ಬಿಇಒ ಕಚೇರಿಗೆ ದಾರಿ ಯಾವುದಯ್ಯ?

•ಪ್ರವೇಶ ದ್ವಾರದಲ್ಲೇ ಬಂಡಿ-ಕಾಯಿಪಲ್ಯೆ ಮಾರಾಟ•ಕಚೇರಿ-ಶಾಲೆ ಪ್ರವೇಶಿಸಲು ಮಕ್ಕಳು-ಜನರ ಪರದಾಟ

Team Udayavani, Aug 29, 2019, 10:03 AM IST

29-Agust-1

ಕಲಬುರಗಿ: ಸೂಪರ್‌ ಮಾರ್ಕೆಟ್ದಲ್ಲಿರುವ ಆಸೀಫ್ ಗಂಜ್‌ ಶಾಲೆ ಹಾಗೂ ಕಲಬುರಗಿ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗೇಟಿನ ಎದುರುಗಡೆಯೇ ವ್ಯಾಪಾರ ನಡೆಸಲಾಗುತ್ತಿದೆ.

ವಿಶೇಷ ವರದಿ
ಕಲಬುರಗಿ:
ಮಹಾನಗರಕ್ಕೆ ಪೊಲೀಸ್‌ ಆಯುಕ್ತಾಲಯ ( ಪೊಲೀಸ್‌ ಕಮಿಷನರ್‌) ಬಂದರೂ ಸುಧಾರಣೆಯಾಗದ ಸಂಚಾರಿ ವ್ಯವಸ್ಥೆಗೆ ಕನ್ನಡಿ ಎನ್ನುವಂತಿದೆ ನಗರದ ಹೃದಯ ಭಾಗ ಸೂಪರ್‌ ಮಾರ್ಕೆಟ್ದಲ್ಲಿರುವ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರವೇಶ ದ್ವಾರದ ಭಾಗ.

ಬಿಇಒ ಕಚೇರಿ ಎದರುಗಡೆ ಪ್ರವೇಶ ದ್ವಾರ ಹಾಗೂ ಗೋಡೆಗೆ ಹತ್ತಿಕೊಂಡಂತೆ ಸಾಲು-ಸಾಲಾಗಿ ಬಂಡಿಗಳು ನಿಂತಿರುತ್ತವೆ. ಅಲ್ಲದೇ ಕಾಯಿಪಲ್ಯೆ ಮಾರಾಟ ನಡೆಯುತ್ತದೆ. ಅಷ್ಟೇ ಏಕೆ ಕಚೇರಿ ಎದರೇ ರಸ್ತೆ ಇದ್ದರೂ ಇಲ್ಲದಂತೆ ವಾತಾವರಣ ನಿರ್ಮಾಣವಾಗಿದೆ. ಇದನ್ನು ನೋಡಿದರೆ ಸಂಚಾರಿ ವ್ಯವಸ್ಥೆ ಇದೆಯೇ? ಎನ್ನುವಂತಾಗಿದೆ.

ಕಲಬುರಗಿ ಉತ್ತರ ಬಿಇಒ ಕಚೇರಿ, ಕಚೇರಿ ಹಿಂದೆ ಹಿಂದೆ ಆರು ದಶಕಗಳಿಗಿಂತಲೂ ಹಳೆಯದಾದ ಆಸೀಫ್ ಗಂಜ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ನೂರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಬಿಇಒ ಕಚೇರಿಗೂ ದಿನನಿತ್ಯ ನೂರಾರು ಜನರು ತಮ್ಮ ಕೆಲಸ-ಕಾರ್ಯಗಳಿಗೆ ಬರುತ್ತಾರೆ. ಜತೆಗೆ ಸಾರ್ವಜನಿಕರೂ ಈ ಜಾಗೆಯಲ್ಲಿ ಓಡಾಡುತ್ತಾರೆ. ಬಿಇಒ ಕಚೇರಿಗೆ ಬರಬೇಕೆಂದರೆ ಎಲ್ಲೋ ಗಾಡಿ ನಿಲ್ಲಿಸಿ ಬರಬೇಕು. ಕಚೇರಿಯೊಳಗೆ ದ್ವಿಚಕ್ರ ವಾಹನ ನಿಲ್ಲಿಸಲು ಸ್ಥಳಾವಕಾಶವಿದ್ದರೂ ತರುವಂತಿಲ್ಲ.

ಬೀದಿ ವ್ಯಾಪಾರಿಗಳ ಕಾಟದಿಂದಾಗಿ ಪ್ರವೇಶ ದ್ವಾರಕ್ಕೆ ಗೇಟು ಅಳವಡಿಸಲಾಗಿದೆ. ಇಲ್ಲದಿದ್ದರೆ ಅರ್ಧ ಸರಂಜಾಮುಗಳನ್ನು ಕಚೇರಿ ಆವರಣದೊಳಗೆ ತಂದಿಡುವುದಲ್ಲದೇ, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿರುವುದರಿಂದ ಗೇಟು ಹಾಕಲಾಗುತ್ತಿದೆ. ಈ ಗೇಟಿನ ಮೂಲಕವಾದರೂ ಒಳಗೆ ಹೋಗಬೇಕೆಂದರೆ ಗೇಟಿನ ಎದರೇ ಒಂದಿಂಚು ಜಾಗ ಬಿಡದಂತೆ ವ್ಯಾಪರಿಗಳು ತಮ್ಮ ವಹಿವಾಟು ನಡೆಸುತ್ತಿದ್ದಾರೆ. ಕೇಳಿದರೆ ಎಲ್ಲ ವ್ಯಾಪಾರಿಗಳು ಜಗಳಕ್ಕೆ ಬರುತ್ತಾರೆ.

ಒಮ್ಮೊಮ್ಮೆ ಪ್ರಶ್ನಿಸಿದ್ದಕ್ಕೆ ಶಿಕ್ಷಕರು ಹಾಗೂ ಸಾರ್ವಜನಿಕರ ಮೇಲೆ ಹಲ್ಲೆಗಳೂ ನಡೆದಿವೆ. ಶಿಕ್ಷಣಾಧಿಕಾರಿಗಳು ಕೇಳಿದರೆಂದರೆ ಕಚೇರಿಯೊಳಗೆ ಹಿಂದಿನಿಂದ ಕಸದ ರಾಶಿಯನ್ನೇ ಹಾಕುತ್ತಾರೆ. ಎರಡು ಸಲ ಕಚೇರಿಗೆ ಬೆಂಕಿ ಹಚ್ಚಿದ ಘಟನೆಯೂ ನಡೆದಿದೆ.

ಆಸೀಫ್‌ ಗಂಜ್‌ ಸರ್ಕಾರಿ ಶಾಲೆ ಮುಖ್ಯಶಿಕ್ಷಕರು ಗೇಟಿನ ಎದುರಲ್ಲೇ ನಿಂತು ಒಬ್ಬೊಬ್ಬರನ್ನೇ ಒಳಗಡೆ ಬಿಡುತ್ತಿರುತ್ತಾರೆ. ಇಲ್ಲದಿದ್ದರೆ ಮಕ್ಕಳು ಒಳಗೆ ಪ್ರವೇಶಿಸುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಕಚೇರಿ ಆವರಣದೊಳಗೆ ಉರ್ದು-ಮರಾಠಿ ಶಾಲೆಯೂ ಇದೆ. ಶಿಕ್ಷಕರ ಸಂಘದ ಕಚೇರಿಯೂ ಇದೆ.

ಅತಿಕ್ರಮಣಕಾರರ ಹಾವಳಿ: ಅತಿ ಪುರಾತನವಾದ ಈ ಆಸೀಫ್ ಗಂಜ್‌ನ ಶಾಲೆ ಮಹಾನಗರದ ಹೃದಯ ಭಾಗದಲ್ಲಿರುವುದು ಹಲವು ಭೂ ಅತಿಕ್ರಮಣಕಾರರ ಒಂದು ಕಣ್ಣಿದೆ. ಈಗಾಗಲೇ ಹಿಂದುಗಡೆ ಸ್ವಲ್ಪ ಅತಿಕ್ರಮಣವಾಗಿದೆ. ಇರುವ ಶಾಲೆಯೊಂದು ಮಕ್ಕಳ ಕೊರತೆಯಿಂದ ಮುಚ್ಚಿದರೆ ಬಿಇಒ ಕಚೇರಿಯೊಂದು ಯಾವಾಗ ಬೇಕಾದರೂ ಸ್ಥಳಾಂತರ ಮಾಡಿದರೆ ಜಾಗವೂ ತಮ್ಮದಾಗಬಹುದೆಂದು ತಿಳಿದು ಕೆಲವರು ಇಲ್ಲ-ಸಲ್ಲದ ದಂಧೆಗಳನ್ನು ನಿರೂಪಿಸಲಾಗುತ್ತಿದೆ.

ಇದೇ ಬಿಇಒ ಕಚೇರಿ ಎದರುಗಡೆ ಕಸ್ತೂರಬಾ ಬಾಲಿಕಾ ವಿದ್ಯಾಲಯ ಹಾಗೂ ಪ್ರೌಢ ಶಾಲೆಯಿದೆ. ಇಲ್ಲಿಯೂ ಅದೇ ಸ್ಥಿತಿಯಿದೆ. ಇದರ ಜತೆಗೆ ಕಳ್ಳಕಾಕರ ಹಾವಳಿಯೂ ಇದೆ. ಇದಕ್ಕೆ ಕಡಿವಾಣ ಇಲ್ಲವೇ? ಎಂದು ಸಾರ್ವಜನಿಕರು ಅಸಹಾಯಕತೆಯಿಂದ ಕೇಳುತ್ತಿದ್ದಾರೆ.

ಕ್ರಮ ಅವಶ್ಯ: ಆಸೀಫ್ ಗಂಜ್‌ನ ಶಾಲೆ ಕಾಂಪೌಂಡ್‌ ಹೆಚ್ಚಿಸಿ ಸೌಲಭ್ಯ ಕಲ್ಪಿಸಿದವರು ದಶಕದ ಹಿಂದೆ ಶಿಕ್ಷಣ ಸಚಿವರಾಗಿದ್ದ ಬಸವರಾಜ ಹೊರಟ್ಟಿ ಅವರು. ಸಚಿವರಿದ್ದ ಸಂದರ್ಭದಲ್ಲಿ ಶಾಲೆ ಬೀದಿ ವ್ಯಾಪಾರಿಗಳ ಕಾಟದಿಂದ ಕೈ ತಪ್ಪಲಿದೆ ಎಂಬುದನ್ನರಿತು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಕಟ್ಟೆಚ್ಚರ ನೀಡಿದ್ದರಿಂದ ಶಾಲೆ ಹಾಗೂ ಕಚೇರಿ ಉಳಿಯುವಂತೆ ಆಗಿದೆ. ಈಗ ಮತ್ತೇ ಕ್ರಮದ ಅವಶ್ಯಕತೆವಿದೆ.

ಬೀದಿ ವ್ಯಾಪಾರಿಗಳ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೂರು ತಮ್ಮ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲಾಗುವುದು.
ಡಿ.ಕಿಶೋರ ಬಾಬು,
 ಉಪ ಪೊಲೀಸ್‌ ಆಯುಕ್ತರು

ಕಚೇರಿಯೊಳಗೆ ಬರಲು ಅನುಭವಿಸುತ್ತಿರುವ ಕಷ್ಟ ಹಾಗೂ ನಡೆಯುವ ಕೆಲವು ತೊಂದರೆಗಳ ಕುರಿತಾಗಿ ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಹಲವು ಸಲ ತರಲಾಗಿದೆ. ಪೊಲೀಸ್‌ರು ಪಾಲಿಕೆ ಮೇಲೆ ಹಾಗೂ ಪಾಲಿಕೆಯವರು ಪೊಲೀಸರ ಮೇಲೆ ಹಾಕುತ್ತಾ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಚೆನ್ನಬಸಪ್ಪ ಮುಧೋಳ,
 ಬಿಇಒ, ಕಲಬುರಗಿ ಉತ್ತರ

ಪೊಲೀಸರ ಹಾಗೂ ಪಾಲಿಕೆಯವರ ಪರೋಕ್ಷ ಸಹಾಯದಿಂದಲೇ ಬೀದಿ ವ್ಯಾಪಾರಿಗಳ ದೌರ್ಜನ್ಯ ಹೆಚ್ಚಳವಾಗಿದೆ. ನಡು ರಸ್ತೆ ಮೇಲೆಯೇ ರಾಜಾರೋಷವಾಗಿ ಬಂಡಿಗಳನ್ನು ನಿಲ್ಲಿಸಿ ವ್ಯಾಪಾರ ಮಾಡಲಾಗುತ್ತಿದೆ. ಹೀಗಾಗಿ ದ್ವಿಚಕ್ರವಾಹನ ಮೇಲೆ ತಿರುಗಾಡದಂತಾಗಿದೆ. ಹೀಗೆ ಪರಿಸ್ಥಿತಿ ಮುಂದುವರಿದಲ್ಲಿ ಸುಧಾರಣೆ ಹೇಗೆ ಸಾಧ್ಯ?
ಮಲ್ಲಿಕಾರ್ಜುನ ಎಚ್.,
 ನಗರ ನಿವಾಸಿ

ಟಾಪ್ ನ್ಯೂಸ್

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೇವು?: ಖಂಡ್ರೆ

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.