ಅರಣ್ಯ ವೃದ್ದಿಗೆ 25 ಲಕ್ಷ ಸಸಿ ಉತ್ಪಾದನೆ


Team Udayavani, Apr 1, 2022, 9:51 AM IST

1plants

ಆಳಂದ: ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಉದ್ಯೋಗ ಖಾತ್ರಿ ಅಡಿಯಲ್ಲಿ ಪ್ರಸಕ್ತ ಹಂಗಾಮಿಗೆ ಜಿಲ್ಲೆಯ ಆಯ್ಕೆಯಾದ ಸ್ವ-ಸಹಾಯ ಸಂಘಗಳ ಗುಂಪಿನ ಮಹಿಳೆಯರಿಗೆ ನಿರಂತರ ಉದ್ಯೋಗದ ಜೊತೆಗೆ, ಅರಣ್ಯೀಕರಣ ವೃದ್ಧಿಗಾಗಿ ಈ ಸಲ 25 ಲಕ್ಷ ಸಸಿಗಳನ್ನು ಉತ್ಪಾದಿಸಿ ಪೊರೈಸಲು ಮುಂದಾಗಲಾಗಿದೆ.

2022-23ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಡಿಯಲ್ಲಿ ಅರಣ್ಯೀಕರಣ, ತೋಟಗಾರಿಕೆ, ರೇಷ್ಮೆ ಅಭಿವೃದ್ಧಿಗೆ ಅವಶ್ಯಕ ಸಸಿಗಳ ಪೂರೈಕೆಗೆ ತಾಲೂಕಿಗೊಂದು ಗ್ರಾಮ ಪಂಚಾಯಿತಿ ಮಟ್ಟದ ಸ್ವ-ಸಹಾಯ ಸಂಘಗಳ ಒಕ್ಕೂಟ ಆಯ್ಕೆಮಾಡಿಕೊಂಡು, ಈ ಮೂಲಕ ನರ್ಸರಿ ಅಭಿವೃದ್ಧಿಪಡಿಸಿ ಸಸಿಗಳನ್ನು ಪೂರೈಸಿ, ನಿರಂತರವಾಗಿ ಉದ್ಯೋಗ ಒದಗಿಸುವ ಉದ್ದೇಶ ಹೊಂದಲಾಗಿದೆ. ಈ ಪ್ರಕ್ರಿಯೆ ಅಚ್ಚುಕಟ್ಟಾಗಿ ಜಾರಿಗೆ ಬಂದರೆ ಗ್ರಾಮೀಣ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಆರ್ಥಿಕ ಲಾಭದ ಜೊತೆಗೆ ಬೇಡಿಕೆಗೆ ತಕ್ಕಂತೆ ರೈತರಿಗೆ, ಸಂಘ, ಸಂಸ್ಥೆಗಳಿಗೆ ಅರಣ್ಯೀಕರಣ ಮತ್ತು ತೋಟಗಾರಿಕೆ ವಿಸ್ತರಣೆಗೆ ಸಸಿಗಳು ಲಭ್ಯವಾಗಲಿವೆ.

ಸರ್ಕಾರದ ಈ ಯೋಜನೆ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಿರುವ ಜಿಪಂ ಸಿಇಒ ಡಾ| ದಿಲೀಷ ಸಸಿ ಅವರು, 25 ಲಕ್ಷ ಸಸಿಗಳ ಉತ್ಪಾದನೆಗೆ ಆಯ್ಕೆಯಾದ ಗ್ರಾಪಂ ಸ್ವ-ಸಹಾಯ ಸಂಘಗಳ ಒಕ್ಕೂಟಗಳಿಗೆ ಉದ್ಯೋಗ ಖಾತ್ರಿಯಡಿ ನಿರಂತರವಾಗಿ ಉದ್ಯೋಗ ನಿಡುವ ನಿಟ್ಟಿನಲ್ಲಿ ತರಬೇತಿ ನೀಡಿ, ಕಾರ್ಯಪ್ರವರ್ತರಾಗುವಂತೆ ಕೆಳಹಂತದ ಅಧಿಕಾರಿಗಳಿಗೆ ಸೂಚನೆ ನೀಡಿದ ಮೇಲೆ ಸಸ್ಯ ಉತ್ಪಾದನೆಗೆ ಸಂಘಗಳು ಮುಂದಾಗಿವೆ.

ಈಗಾಗಲೇ ಆಯ್ಕೆ ಮಾಡಿದ ಒಕ್ಕೂಟಗಳ ಪೈಕಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪುರ ಗ್ರಾಪಂನ ಚೌಡಾಪುರ ಸಂಜೀವಿನಿ, ಆಳಂದ ತಾಲೂಕಿನ ಕೊಡಲಂಗರಗಾ ಗ್ರಾಪಂನ ಸಂಜೀವಿನಿ ಜಿಪಿಎಲ್‌ಎಫ್‌, ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಪಂ ಕಮಲ ಸಂಜೀವಿನಿ, ಚಿತ್ತಾಪುರದ ಮಾಡಬೂಳ ಗ್ರಾಪಂನ ಮಾಡಬೂಳ ಸಂಜೀವಿನಿ, ಜೇವರ್ಗಿ ಹರವಾಳ ಗ್ರಾಪಂನ ಮಹಾಸತಿ ಅನುಸುಯಾ, ಕಲಬುರಗಿ ತಾಲೂಕಿನ ಪಟ್ಟಣ ಗ್ರಾಪಂನ ಚೇತನ, ಕಾಳಗಿ ತಾಲೂಕು ಗೋಟೂರ ಗ್ರಾಪಂ ಗೋಟೂರ ಸಂಜೀವಿನಿ, ಕಮಲಾಪುರದ ಮಹಾಗಾಂವ ಗ್ರಾಪಂನ ಅಕ್ಕಮಹಾದೇವಿ, ಸೇಡಂನ ಚಂದಾಪುರ ಗ್ರಾಪಂನ ಚಂದಾಪುರ ಸಂಜೀವಿನಿ, ಶಹಾಬಾದನ ರಾವೂರ ಗ್ರಾಪಂನ ಗೌರಿ ಸಂಜೀವಿನಿ, ಯಡ್ರಾಮಿಯ ವಡಗೇರಾ ಗ್ರಾಪಂನ ಅಮರೇಶ್ವರ ಸಂಜೀವನಿ ಒಕ್ಕೂಟಗಳನ್ನು ಆಯ್ಕೆ ಮಾಡಲಾಗಿದೆ.

ಗ್ರಾಪಂ ರೂಪಿತ ಕ್ರಿಯಾಯೋಜನೆ

ವಿವಿಧ ಶಾಲೆ, ಕಾಲೇಜು, ಸ್ಮಶಾನ, ವಸತಿ ನಿಲಯ ಹೀಗೆ ಎಲ್ಲ ಹಂತದ ರಸ್ತೆ ಬದಿಯ ಅವಶ್ಯಕ ನೆಡುತೋಪುಗಳ ಬಗ್ಗೆ ಸಮೀಕ್ಷೆ ಕೈಗೊಂಡು ಸ್ಥಳೀಯ ರೈತರ ಬೇಡಿಕೆಗೆ ಅನುಗುಣವಾಗಿ ವಿವಿಧ ಸಸಿಗಳನ್ನು ತಳಿವಾರು ಕ್ರೋಢೀಕರಿಸಿ ಗ್ರಾಪಂ ಕ್ರಿಯಾ ಯೋಜನೆ ರೂಪಿಸಲು ಅರಣ್ಯ ಇಲಾಖೆಯಿಂದ ಬೇಡಿಕೆಯ ಅಂದಾಜಿನಂತೆ ಸಸ್ಯಗಳು ಪೂರೈಕೆ ಆಗುತ್ತವೆ. ಹೀಗೆ ಗ್ರಾಪಂ ರೂಪಿತ ಕ್ರಿಯಾ ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿ ಕ್ರೋಢೀಕರಿಸಿ ಪ್ರತಿ ತಾಲೂಕಿನಿಂದ ಎರಡು ನರ್ಸರಿಯಂತೆ ಒಂದನ್ನು ಸ್ವಸಹಾಯ ಸಂಘಗಳ ಒಕ್ಕೂಟದ ಗುಂಪುಗಳಿಂದ ಹಾಗೂ ಇನ್ನೊಂದನ್ನು ಇಲಾಖೆ ಅನುಷ್ಠಾನಗೊಳಿಸಿ ಸಸ್ಯೋತ್ಪಾದನೆಗೊಳಿಸುವ ಸರ್ಕಾರದ ಈ ಉದ್ದೇಶವನ್ನು ಈಡೇಸಲು ಅಧಿಕಾರಿಗಳು ಮತ್ತು ಆಯ್ಕೆಯಾದ ಗುಂಪುಗಳ ಮುಂದಾಗಬೇಕಿದೆ.

ಅಧಿಕಾರಿಗಳ ಮಾರ್ಗದರ್ಶನ

ಆಯ್ಕೆಯಾದ ಸಂಘಗಳ ಗುಂಪಿಗೆ ಉದ್ಯೋಗ ಖಾತ್ರಿಯಡಿ ಸಸ್ಯಗಳ ಉಪತ್ಪಾದನೆಗೆ ಸೂಕ್ತ ತರಬೇತಿ, ನೀರು, ಜಾಗ, ಮೇಲಿಂದ ಮೇಲೆ ತಾಂತ್ರಿಕ ಸಲಹೆ, ಸಸ್ಯಗಳ ಉತ್ಪಾದನೆಗೆ ಪಾಲಿಥಿನ್‌, ಗೊಬ್ಬರ, ಮಣ್ಣು ಸೇರಿದಂತೆ ಸಾಮಗ್ರಿಗಳ ನೆರವು ನೀಡಲಾಗುತ್ತದೆ. ನರ್ಸರಿ ನಿರ್ವಹಣೆಗೆ, ಗುಂಪಿನ ಮಹಿಳೆಯರಿಗೆ ಪ್ರತಿದಿನ ಹಾಜರಾತಿಗೊಳಿಸಿ ಕೂಲಿ ಪಾವತಿಸಲಾಗುತ್ತದೆ. ನರ್ಸರಿ ಉಸ್ತುವಾರಿಗೆ ಅಧಿಕಾರಿಗಳು ಭೇಟಿ ನೀಡಿ ಸಲಹೆ ಸೂಚನೆ ನೀಡುತ್ತಾರೆ.

ಈಗಾಗಲೇ ಆಯ್ಕೆ ಮಾಡಿಕೊಂಡ ಸ್ವ-ಸಹಾಯ ಸಂಘಗಳ ಒಕ್ಕೂಟದ ಗುಂಪಿಗೆ ಸಸ್ಯ ಉತ್ಪಾದನೆ ಕುರಿತ ತರಬೇತಿ ಪೂರ್ಣವಾಗಿದೆ. ಇದಕ್ಕೆ ಆರ್ಥಿಕ ಸಹಾಯಧನ ಒದಗಿಸಲು ಬ್ಯಾಂಕ್‌ನೊಂದಿಗೆ ಹೊಂದಾಣಿಕೆ ಮಾಡಿಸಲಾಗುವುದು. ಸಸ್ಯಗಳನ್ನು ಖರೀದಿಸಲು ಅರಣ್ಯ, ತೋಟಗಾರಿಕೆ, ರೇಷ್ಮೆ ಹಾಗೂ ಇನ್ನಿತರ ಇಲಾಖೆಯಿಂದ ಒಪ್ಪಂದ ಮಾಡಿಕೊಳ್ಳಲಾಗುವುದು. -ದಿಲೀಷ ಸಸಿ, ಸಿಇಒ, ಜಿಪಂ

-ಮಹಾದೇವ ವಡಗಾಂವ

ಟಾಪ್ ನ್ಯೂಸ್

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.