾಲಯಕ್ಕೆ ದಾನಿಗಳು ಸಹ ಪುಸ್ತಕಗಳನ್ನು ನೀಡಿದ್ದು, ಅನುಪಯುಕ್ತ ಪುಸ್ತಕಗಳ ಸಂಖ್ಯೆ 3 ಸಾವಿರ ದಾಟಿದೆ. ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧಿಕಾರಿ ಪೂರ್ಣಿಮಾ ಅವರು ಭೇಟಿ ನೀಡಿ ಇಲ್ಲಿನ ಕುಂದುಕೊರತೆಗಳನ್ನು ಬಗೆಹರಿಸಿ ಓದುಗರ ಸಂಖ್ಯೆ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವರೇ ಎಂದು ಕಾದು ನೋಡಬೇಕಾಗಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.