ಕುಂದೂರು ಶ್ರೀ ಕೆಂಪಮ್ಮ ದೇವಿ ರಥೋತ್ಸವ
Team Udayavani, Apr 26, 2019, 4:47 PM IST
ಕಡೂರು: ಕುಂದೂರು ಗ್ರಾಮದ ಶ್ರೀ ಕೆಂಪಮ್ಮ ದೇವಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಕಡೂರು: ತಾಲೂಕಿನ ಕುಂದೂರು ಗ್ರಾಮದೇವತೆ ಶ್ರೀ ಕೆಂಪಮ್ಮದೇವಿ ರಥೋತ್ಸವ ಗುರುವಾರ ಮಧ್ಯಾಹ್ನ 12 ಗಂಟೆಗೆ ಸಾವಿರಾರು ಭಕ್ತರ ಹರ್ಷೋದ್ಘಾರದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕುಂದೂರು, ನಾರಣಾಪುರ, ಎಸ್. ಮಾದಾಪುರ, ರಂಗಾಪುರ, ಗರುಡನಗಿರಿಯ ಐದುಹಳ್ಳಿಯ ಗ್ರಾಮಸ್ಥರು ಸೇರಿ ರಥೋತ್ಸವ ಆಚರಿಸುತ್ತಾರೆ ಕೆಂಪಮ್ಮ ದೇವಿಯನ್ನು ಶೃಂಗರಿಸಿ ಅಲಂಕರಿಸಿದ ರಥಕ್ಕೆ ಕರೆತರಲಾಯಿತು.
ನಾಗಸಮುದ್ರ ಗೊಲ್ಲರಹಟ್ಟಿಯ ಶ್ರೀ ಚಿತ್ರಲಿಂಗೇಶ್ವರ ಸ್ವಾಮೀಜಿ ಆಗಮನದ ನಂತರ ಅಂತರಘಟ್ಟಮ್ಮ, ಕೋಡಿಲಕ್ಕಮ್ಮ, ನಾಗತಿಹಳ್ಳಿ ಗ್ರಾಮದ ಶ್ರೀ ಮರುಳಸಿದ್ದೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಶ್ರೀ ಕೆಂಪಮ್ಮ ತೇರು ಎಳೆಯಲಾಯಿತು. ನಂತರ ಉಯ್ನಾಲೋತ್ಸವ, ಅನ್ನಸಂತರ್ಪಣೆ ಕಾರ್ಯ ನಡೆದವು
ಶ್ರೀ ಕೆಂಪಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಶಾಸಕ ಬೆಳ್ಳಿಪ್ರಕಾಶ್ ರಥೋತ್ಸವದಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು