ಜೇವರ್ಗಿ ಕ್ಷೇತ್ರದಿಂದ ಬಿಜೆಪಿಗೆ ಲೀಡ್‌ ಎಷ್ಟು?

ಜಾತಿ ನಿಂದನೆ ಪ್ರಕರಣದ್ದೇ ಹೆಚ್ಚು ಸದ್ದು•ಮತ ವಿಭಜನೆ ಯತ್ನ ಫಲ ನೀಡಿಲ್ಲ

Team Udayavani, May 9, 2019, 9:47 AM IST

9-May-1

ಕಲಬುರಗಿ: ರಾಷ್ಟ್ರದ ಗಮನ ಸೆಳೆದಿರುವ ಕಲಬುರಗಿ ಮೀಸಲು ಕ್ಷೇತ್ರದ ಚುನಾವಣೆ ಹೊಸ ವಿಷಯಗಳಿಗೆ ನಾಂದಿ ಹಾಡಿದ್ದಲ್ಲದೇ ಸ್ವಾರಸ್ಯಕರ ಚರ್ಚೆಗೂ ಎಡೆ ಮಾಡಿ ಕೊಟ್ಟಿತು ಎಂದರೆ ತಪ್ಪಾಗುವುದಿಲ್ಲ.

ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಒಂದೊಂದು ಕ್ಷೇತ್ರದಲ್ಲಿ ಒಂದೊಂದು ವಿಷಯದ ಕುರಿತು ಚರ್ಚೆ ಜೋರಾಗೇ ನಡೆದಿದೆ. ಜೇವರ್ಗಿ ವಿಧಾನಸಭೆ ಕೆ¡ತ್ರದಲ್ಲಿ ಈ ಸಲ ಬಿಜೆಪಿಗೆ ಎಷ್ಟು ಲೀಡ್‌ ಬರುತ್ತದೆ ಎನ್ನುವ ವಿಷಯ ಕ್ಷೇತ್ರವಲ್ಲದೇ ಜಿಲ್ಲೆಯಾದ್ಯಂತ ಕೇಳಿ ಬರುತ್ತಿದೆ.

2009ರಲ್ಲಿ ಕಾಂಗ್ರೆಸ್‌ಗೆ 2764 ಮತಗಳು ಲೀಡ್‌ ಬಂದಿದ್ದರೆ 2014ರಲ್ಲಿ ಬಿಜೆಪಿಗೆ 1028 ಮತಗಳು ಲೀಡ್‌ ಬಂದಿದ್ದವು. ಈ ಸಲದ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ಲೀಡ್‌ ಎನ್ನುವುದೇ ಕುತೂಹಲದ ಸಂಗತಿಯಾಗಿದೆ. ಬಿಜೆಪಿಗೆ ಹೆಚ್ಚಿನ ಲೀಡ್‌ ಬರುವುದು ಸ್ಪಷ್ಟ. ಆದರೆ ಎಷ್ಟು ಎನ್ನುವುದರ ಕುರಿತು ಪ್ರತಿ ಹಳ್ಳಿಯಲ್ಲೂ ಚರ್ಚೆ ನಡೆಯುತ್ತಿದೆ.

ಕಾಂಗ್ರೆಸ್‌ ಸ್ವಲ್ಪ ಮತಗಳನ್ನಾದರೂ ಪಡೆಯುತ್ತದೆ ಎಂದು ಒಬ್ಬರೂ ಷರತ್ತು ಕಟ್ಟುವ ಮಾತೇ ಆಡುತ್ತಿಲ್ಲ ಜೇವರ್ಗಿ ವಿಧಾನಸಭೆ ಕ್ಷೇತ್ರದಲ್ಲಿ 118798 ಪುರುಷರು, 117398 ಮಹಿಳೆಯರು ಸೇರಿದಂತೆ ಒಟ್ಟು 236230 ಮತದಾರರಿದ್ದಾರೆ. ಇವರಲ್ಲಿ 146165 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ 76215 ಪುರುಷರು, 69582 ಮಹಿಳೆಯರು ಸೇರಿದ್ದಾರೆ.

ಜಾತಿ ನಿಂದನೆ ಪ್ರತಿಧ್ವನಿ: ಚುನಾವಣೆಯಲ್ಲಿ ಜಾತಿ ನಿಂದನೆ ಪ್ರಕರಣಗಳು ತೀವ್ರವಾಗಿ ಪ್ರತಿಧ್ವನಿಗೊಂಡಿವೆ. ನೆಲೋಗಿ ಜಾತಿ ನಿಂದನೆ ಪ್ರಕರಣವಂತೂ ಚುನಾವಣೆಯುದ್ದಕ್ಕೂ ಹಾಗೂ ನಂತರವೂ ಸದ್ದು ಮಾಡಿತು. ಒಟ್ಟಾರೆ ಚುನಾವಣೆಯ ಕೇಂದ್ರ ವಿಷಯವಾಯಿತು. ಮತಗಳ ಸರಾಸರಿಯಲ್ಲಿ ಭಾರಿ ವ್ಯತ್ಯಾಸವಾದಲ್ಲಿ ಈ ಪ್ರಕರಣವೇ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯವರು ಕನಿಷ್ಠ 15 ಸಾವಿರ ಮತ ಲೀಡ್‌ ಪಡೆಯುತ್ತೇವೆ ಎನ್ನುತ್ತಿದ್ದರೆ ಕಾಂಗ್ರೆಸ್‌ನವರು ಕನಿಷ್ಠ ಲೀಡ್‌ನ್ನಾದರೂ ಪಡೆಯುತ್ತೇವೆ ಎನ್ನುವ ವಿಶ್ವಾಸ ಹೊಂದಿದ್ದಾರೆ.

ಚುನಾವಣೆ ಮುಂಚೆಯ ಹವಾ ನೋಡಿದರೆ ಬಿಜೆಪಿಗೆ ಹೆಚ್ಚಿನ ಮತಗಳು ಬರಬಹುದು ಎಂದು ನಿರೀಕ್ಷೆಯಿತ್ತು. ಆದರೆ ಕ್ಷೇತ್ರದ ಶಾಸಕ ಡಾ| ಅಜಯ ಸಿಂಗ್‌ ಪ್ರತಿ ಹಳ್ಳಿಗಳಿಗೂ ಹೋಗಿ ಮತದಾರನ್ನು ಭೇಟಿಯಾಗಿ ಕಲಬುರಗಿ ಅಭಿವೃದ್ಧಿಗೆ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆ ಕುರಿತಾಗಿ ಮನವರಿಕೆ ಮಾಡಲಾಗಿತ್ತು. ಇದರ ಪರಿಣಾಮ ಕಾಂಗ್ರೆಸ್‌ ಪಕ್ಷಕ್ಕೆ ಎರಡ್ಮೂರು ಸಾವಿರ ಹೆಚ್ಚು ಮತಗಳು ಲಭಿಸಲಿವೆ. ಚುನಾವಣೆ ಸಮಯದಲ್ಲಿ ಜಾತಿ ನಿಂದನೆ ವಿಷಯ ಚಾಲ್ತಿಗೆ ತಂದಿರುವುದು ಸಮಂಜಸವಲ್ಲ.
•ಸಿದ್ಧಲಿಂಗರೆಡ್ಡಿ ಇಟಗಿ,
ಅಧ್ಯಕ್ಷರು, ಜೇವರ್ಗಿ ಬ್ಲಾಕ್‌ ಕಾಂಗ್ರೆಸ್‌

ಕಾಂಗ್ರೆಸ್‌- ಜೆಡಿಎಸ್‌ ಒಗ್ಗೂಡಿ ಕೆಲಸ ಮಾಡಿರುವುದು ಉತ್ತಮವಾಗಿದೆ. ಎಲ್ಲ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ವಿಷಯವೊಂದನ್ನು ಮುಂದಿಟ್ಟುಕೊಂಡು ಮತಗಳ ವಿಭಜನೆ ಕಾರ್ಯ ನಡೆಯಿತಾದರೂ ಅದೇನು ಪರಿಣಾಮ ಬೀರಿಲ್ಲ.
ಬಸವರಾಜ ಖಾನಗೌಡ,
ಅಧ್ಯಕ್ಷರು, ತಾಲೂಕು ಜೆಡಿಎಸ್‌

ಯುವಕರೆಲ್ಲ ತಂಡವಾಗಿ ಕೆಲಸ ಮಾಡಿದ್ದೇವೆ. ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಾಗಿದೆ. ಜತೆಗೆ ಮೋದಿ ಹವಾ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಭರ್ಜರಿ ಬೆಂಬಲ ಸಿಕ್ಕಿದೆ. ಹಿಇಗಾಗಿ ಕನಿಷ್ಠ 15000 ಲೀಡ್‌ ಬಿಜೆಪಿಗೆ ದೊರೆಯಲಿದೆ ಎನ್ನುವ ದೃಢ ವಿಶ್ವಾಸ ಹೊಂದಲಾಗಿದೆ. ಜೇವರ್ಗಿ ಕ್ಷೇತ್ರದಲ್ಲಿ ಪಡೆಯುವ ಮತ ಹೆಚ್ಚಳವೇ ಕಲಬುರಗಿ ಲೋಕಸಭಾ ಕ್ಷೇತ್ರದ ಫಲಿತಾಂಶಕ್ಕೆ ನಾಂದಿಯಾಗಲಿದೆ.
ಸಾಯಬಣ್ಣ ದೊಡ್ಮನಿ,
ಅಧ್ಯಕ್ಷರು ತಾಲೂಕು ಬಿಜೆಪಿ ಘಟಕ

ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.