ಜನವರಿಯಲ್ಲಿ ಕಾಶಿ ಪೀಠದ ಗುರುಕುಲ ಶತಮಾನೋತ್ಸವ
Team Udayavani, Jul 22, 2019, 3:19 PM IST
ಕಲಬುರಗಿ: ಜ್ಞಾನ ನಗರಿಯಾದ ಉತ್ತರ ಪ್ರದೇಶದ ಕಾಶಿಯಲ್ಲಿ ಕಾಶೀ ಮಹಾ ಪೀಠದ ಗುರುಕುಲದ ಶತಮಾನೋತ್ಸವ ಸಮಾರಂಭ 2020ರ ಜನವರಿ 15ರಿಂದ ಫೆ.21ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ದೇಶ ಹಾಗೂ ವಿದೇಶಿ 18 ಭಾಷೆಗಳ ‘ಶ್ರೀ ಸಿದ್ಧಾಂತ ಶಿಖಾಮಣಿ’ ಮೊಬೈಲ್ ಆ್ಯಪ್ ಲೋಕಾರ್ಪಣೆಗೊಳಿಸುವರು ಎಂದು ಕಾಶೀ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಸುದ್ದಿಗಾರರಿಗೆ ತಿಳಿಸಿದರು.
ಕಾಶೀ ಪೀಠದ ಜಗದ್ಗುರು ವಿಶ್ವಾರಾಧ್ಯ ಗುರುಕುಲವು ಅತ್ಯಂತ ಪುರಾತನವಾದುದು. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜಗದ್ಗುರು ವಿಶ್ವಕರ್ಣ ಶಿವಾಚಾರ್ಯರಿಂದ ಗುರುಕುಲವು ಪ್ರಾರಂಭಿಸಲ್ಪಟ್ಟಿತು. ಗುರುಕುಲದ ದೂರ್ವಾಸ ಮಹರ್ಷಿಗಳು ಮೊದಲ ವಿದ್ಯಾರ್ಥಿ. ಅಂದಿನಿಂದ ಪ್ರಾರಂಭವಾದ ಗುರುಕುಲ ಇಂದಿನವರೆಗೆ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ ಎಂದು ಹೇಳಿದರು.
1918ರಲ್ಲಿ ಅಂದಿನ ಪಂಚಪೀಠಾಧೀಶ್ವರರು ಕಾಶಿಯಲ್ಲಿ ಮಹಾ ಸಮ್ಮೇಳನ ನಡೆಸಿ ಪ್ರಾಚೀನ ಗುರುಕುಲಕ್ಕೆ ಜಗದ್ಗುರು ವಿಶ್ವಾರಾಧ್ಯ ಗುರುಕುಲ ಎಂದು ನಾಮಕರಣ ಮಾಡಿದ್ದರು. ಈಗ ನೂರು ವರ್ಷಗಳು ಪೂರ್ಣಗೊಂಡಿದ್ದು, ಗುರುಕುಲದ ಶತಮಾನೋತ್ಸವ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಧರ್ಮ ಜಾಗೃತಿಯೊಂದಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯ ನಡೆಸಿಕೊಂಡು ಬಂದಿರುವುದು ಗುರುಕುಲದ ಹೆಗ್ಗಳಿಕೆಯಾಗಿದೆ. ವೀರಶೈವರ ಜತೆಗೆ ಬ್ರಾಹ್ಮಣ, ಜೈನ ಮರಾಠಾ ಮುಂತಾದ ಸಂಪ್ರದಾಯಗಳ ಅನೇಕ ಮಠಾಧಿಪತಿಗಳು ಕಾಶಿ ಗುರುಕುಲದಲ್ಲಿ ಅಭ್ಯಾಸ ಮಾಡಿದ್ದಾರೆ ಎಂದರು.
ಗುರುಕುಲ ಶತಮಾನೋತ್ಸವವು ರಂಭಾಪುರಿ, ಉಜ್ಜಯಿನಿ, ಹಿಮವತ್ ಕೇದಾರ ಮತ್ತು ಶ್ರೀಶೈಲ ಜಗದ್ಗುರುಗಳವರ ಸಾನಿಧ್ಯದಲ್ಲಿ ಜರುಗಲಿದೆ. ವಿಶ್ವಶಾಂತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಅತಿರುದ್ರಾಭಿಷೇಕ, ಕೋಟಿ ಬಿಲ್ವಾರ್ಚನೆ, ದೀಪೋತ್ಸವ, ವಿದ್ವಾಂಸರ ಚರ್ಚಾಗೋಷ್ಠಿ, ನೂತನ ಕಟ್ಟಡಗಳ ಉದ್ಘಾಟನೆ, ವಿವಿಧ ಗ್ರಂಥ ಲೋಕಾರ್ಪಣೆ, ವಿವಿಧ ಪ್ರದೇಶಗಳ ವಿವಿಧ ಕ್ಷೇತ್ರಗಳ ಸಮಾಜ ಸೇವಕರ ಸನ್ಮಾನ ವಿವಿಧ ಭಾಷೆಗಳ ವಿದ್ವಾಂಸರ ಗೌರವ ಗುರುಕುಲದಲ್ಲಿ ಅಭ್ಯಾಸ ಮಾಡಿದ ಶತಾಯುಷಿ ವಿದ್ಯಾರ್ಥಿಗಳ ಶತಮಾನೋತ್ಸವ, ಅಮೃತ ಮಹೋತ್ಸವ ಷಷ್ಠ್ಯಬ್ಧಿ ಸಮಾರಂಭಗಳನ್ನು ಆಚರಿಸಲಾಗುವುದು ಎಂದು ಶ್ರೀಗಳು ವಿವರಿಸಿದರು.
ಲಿಂಗೈಕ್ಯರಾದ ವಿವಿಧ ಮಠಾಧಿಪತಿಗಳ ಹಾಗೂ ಶಾಸ್ತ್ರೀಗಳ ಸ್ಮರಣೋತ್ಸವ ಆಚರಿಸಲಾಗುವುದು. 36 ದಿನಗಳ ಸುದೀರ್ಘ ಸಮಾರಂಭದಲ್ಲಿ ದೇಶದ ವಿವಿಧ ಪಕ್ಷಗಳ ರಾಜಕೀಯ ಧುರೀಣರು ಪಾಲ್ಗೊಳ್ಳುವರು. ಸಮಾರಂಭದ ನಿಮಿತ್ತ ಫೆ.15ರಂದು ಜಗದ್ಗುರು ಪಂಚಪೀಠಾಧೀಶ್ವರರ ವೈಭವದ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರುವುದು. ಈ ಪಲ್ಲಕ್ಕಿ ಸೇವೆಯನ್ನು ಜೇವರ್ಗಿ ತಾಲೂಕಿನ ಶಖಾಪುರ ತಪೋವನ ಮಠದ ಶ್ರೀ ಸಿದ್ಧರಾಮ ಶಿವಾಚಾರ್ಯರು ವಹಿಸಿಕೊಂಡಿದ್ದಾರೆ. ಸಮಾರಂಭಕ್ಕೆ ಎಲ್ಲ ಪ್ರಾಂತಗಳ ಸದ್ಭಕ್ತರಿಗೆ ಹಾಗೂ ಗಣ್ಯರಿಗೆ ಕಾಶಿ ಮಹಾ ಪೀಠದ ಭಕ್ತ ನಿವಾಸದಲ್ಲಿ ವಸತಿ ಹಾಗೂ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…