ಜಗತ್ತಿನಲ್ಲಿ ಭಾರತ ಸಂವಿಧಾನವೇ ಶ್ರೇಷ್ಠ: ನ್ಯಾ| ದೀಕ್ಷಿತ್
Team Udayavani, May 23, 2019, 5:04 PM IST
ಕಲಬುರಗಿ: ಎಚ್ಕೆಸಿಸಿಐ ಸಂಭಾಗಣದಲ್ಲಿ ವಕೀಲ ವಿ.ಬಿ.ದೇಶಪಾಂಡೆ ಸ್ಮರಣಾರ್ಥ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಸುನಿಲದತ್ತ ಯಾದವ ಉದ್ಘಾಟಿಸಿದರು.
ಕಲಬುರಗಿ: ಭಾರತದ ಸಂವಿಧಾನ ಮೇಧಾವಿಗಳಿಂದ ರಚನೆಯಾಗಿದೆ. ಅಮೆರಿಕಾ ಸೇರಿದಂತೆ ಇತರ ರಾಷ್ಟ್ರಗಳ ಸಂವಿಧಾನಕ್ಕಿಂತ ನಮ್ಮ ದೇಶದ ಸಂವಿಧಾನ ಶ್ರೇಷ್ಠ ಎಂದು ಹೈಕೋರ್ಟ್ ಕಲಬುರಗಿ ಪೀಠದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹೇಳಿದರು.
ನಗರದ ಹೈದ್ರಾಬಾದ್-ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಲ್ಲಿ ಮಂಗಳವಾರ ವಕೀಲ ವಿ.ಬಿ. ದೇಶಪಾಂಡೆ ಸ್ಮರಣಾರ್ಥ ಹಮ್ಮಿಕೊಂಡಿದ್ದ ‘ಸಂವಿಧಾನ ಕಾರ್ಯನಿರ್ವಹಣೆಯಲ್ಲಿ ನಾಗರಿಕರ ಪಾತ್ರ’ (371ನೇ ಜೆ)ಕಲಂಗೆ ಪೂರಕವಾಗಿ) ಕುರಿತ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಮೆರಿಕಾದ ಸಂವಿಧಾನದಲ್ಲಿ ಗುಲಾಮಗಿರಿ ವಿರುದ್ಧ ಬರೆಯಬೇಕಿದ್ದ ರಚನಾಕಾರರು ತಮ್ಮ ಮನೆಯಲ್ಲಿ 50 ಜನ ಸೇವಕರನ್ನಿಟ್ಟುಕೊಂಡಿದ್ದವರು. ಆದರೆ, ಡಾ| ಬಿ.ಆರ್.ಅಂಬೇಡ್ಕರ್ ಸೇರಿದಂತೆ ಭಾರತದ ಸಂವಿಧಾನ ರಚನಕಾರರು ಶ್ರದ್ಧೆಯಿಂದ ಕಷ್ಟ ಪಟ್ಟು ಸಂವಿಧಾನ ರಚಿಸಿದ್ದಾರೆ. ದೇಶದ ಜನರ ಆಶೋತ್ತರಗಳನ್ನು ನಮ್ಮ ಸಂವಿಧಾನ ಒಳಗೊಂಡಿದೆ ಎಂದು ಹೇಳಿದರು.
ದೇಶದ ಸಂವಿಧಾನ ರಚಿಸಿಯಾಗಿದೆ. ಸಂವಿಧಾನದೊಂದಿಗೆ ನಾಗರಿಕರು ಕಾರ್ಯನಿರ್ವಹಣೆ ಮಾಡಬೇಕು. ಆಗ ಸಂವಿಧಾನ ಉಳಿಯಲು ಸಾಧ್ಯ ಎಂದು ಅಂಬೇಡ್ಕರ್ ಹೇಳಿದ್ದಾರೆ. ಜನರನ್ನು ಜಾಗೃತಗೊಳಿಸುವುದೇ ಸಂವಿಧಾನ ಕಾರ್ಯವಾಗಿದೆ. ಅದನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು. ಸಂವಿಧಾನದಲ್ಲಿರುವ ಅಂಶಗಳ ಜಾರಿಗಳನ್ನು ನಾಗರಿಕರೇ ತಿಳಿಸಿಕೊಂಡಬೇಕು. ಹೈ-ಕ ಭಾಗದ 371ನೇ ಜೆ) ಕಲಂ ಸಮರ್ಪಕ ಅನುಷ್ಠಾನವೂ ನಾಗರಿಕರ ಮೇಲೆ ನಿಂತಿದೆ ಎಂದು ಹೇಳಿದರು.
ಸಂವಿಧಾನ ಜಾರಿಯಾದ ಬಳಿಕ ಅನೇಕ ಬಾರಿ ತಿದ್ದುಪಡಿಗಳಾಗಿವೆ. ಎಷ್ಟೇ ತಿದ್ದುಪಡಿಗಳಾದರೂ, ತಿದ್ದುಪಡಿ ಪ್ರಯತ್ನಗಳು ನಡೆದರೂ ಸಂವಿಧಾನ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಅವರು ಹೇಳಿದರು.
ಮತ್ತೂಬ್ಬ ನ್ಯಾಯಮೂರ್ತಿ ಸುನಿಲದತ್ತ ಯಾದವ ಮಾತನಾಡಿ, ಸಂವಿಧಾನದಡಿ ಹೈ-ಕ ಪ್ರದೇಶಕ್ಕೆ 371ನೇ(ಜೆ) ಕಲಂ ಜಾರಿ ಮಾಡಲಾಗಿದೆ. ಅದರ ಅನುಷ್ಠಾನ ಯಾವ ರೀತಿಯಲ್ಲಿ ಆಗಬೇಕು. ಯಾರಿಗೆ ಎಷ್ಟು ಮೀಸಲಾತಿ ದೊರೆಯಬೇಕು ಎಂಬುದನ್ನು ನಾಗರಿಕರೇ
ನಿರ್ಧರಿಸುವಂತಾಗಬೇಕು. 371ನೇ (ಜೆ) ಕಲಂನ ಆಶಯಗಳನ್ನು ಆಡಳಿತ ಮತ್ತು ಅಧಿಕಾರಿ ವರ್ಗಕ್ಕೆ ತಿಳಿಸಿಕೊಟ್ಟು, ಅದರ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.
ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಕೀಲ ವಿ.ಬಿ.ದೇಶಪಾಂಡೆ ಪ್ರತಿಷ್ಠಾನದ ಪಿ.ವಿ.ದೇಶಪಾಂಡೆ, ಎಚ್ಕೆಸಿಸಿಐ ಕಾರ್ಯದರ್ಶಿ ಶಶಿಕಾಂತ ಪಾಟೀಲ, ಕಾರ್ಯಕ್ರಮದ ಉಪಸಮಿತಿ ಅಧ್ಯಕ್ಷ ಆನಂದ ದಂಡೋತಿ ಪಾಲ್ಗೊಂಡಿದ್ದರು.
ಜಗತ್ತಿನಲ್ಲಿ ಸಂವಿಧಾನದ ಪರಿಕಲ್ಪನೆ ಮುನ್ನವೇ ಬಸವಣ್ಣನವರು ಸಮಾಜ ಸುಧಾರಣೆಗೆ ನಾಂದಿ ಹಾಡಿದ್ದರು. ನಮ್ಮ ಸಂವಿಧಾನದಲ್ಲಿ ಅನೇಕ ಭಾವಚಿತ್ರಗಳು ಇದೆ. ಆದರೆ, ಬಸವಣ್ಣನವರು ಭಾವಚಿತ್ರ ಇರದೇ ಇರುವುದು ಬೇಸರದ ಸಂಗತಿ. ಅದೇ ರೀತಿ ಧರ್ಮಶಾಸ್ತ್ರ ತಜ್ಞ ಪಿ.ವಿ.ಕಾಳೆ ಕೂಡ ಸಂವಿಧಾನ ರಚನಾ ಸಮಿತಿ ಸದಸ್ಯರಾಗಬೇಕಿತ್ತು.
•ಕೃಷ್ಣ ಎಸ್. ದೀಕ್ಷಿತ್,
ನ್ಯಾಯಮೂರ್ತಿ, ಹೈಕೋರ್ಟ್ ಕಲಬುರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ