ಗುರುನಾನಕ ಜಯಂತಿ: ಭವ್ಯ ಮೆರವಣಿಗೆ

ಗುರುಗ್ರಂಥ ಸಾಹೇಬ್‌ಗ ಧರ್ಮಗುರುಗಳಿಂದ ಪೂಜೆ •ಯುವಕರಿಂದ ಕತ್ತಿ ವರಸೆ ಪ್ರದರ್ಶನ

Team Udayavani, Aug 23, 2019, 10:10 AM IST

23-April-2

ಕಲಬುರಗಿ: ಸಿಖ್‌ ಧರ್ಮಗುರು ಗುರುನಾನಕರ 550ನೇ ಜಯಂತಿ ಆಚರಣೆ ನಿಮಿತ್ತ ಸಿಖ್‌ ಸಮುದಾಯದವರಿಂದ 'ಪ್ರಕಾಶ್‌ ಪುರಬ್‌ ಯಾತ್ರೆ' ಮೆರವಣಿಗೆ ನಡೆಯಿತು.

ಕಲಬುರಗಿ: ಸಿಖ್‌ ಧರ್ಮಗುರು ಗುರುನಾನಕರ 550ನೇ ಜಯಂತಿ ಆಚರಣೆ ನಿಮಿತ್ತ ನಗರದಲ್ಲಿ ಸಿಖ್‌ ಸಮುದಾಯದವರಿಂದ ಮೊದಲ ಬಾರಿಗೆ ‘ಪ್ರಕಾಶ್‌ ಪುರಬ್‌ ಯಾತ್ರೆ’ ಅಂಗವಾಗಿ ವಿಜೃಂಭಣೆಯ ಮೆರವಣಿಗೆ ನಡೆಯಿತು.

ನಗರದ ಸರಸ್ವತಿ ಗೋಡೌನ್‌ ಪ್ರದೇಶದಲ್ಲಿರುವ ಗುರುದ್ವಾರದಲ್ಲಿ ದಿನಪೂರ್ತಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಸಂಜೆ ಬೀದರ್‌ನಿಂದ ‘ಪ್ರಕಾಶ್‌ ಪುರಬ್‌ ಯಾತ್ರೆ’ ನಗರಕ್ಕೆ ಆಗಮಿಸಿತು. ಆಳಂದ ಮಾರ್ಗವಾಗಿ ಆಗಮಿಸಿದ ಯಾತ್ರೆಯನ್ನು ಸಿಖ್‌ ಮುಖಂಡರು ಸಂತೋಷದಿಂದ ಬರ ಮಾಡಿಕೊಂಡರು. ಯಾತ್ರೆ ಅಂಗವಾಗಿ ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ಬೃಹತ್‌ ಮೆರವಣಿಗೆ ಜರುಗಿತು.

ನಗರದ ಕಿರಾಣಾ ಬಜಾರ್‌, ಜಗತ್‌ ವೃತ್ತ ಮತ್ತು ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ ಸುತ್ತುವರಿದು ಮರಳಿ ಗುರುದ್ವಾರಕ್ಕೆ ಮೆರವಣಿಗೆ ಸಾಗಿತು. ವಿಶೇಷ ವಾಹನದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.

ವಾಹನದಲ್ಲಿ ಇರಿಸಲಾಗಿದ್ದ ಗುರುಗ್ರಂಥ ಸಾಹೇಬ್‌ಗ ಧರ್ಮಗುರುಗಳು ಪೂಜೆ ಸಲ್ಲಿಸಿದರು. ಮೆರವಣಿಗೆ ಆರಂಭಕ್ಕೂ ಮುನ್ನ ಸಿಖ್‌ ಧರ್ಮದ ಯುವಕರು ಆಕರ್ಷಕ ಕತ್ತಿ ವರಸೆ ಪ್ರದರ್ಶಿಸಿದರು. ಅಲ್ಲದೇ, ಮೆರವಣಿಗೆಯುದ್ದಕ್ಕೂ ಖಡ್ಗ, ಕತ್ತಿಗಳನ್ನು ಹಿಡಿದು ಸಂಚರಿಸಿದರು.

ಕುದುರೆಗಳ ಸವಾರಿ, ಒಂಟೆಗಳ ಸವಾರಿ, ಧ್ವಜಧಾರಿ ಯುವಕರು ಮತ್ತು ಯುವತಿಯರು ಪಾಲ್ಗೊಂಡು ಪ್ರಾರ್ಥನೆ ಮಾಡಿದರು. ಪುರುಷರು ಕೇಸರಿ ಪಗಡಿ ಹಾಗೂ ಉಡುಪು ಧರಿಸಿದ್ದರೆ, ಮಹಿಳೆಯರು ಬಿಳಿ ಬಟ್ಟೆ ಹಾಗೂ ಕೇಸರಿ ಬಣ್ಣದ ಚುನ್ನಿ ಧರಿಸಿದ್ದು ಗಮನ ಸೆಳೆಯಿತು.

ಮೆರವಣಿಗೆ ಆರಂಭವಾಗುವ ಗಂಜ್‌ನ ಮುಖ್ಯ ರಸ್ತೆಯ ಪಕ್ಕದಲ್ಲಿ ವಿಶೇಷ ವೇದಿಕೆ ನಿರ್ಮಿಸಲಾಗಿತ್ತು. ಡಿಸಿಪಿ ಡಿ.ಕಿಶೋರಬಾಬು, ಸಹಾಯಕ ಆಯುಕ್ತ ರಾಹುಲ್ ಪಾಂಡ್ವೆ, ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ, ಎನ್‌ಇಕೆಆರ್‌ಟಿಸಿ ಮಾಜಿ ಅಧ್ಯಕ್ಷ ಇಲಿಯಾಸ್‌ ಬಾಗವಾನ್‌ ಅವರನ್ನು ಸಿಖ್‌ ಸಮುದಾಯದಿಂದ ಸನ್ಮಾನಿಸಲಾಯಿತು.

ಹಿಂದೂ, ಮುಸ್ಲಿಂ, ಸಿಖ್‌, ಇಸಾಯಿ, ಕ್ರಿಸ್ತ ಧರ್ಮಗಳೆಲ್ಲ ಮನುಕುಲಕ್ಕೆ ಒಳಿತನ್ನೇ ಬಯಸಿವೆ. ಶತಮಾನಗಳ ಹಿಂದೆ ಲೋಕಕ್ಕೆ ಶಾಂತಿ ಮಂತ್ರವನ್ನು ಗುರುನಾನಕರು ನೀಡಿದ್ದರು. ಅವರ ವಿಚಾರಗಳ ಬೆಳಕಿನಲ್ಲಿ ಸಿಖ್‌ ಸಮುದಾಯ ಸಾಗುತ್ತಿದೆ ಎಂದು ಮುಖಂಡ ಜಸ್ವೀರ್‌ ಸಿಂಗ್‌ ಹೇಳಿದರು.

ಮುಖಂಡರಾದ ಸುರೇಂದರ್‌ಪಾಲ ಸಿಂಗ್‌ ಭಾಟಿಯಾ, ಅಮೃತ್‌ ಸಿಂಗ್‌, ಗುರ್ಮೀತ್‌ಸಿಂಗ್‌, ಸತ್ಬೀರ್‌ಸಿಂಗ್‌ ಆನಂದ, ಜಸ್ವೀರ್‌ಸಿಂಗ್‌ ಛಾಬ್ರಾ, ವಿಜಯಕುಮಾರ ಶೇವಲಾನಿ, ರಾಜೇಂದ್ರಸಿಂಗ್‌ ಭಾಟಿಯಾ, ಘನಶಾಮ ನಂದವಾನಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೇವು?: ಖಂಡ್ರೆ

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

1-wqeqwewq

Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.