ಕಲಬುರಗಿಗೆ ‘ಕೋವಿಡ್’ ಸಿಹಿ-ಕಹಿ: 14 ಜನ ಆಸ್ಪತ್ರೆಗೆ, 10 ಜನ ಆಸ್ಪತ್ರೆಯಿಂದ ಮನೆಗೆ!
Team Udayavani, May 25, 2020, 2:35 PM IST
ಕಲಬುರಗಿ: ರಂಜಾನ್ ಹಬ್ಬದ ದಿನವಾದ ಸೋಮವಾರ ಮಹಾಮಾರಿ ಕೋವಿಡ್-19 ಸೋಂಕು ಕಲಬುರಗಿಗೆ ಸಿಹಿ-ಕಹಿ ಎರಡನ್ನೂ ನೀಡಿದೆ.
ಒಂದೇ ದಿನದಲ್ಲಿ 14 ಜನರಿಗೆ ಮಹಾಮಾರಿ ದೃಢಪಟ್ಟಿದ್ದರೆ, 10 ಮಂದಿ ಸೋಂಕಿತರು ಕೋವಿಡ್ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದಾರೆ. ವಿಶೇಷವೆಂದರೆ ಕಳೆದ 73 ದಿನಗಳಲ್ಲಿ ಒಂದೇ ದಿನ ಅತಿ ಹೆಚ್ಚು ಜನರಿಗೆ ಸೋಂಕು ಪತ್ತೆಯಾಗಿದೆ. ಹಾಗೆ ಆಸ್ಪತ್ರೆಯಿಂದ ಅತ್ಯಧಿಕ ಸೋಂಕಿತರು ಬಿಡುಗಡೆಯಾಗಿದ್ದಾರೆ.
14 ಜನ ಸೋಂಕಿತರು ಮಹಾರಾಷ್ಟ್ರದಿಂದ ಮರಳಿದ ವಲಸೆ ಕಾರ್ಮಿಕರಾಗಿದ್ದಾರೆ. 13 ಜನ ಚಿತ್ತಾಪುರ ತಾಲೂಕಿನವರಾಗಿದ್ದು, ಒಬ್ಬರು ಕಲಬುರಗಿ ನಗರದರವಾಗಿದ್ದಾರೆ. ಇವರಲ್ಲಿ 68 ವರ್ಷದ ಓರ್ವ ವೃದ್ಧ, 10 ವರ್ಷದ ಬಾಲಕ, 15 ವರ್ಷದ ಬಾಲಕಿ ಸೇರಿದ್ದಾರೆ.
ಉಳಿದಂತೆ ಮೂವರು ಮಹಿಳೆಯರು ಹಾಗೂ ಎಂಟು ಜನರಿಗೆ ಪುರುಷರಿಗೆ ಮಹಾಮಾರಿ ರೋಗ ಅಂಟಿದೆ. ಇವರೆಲ್ಲರೂ ಕ್ವಾರಂಟೈನ್ ಕೇಂದ್ರಗಳಲ್ಲಿ ಕ್ವಾರಂಟೈನ್ ಆಗಿದ್ದರು. ಮೇ 12ರಂದು ಮಹಾರಾಷ್ಟ್ರದಿಂದ ಬಸ್ ಮೂಲಕ ಕಲಬುರಗಿಗೆ ಬಂದಿದ್ದರು.
ಮೋಮಿನಪುರ ನಿರಾಳ: ಜಿಲ್ಲೆಯಲ್ಲೇ ಅತಿ ಹೆಚ್ಚು ಕೋವಿಡ್ ಸೋಂಕಿತರು ಪತ್ತೆಯಾದ ಕಲಬುರಗಿ ನಗರದ ಮೋಮಿನಪುರ ಬಡಾವಣೆ ಸೋಮವಾರ ನಿರಾಳವಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 10 ಜನರಲ್ಲಿ ಇದೇ ಬಡಾವಣೆಯ 9 ಜನರಿದ್ದಾರೆ. ಮಿಜಗುರಿ ಪ್ರದೇಶದ ಹಣ್ಣಿನ ವ್ಯಾಪಾರಿ (ಪಿ-849) ಸಹ ಸೋಂಕಿನಿಂದ ಮುಕ್ತವಾಗಿದ್ದಾರೆ.
ಮೋಮಿನಪುರದ 35 ವರ್ಷದ ಮಡಿಕಲ್ ರೆಪ್ರೆಸೆಂಟೇಟಿವ್ (ಪಿ-848) ಹಾಗೂ ಆತನ ಸಂಪರ್ಕಕ್ಕೆ ಬಂದಿದ್ದ 30 ವರ್ಷದ ಮಹಿಳೆ (ಪಿ-953), ಕುಟುಂಬ ಸದಸ್ಯರಾದ 33 ವರ್ಷದ ಮಹಿಳೆ (ಪಿ-1080), 15 ವರ್ಷದ ಬಾಲಕಿ (ಪಿ-1081), 14 ವರ್ಷದ ಬಾಲಕಿ (ಪಿ-1082), 55 ವರ್ಷದ ಮಹಿಳೆ (ಪಿ-1083), 60 ವರ್ಷದ ವೃದ್ಧ (ಪಿ-1086),10 ವರ್ಷದ ಬಾಲಕಿ (ಪಿ-1087) ಗುಣಮುಖರಾಗಿದ್ದಾರೆ. ಇದೇ ಪ್ರದೇಶದ 50 ವರ್ಷದ ಮಹಿಳೆ (ಪಿ-1085) ಸಹ ಸೋಂಕಿನಿಂದ ವಾಸಿಯಾಗಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ155 ಜನರಿಗೆ ಕೋವಿಡ್-19 ಪತ್ತೆಯಾಗಿದ್ದು, ಇದರಲ್ಲಿ 72 ಜನ ಗುಣಮುಖರಾಗಿದ್ದಾರೆ. 7 ಜನ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ಉಳಿದಂತೆ 76 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ