ಬಂದೇ ನವಾಜ್‌ ದರ್ಗಾ ಉರುಸು ಆರಂಭ

ಅದ್ಧೂರಿಯಾಗಿ ನಡೆದ ಸಂದಲ್ ಮೆರವಣಿಗೆ•ರಾತ್ರಿಯಿಡಿ ನಡೆಯಿತು ಕವ್ವಾಲಿ ಕಾರ್ಯಕ್ರಮ

Team Udayavani, Jul 20, 2019, 11:14 AM IST

20-July-11

ಕಲಬುರಗಿ: ಐತಿಹಾಸಿಕ ಖಾಜಾ ಬಂದೇ ನವಾಜ್‌ ದರ್ಗಾ ಬಣ್ಣ-ಬಣ್ಣದ ದೀಪಾಲಂಕಾರದಿಂದ ಝಗಮಗಿಸುತ್ತಿದೆ.

ಕಲಬುರಗಿ: ಬಸವಾದಿ ಶರಣರು, ಸೂಫಿ ಸಂತರ ನಾಡಿನ ಹಿಂದೂ-ಮುಸ್ಲಿಮರ ಭಾವೈಕ್ಯತೆ ಧಾರ್ಮಿಕ ಕ್ಷೇತ್ರವಾದ ನಗರದ ಹಜರತ್‌ ಖಾಜಾ ಬಂದೇ ನವಾಜ್‌ ದರ್ಗಾದ 615ನೇ ಉರುಸು ಶುಕ್ರವಾರದಿಂದ ಅದ್ದೂರಿಯಾಗಿ ಆರಂಭವಾಗಿದೆ.

ದಕ್ಷಿಣದ ಭಾರತದ ಅಜ್ಮೇರ್‌ ಎಂದೇ ಖಾಜಾ ಬಂದೇ ನವಾಜ್‌ ದರ್ಗಾ ಪ್ರಸಿದ್ಧಿ ಪಡೆದಿದೆ. 14ನೇ ಶತಮಾನದ ಸೂಫಿ ಸಂತ ಖಾಜಾ ಬಂದೇ ನವಾಜ್‌ ದೇಶ-ವಿದೇಶಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ. ಶುಕ್ರವಾರ ಸಂಜೆ ಸಂದಲ್ (ಗಂಧ) ಮೆರವಣಿಗೆ ಮೂಲಕ ಉರುಸು ಪ್ರಾರಂಭಗೊಂಡಿತು.

ಮಹೆಬೂಬ್‌ ಗುಲ್ಶನ್‌ ಉದ್ಯಾನವನದಿಂದ ಸಂಜೆ 6:30ಕ್ಕೆ ಆರಂಭವಾದ ಸಂದಲ್ (ಗಂಧ) ಮೆರವಣಿಗೆ ನಗರದ ಪ್ರಮುಖ ರಸ್ತೆಗಳ ಮೂಲಕ ಹಾಯ್ದು ರಾತ್ರಿ 10 ಗಂಟೆಗೆ ದರ್ಗಾ ತಲುಪಿತು. ವಿಜೃಂಭಣೆಯಿಂದ ನಡೆದ ಮೆರವಣಿಗೆಯಲ್ಲಿ ಮುಸ್ಲಿಮರು ಸೇರಿದಂತೆ ವಿವಿಧ ಧರ್ಮಗಳ ಸಾವಿರಾರು ಜನರು ಭಾಗವಹಿಸಿದ್ದರು. ನಂತರ ರಾತ್ರಿಯಿಡಿ ಖ್ಯಾತ ಕಲಾವಿದರು ಕವ್ವಾಲಿ ಕಾರ್ಯಕ್ರಮ ನಡೆಸಿಕೊಟ್ಟರು.

ಬೆಳಗ್ಗೆಯಿಂದಲೇ ಅನೇಕ ಭಾಗಗಳಿಂದ ಭಕ್ತರು ವಾಹನಗಳನ್ನು ಮಾಡಿಕೊಂಡು ತಂಡೋಪ ತಂಡವಾಗಿ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಖಾಜಾ ಬಂದೇ ನವಾಜ್‌ ಅವರ ಹಾಗೂ ಕುಟುಂಬಸ್ಥರ ಮಜಾರ್‌ಗಳಿಗೆ ಪುಷ್ಪಗಳನ್ನು ಅರ್ಪಿಸಿದರು. ಉರುಸು ಪ್ರಯುಕ್ತ ದರ್ಗಾವನ್ನು ಸಂಪೂರ್ಣ ದೀಪಾಲಂಕಾರ ಮಾಡಲಾಗಿದ್ದು, ದರ್ಗಾದ ಆವರಣ ಬಣ್ಣ-ಬಣ್ಣದ ದೀಪಗಳಿಂದ ಜಗಮಗಿಸುತ್ತಿದೆ.

ಉಳಿಯಲಿರುವ ಭಕ್ತರು: ರಾಜ್ಯದ ವಿವಿಧ ಭಾಗಗಳು ಹಾಗೂ ನೆರೆಯ ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣದ ಭಕ್ತಾದಿಗಳು ಎರಡ್ಮೂರು ದಿನ ಇಲ್ಲಿಯೇ ನೆಲೆಸುತ್ತಾರೆ. ಹಲವು ಭಕ್ತರು ಉರುಸು ಮುನ್ನಾ ದಿನ ಬುಧವಾರ ರಾತ್ರಿಯೇ ಬಂದಿದ್ದು, ದರ್ಗಾದ ಆವರಣ, ಹಿಂಭಾಗದ ಪ್ರದೇಶದಲ್ಲಿ ತಂಗಿದ್ದಾರೆ.

ಹಲವರು ಖಾಲಿ ಸ್ಥಳದಲ್ಲಿ ಒಲೆ ಹಚ್ಚಿ ಅಡುಗೆ ತಯಾರಿಸಿಕೊಂಡರೆ, ಮತ್ತೆ ಕೆಲವರು ತಾವು ಉಳಿದುಕೊಂಡಿರುವ ಸ್ಥಳದಲ್ಲೇ ಸಣ್ಣ ಗ್ಯಾಸ್‌ ಸಿಲಿಂಡರ್‌ ಇಟ್ಟು ಅಡುಗೆ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಖಾಜಾ ಬಂದೇ ನವಾಜ್‌ ದರ್ಗಾ ಮುಖ್ಯಸ್ಥ ಡಾ| ಸೈಯದ್‌ ಶಹಾ ಖುಸ್ರೋ ಹುಸೇನಿ ನೇತೃತ್ವದಲ್ಲಿ ನಡೆದ ಸಂದಲ್ (ಗಂಧ) ಮೆರವಣಿಗೆಯಲ್ಲಿ ಸೈಯದ್‌ ಮೊಹಮ್ಮದ್‌ ಅಲಿ-ಅಲ್ ಹುಸೇನಿ, ಡಾ| ಸೈಯದ್‌ ಮುಸ್ತಾಫಾ ಹುಸೇನಿ, ಸೈಯದ್‌ ಶಹಾ ಯೂಸಫ್‌ ಹುಸೇನಿ, ಸೈಯದ್‌ ಶಹಾ ಆರೀಫ್‌ ಹುಸೇನಿ, ಸೈಯದ್‌ ಅಹ್ಮದ ಹುಸೇನಿ, ಸೈಯದ್‌ ಶಹಾ ತಕ್ವಿಯುಲ್ಲಾ ಹುಸೇನಿ ಹಾಗೂ ಇತರ ರಾಜ್ಯಗಳ ದರ್ಗಾಗಳು ಮುಖ್ಯಸ್ಥರು ಪಾಲ್ಗೊಂಡಿದ್ದರು.

ಖರೀದಿ ಜೋರು: ಜು.18ರಂದು ಖಾಜಾ ಬಜಾರ್‌ನಲ್ಲಿ ಅಖೀಲ ಭಾರತ ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟನೆ ನಡೆದಿದೆ. ತಿಂಗಳ ಕಾಲ ನಡೆಯುವ ವಸ್ತು ಪ್ರದರ್ಶನದಲ್ಲಿ ದೇಶದ ವಿವಿಧ ಪ್ರದೇಶಗಳಿಂದ ಕರಕುಶಲ, ಗೃಹೋಪಯೋಗಿ ವಸ್ತುಗಳ ಮಾರಾಟಗಾರರು ಭಾಗವಹಿಸುವರು. ದೇಶದ ವಿವಿಧ ಪ್ರದೇಶದ ವಸ್ತುಗಳು ಒಂದೇ ಕಡೆ ಸಿಗುವುದರಿಂದ ಖರೀದಿಗೆ ಹೆಚ್ಚಿನ ಜನರು ಇಲ್ಲಿ ಬರುತ್ತಾರೆ. ಇದರ ಜೊತೆಗೆ ದರ್ಗಾ ಮೈದಾನದಲ್ಲಿ ಜೋಕಾಲಿ, ಆಟದ ಸಾಮಗ್ರಿ ಅಂಗಡಿಗಳು, ತಿಂಡಿ ತಿನಿಸುಗಳು ಸೇರಿದಂತೆ ಅನೇಕ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಮಕ್ಕಳು, ಕುಟುಂಬ ಸಮೇತ ಬಂದು ಖರೀದಿ ಮಾಡುತ್ತಾರೆ.

ಟಾಪ್ ನ್ಯೂಸ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.