ಮನುಷ್ಯರಿಗೆ ಬಸವ ತತ್ವ ಅನಿವಾರ್ಯ: ಕೂಡಲಸಂಗಮ ಶ್ರೀ
ಮನೆಗಳನ್ನು ಮಹಾಮನೆಗಳನ್ನಾಗಿ ಮಾಡಿದ್ದು ಶರಣರು
Team Udayavani, May 12, 2019, 12:43 PM IST
ಕಲಬುರಗಿ: ಬಸವೇಶ್ವರ ವೃತ್ತದ ಬಳಿ ಹಮ್ಮಿಕೊಂಡಿರುವ ಬಸವ ಜಯಂತಿ ಉತ್ಸವದಲ್ಲಿ ಎಸ್.ಕೆ.ಕಾಂತಾ, ಮಲ್ಲಿಕಾರ್ಜುನ ಜನವಾಡ, ಎಲ್.ಬಿ.ಕೆ.ಆಲ್ದಾಳ, ಸಂಬಣ್ಣ ಹೊಳಕುಂದಿ ಅವರಿಗೆ ಕಾಯಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಲಬುರಗಿ: ವಿಶ್ವಜ್ಯೋತಿ ಬಸವಣ್ಣನವರ ತತ್ವ ಜಾಗತಿಕ ತತ್ವವಾಗಿದ್ದು, ಮನುಷ್ಯರಿಗೆ ಬಸವ ತತ್ವ ಅನಿವಾರ್ಯ ಎಂದು ಕೂಡಲಸಂಗಮದ ಪಂಚಮಶಾಲಿ ಪೀಠದ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬಸವೇಶ್ವರ ವೃತ್ತದ ಬಳಿಯಿರುವ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಶನಿವಾರ ಬಸವ ಜಯಂತಿ ಉತ್ಸವದ ಐದನೇ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬಸವಣ್ಣ ಎಂದರೆ ಕ್ರಾಂತಿ, ಕ್ರಾಂತಿ ಎಂದರೆ ಬಸವಣ್ಣ. ಕಲ್ಯಾಣ ನಾಡಾದ ಕಲಬುರಗಿ ನೆಲದಲ್ಲಿ ಬಸವಣ್ಣನವರ ಜಯಂತಿ ಉತ್ಸವ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಕಾರವಾರದ ಬಸವಧಾಮದ ಬಸವ ರಾಜೇಶ್ವರಿ ಮಾತಾಜಿ ಮಾತನಾಡಿ, ನಮ್ಮಪ್ಪ ಬಸವಣ್ಣ, ನಮ್ಮವ್ವ ವಚನ ಸಾಹಿತ್ಯ. ಲಿಂಗಾಯತ ಧರ್ಮದ ಡಿಎನ್ಎ ಪರೀಕ್ಷೆ ಮಾಡಿದರೆ ನಮ್ಮಪ್ಪ ಬಸವಣ್ಣ ಎಂದು ಫಲಿತಾಂಶ ಬರುತ್ತದೆ ಎಂದರು.
ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎಂಬ ಕಾಲದಲ್ಲೇ ಮಹಿಳೆಯರಿಗೆ ಅವಕಾಶ ಕೊಟ್ಟರೆ, ಪುರುಷನಿಗಿಂತ ಮುಂದೆ ಬರುವಳು ಎಂದು ತೋರಿಸಿಕೊಟ್ಟಿದ್ದು ಬಸವಣ್ಣನವರು ಎಂದು ಹೇಳಿದರು.
ಶರಣರು ಮತ್ತು ಮಹಿಳಾ ಸಂವೇದನೆ ಬಗ್ಗೆ ಹಾರೂಗೇರಿಯ ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್. ಮಠಪತಿ ಮಾತನಾಡಿ, 12ನೇ ಶತಮಾನದಲ್ಲಿ ಮಹಿಳೆಯರನ್ನು ಹೀನ ಸ್ಥಿತಿಯಲ್ಲಿ ಕಾಣಲಾಗುತ್ತಿತ್ತು. ಮಹಿಳೆಯರು ದೇವತಾ ಸಮಾನರು ಎನ್ನುತ್ತಿದ್ದರೂ ಅವರಿಗೆ ಸ್ವಾತಂತ್ರ್ಯ ನಿರಾಕರಿಸಲಾಗಿತ್ತು. ಮಹಿಳೆಯರನ್ನು ಗೌರವಿಸುವ, ಆರಾಧಿಸುವ ಹಕ್ಕು ಇರಲಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಧ್ವನಿ ಕೊಟ್ಟಿದ್ದು ಬಸವಣ್ಣನವರು. ಅನುಭವ ಮಂಟಪದಲ್ಲಿ 33 ಮಹಿಳೆಯರು ವಚನಗಳನ್ನು ಬರೆಯ ತೊಡಗಿದರು. ಮನೆಗಳನ್ನು ಮಹಾಮನೆಗಳನ್ನಾಗಿ ಮಾಡುವ ಶಕ್ತಿಯನ್ನು ಶರಣರು ತುಂಬಿದರು ಎಂದರು.
ಇದೇ ವೇಳೆ ಮಾಜಿ ಸಚಿವ ಎಸ್.ಕೆ. ಕಾಂತಾ, ಎಂ.ಕೆ.ಆರ್ಟ್ನ ಮಲ್ಲಿಕಾರ್ಜುನ ಜನವಾಡ, ಎಲ್.ಬಿ.ಕೆ. ಆಲ್ದಾಳ, ಸಂಬಣ್ಣ ಹೊಳಕುಂದಿ ಅವರಿಗೆ ಕಾಯಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಗುಂಡಣ್ಣ ಡಿಗ್ಗಿ, ಸಾಯಬಣ್ಣ ಹೋಳ್ಕರ್, ಬಿ.ಎಚ್.ಭಜಂತ್ರಿ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಶಶೀಲ ನಮೋಶಿ, ಬಸವ ಉತ್ಸವ ಸಮಿತಿ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ, ಕಾರ್ಯಾಧ್ಯಕ್ಷ ಬಿ.ಎಂ.ರಾಂಪುರೆ, ಮಾಜಿ ಮೇಯರ್, ಶರಣಕುಮಾರ ಮೋದಿ, ಆರ್.ಜಿ. ಶೆಟಗಾರ, ರವೀಂದ್ರ ಶಾಬಾದಿ, ಬಸವರಾಜ ಮೊರಬದ, ಗುರುಬಸಪ್ಪ ಪಾಟೀಲ, ಅರ್ಜುನ ಭದ್ರೆ, ಸಚಿನ್ ಫರಹತಾಬಾದ್, ಧನರಾಜ ಜೀಗರೆ, ಶಂಕರ ಹೂಗಾರ, ಮಸ್ತಾನ ಬಿರಾದಾರ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ