ಜಿಲ್ಲೆಯಲ್ಲಿ 64 ಖರೀದಿ ಕೇಂದ್ರ ಸ್ಥಾಪನೆ

ಪ್ರತಿ ಕ್ವಿಂಟಲ್‌ ಹೆಸರಿಗೆ 7196 ರೂ., ಉದ್ದಿಗೆ 6000 ರೂ. ಬೆಂಬಲ ಬೆಲೆ ನಿಗದಿ

Team Udayavani, Sep 21, 2020, 4:56 PM IST

gb-tdy-1

ಸಾಂದರ್ಭಿಕ ಚಿತ್ರ

ಕಲಬುರಗಿ: ಬೆಂಬಲ ಬೆಲೆಯಲ್ಲಿ ಹೆಸರು, ಉದ್ದು ಖರೀದಿಗೆ ಮುಂದಾಗಿದ್ದು, ಇದಕ್ಕಾಗಿ 64 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಹಾಗೂ ಇತರ ಸಂಘಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

ಪ್ರಸಕ್ತ 2020-21ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಇದರಡಿ ಖರೀದಿಗೆ ಮುಂದಾಗಿದ್ದು, ಹೆಸರು ಕ್ವಿಂಟಲ್‌ಗೆ 7196 ರೂ. ಹಾಗೂ ಉದ್ದು ಕ್ವಿಂಟಲ್‌ಗೆ 6000 ರೂ. ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗುತ್ತಿದೆ.

ಹೆಸರು ಕಾಳು ಪ್ರತಿ ಎಕರೆಗೆ ನಾಲ್ಕು ಕ್ವಿಂಟಲ್‌ನಂತೆ ಪ್ರತಿ ರೈತನಿಂದ ಗರಿಷ್ಠ ನಾಲ್ಕು ಕ್ವಿಂಟಲ್‌ ಹಾಗೂ ಉದ್ದು ಪ್ರತಿ ಎಕರೆಗೆ ಮೂರು ಕ್ವಿಂಟಲ್‌ ನಂತೆ ಪ್ರತಿ ರೈತರಿಂದ ಗರಿಷ್ಠ 6 ಕ್ವಿಂಟಲ್‌ ಖರೀದಿಗೆ ನಿಗದಿ ಮಾಡಲಾಗಿದೆ. ಬೆಂಬಲ ಬೆಲೆಯಲ್ಲಿ ಉದ್ದು ಹಾಗೂ ಹೆಸರು ಮಾಡಲಿಚ್ಚಿಸುವ ರೈತರು ಅವಶ್ಯಕ ದಾಖಲಾತಿಗಳೊಂದಿಗೆ ಇದೇ ಬರುವ ಅಕ್ಟೋಬರ್‌ 15ರೊಳಗೆ ಹೆಸರು ನೋಂದಾಯಿಸಬೇಕು. ಖರೀದಿ ಪ್ರಕ್ರಿಯೆ ನವ್ಹೆಂಬರ್‌ 15ರವರೆಗೆ ನಡೆಯುತ್ತದೆ.

ಹೆಸರು ನೋಂದಣಿ ಹಾಗೂ ಖರೀದಿಗೆಸಂಬಂಧಿಸಿದಂತೆ ಈಗಿನಿಂದಲೇ ಮಾಡಿಕೊಳ್ಳಬಹುದಾಗಿದ್ದು, ಈ ನಿಟ್ಟಿನಲ್ಲಿ ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಸೆ.21ರಂದು ಇಲ್ಲಿನ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಕೇಂದ್ರಸರ್ಕಾರದ 2020-21ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಕಲಬುರಗಿ ಜಿಲ್ಲಾದ್ಯಂತ ಒಟ್ಟು 64 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು  ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ಹೆಸರು ಮತ್ತು ಉದ್ದು ಕಾಳು ಬೆಳೆದಿರುವ ರೈತ ಬಾಂಧವರು ಅಗತ್ಯ ಮಾಹಿತಿಗಳೊಂದಿಗೆ ಸಮೀಪದ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಕೃಷಿ ಉತ್ಪನ್ನ ಮಾರಾಟ ಮಾಡುವಂತೆ ರೈತರಲ್ಲಿ ಕೋರಿದ್ದಾರೆ.

ಖರೀದಿ ಕೇಂದ್ರಗಳು ಎಲ್ಲಲ್ಲಿ? : ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದಡಿ ಸ್ಥಾಪಿಸಲಾದ ಹೆಸರು ಮತ್ತು ಉದ್ದು ಕಾಳು ಖರೀದಿ ಕೇಂದ್ರಗಳ ವಿವರ ಹೀಗಿದೆ.

ಕಲಬುರಗಿ: ಅವರಾದ್‌(ಬಿ), ಸೊಂತ, ಸಾವಳಗಿ, ಮಹಾಗಾಂವ, ಹರಸೂರ ಹಾಗೂ ಡೊಂಗರಗಾಂವ  ಪ್ರಾಥಮಿಕ ಕೃಷಿ .ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ಗ್ರಾಮೀಣ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ಕಮಲಾಪುರ ಮತ್ತು ನೇಗಿಲಯೋಗಿ ರೈತ ಉತ್ಪಾದಕ ಸಂಘ ಮೇಳಕುಂದಾ(ಬಿ).

ಆಳಂದ: ಖಜೂರಿ, ಮಾದನಹಿಪ್ಪರಗಾ, ನಿಂಬರ್ಗಾ, ಸರಸಂಬಾ, ಕಮಲಾನಗರ, ಮುನ್ನೊಳ್ಳಿ, ಯಳಸಂಗಿ, ಹಿರೋಳ್ಳಿ, ತಡಕಲ್‌, ಬೊಮ್ಮನಳ್ಳಿ, ಕಡಗಂಚಿ, ನರೋಣಾ ಹಾಗೂ ನಿಂಬಾಳ ಪ್ರಾ. ಕೃ.ಪ.ಸ. ಸಂಘ ನಿಯಮಿತ. ಅಫಜಲಪುರ: ಕರಜಗಿ, ಅತನೂರ್‌ ಹಾಗೂ ಭೈರಾಮಡಗಿ ಪ್ರಾ.ಕೃ.ಪ.ಸ.ಸಂಘ ನಿಯಮಿತ. ಜೇವರ್ಗಿ: ಜೇರಟಗಿ, ಕುಮನಸಿರಸಗಿ ಹಾಗೂ ನರಿಬೋಳ ಪ್ರಾ.ಕೃ.ಪ.ಸ.ಸಂಘ ನಿಯಮಿತ.

ಸೇಡಂ: ಮುಧೋಳ, ಹಾಬಾಳ್‌(ಟಿ), ಅಡಕಿ, ಸಿಂಧನಮಡು, ಕಾನಾಗಡ್ಡಾ, ಕೋಳಕುಂದಾ, ಮೋತಕಪಲ್ಲಿ, ಯಡಗಾ, ಕೋಳಕುಂದಾ ಗ್ರಾಮೀಣ ಪ್ರಾ.ಕೃ.ಪ.ಸ.ಸಂಘ ನಿಯಮಿತ ಹಾಗೂ ಬಲಭೀಮಸೇನಾ ರೈತ ಉತ್ಪಾದಕರ ಸಂಸ್ಥೆ ಬೀದರಚೇಡ್‌ ಮತ್ತು ಕಾಗಿಣಾ ರೈತ ಉತ್ಪಾದಕರ ಸಂಸ್ಥೆ ಸುರವಾರ.

ಚಿತ್ತಾಪುರ: ನಾಲವಾರ, ಕಾಳಗಿ, ರಾವೂರ, ಹಲಕಟ್ಟಾ, ಕೊಡದೂರ್‌, ದಂಡೋತಿ, ಅರಣಕಲ್‌, ಹೆಬ್ಟಾಳ, ಭೀಮನಹಳ್ಳಿ, ಟೆಂಗಳಿ, ಆಲ್ಲೂರ(ಬಿ), ಮಂಗಲಗಿ, ಡೋಣಗಾಂವ್‌, ಪೇಟಶಿರೂರ, ಹೇರೂರ ಹಾಗೂ ಕುಂದಗೋಳ ಪ್ರಾ.ಕೃ.ಪ. ಸ.ಸಂಘ ನಿಯಮಿತ.

ಟಾಪ್ ನ್ಯೂಸ್

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.