ನುಗ್ಗೆ ಬೆಳೆದ ರೈತನಿಗೆ ಆದಾಯ ಖಾತ್ರಿ


Team Udayavani, Jun 17, 2021, 5:15 PM IST

rtytrertytrertytre

ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ನೆರವಿನಲ್ಲಿ ನುಗ್ಗೆ ಬೇಸಾಯ ಮಾಡಿದ ಜಿಲ್ಲೆಯ ರೈತನಿಗೆ “ಆದಾಯ’ದ ಖಾತ್ರಿಯೂ ಸಿಕ್ಕಿದೆ. ನುಗ್ಗೆಕಾಯಿ ಮಾರಾಟದ ಲಾಭ ಮಾತ್ರವಲ್ಲದೇ, ಅದರ ಬೀಜಗಳಿಂದಲೂ ಆದಾಯ ಗಳಿಸುತ್ತಿದ್ದಾರೆ.

ಅಫಜಲಪುರ ತಾಲೂಕಿನ ಬಡದಾಳ ಗ್ರಾಮದ ನಾಗಣ್ಣ ಮಾತಾರಿ ಎನ್ನುವ ರೈತ ನುಗ್ಗೆ ಬೆಳೆದು ಬಂಪರ್‌ ಆದಾಯ ಪಡೆಯುತ್ತಿದ್ದಾರೆ. ಮೂರು ಎಕರೆ ಹೊಲ ಹೊಂದಿರುವ ಇವರು ಕಳೆದ ಬಾರಿ ಒಂದು ಎಕರೆಯಲ್ಲಿ ನುಗ್ಗೆ ಬೇಸಾಯ ಮಾಡಿದ್ದರು. ಮೊದಲ ಸಲವೇ ಲಾಭ ಬಂದ ಕಾರಣ ಈಗ ಎರಡು ಎಕರೆಯಲ್ಲಿ ನುಗ್ಗೆ ಬೆಳೆಯಲು ಶುರು ಮಾಡಿದ್ದಾರೆ. ಬೇರೆ ಬೆಳೆಗಿಂತ ನುಗ್ಗೆಕಾಯಿ ಆದಾಯ ಸರಳವಾಗಿ ಬರುತ್ತದೆ ಎನ್ನುವುದನ್ನು ಮನಗಂಡಿದ್ದಾರೆ.

ನುಗ್ಗೆ ಜನರಿಗೆ ಅತ್ಯಂತ ಪ್ರಿಯವಾದ ತರಕಾರಿ. ಮರುಕಟ್ಟೆ ಯಲ್ಲಿ ಸದಾ ಬೇಡಿಕೆ ಇದ್ದೇ ಇರುತ್ತದೆ. ಕೇವಲ ಒಂದು ಭಾಗ, ಪ್ರದೇಶಕ್ಕೆ ಸಿಮೀತವಾಗದ ನುಗ್ಗೆ ಎಲ್ಲೆಡೆ ಯೂ ತನ್ನ ಪ್ರಭಾವ ಉಳಿಸಿಕೊಂಡಿದೆ. ರೈತ ನಾಗಣ್ಣ ಬೆಳೆದ ನುಗ್ಗೆಯನ್ನು ಹೈದರಾಬಾದ್‌ಗೆ ಸಾಗಿಸಿ, ಮಾರಾಟ ಮಾಡುತ್ತಿದ್ದಾರೆ. ಕಡಿಮೆ ನುಗ್ಗೆಕಾಯಿ ಇದ್ದಾಗ ಮಾತ್ರ ಸ್ಥಳೀಯವಾಗಿ ಮಾರುತ್ತಾರೆ. ಎಲ್ಲೇ ಮಾರಾಟ ಮಾಡಿದರೂ ಉತ್ತಮ ಬೆಲೆ ಪಡೆಯುತ್ತಿದ್ದಾರೆ. ರೈತ ನಾಗಣ್ಣ, ಪುತ್ರ ಶರಣು ಹಾಗೂ ಕುಟುಂಬದವರು ಈ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಒಂದು ಎಕರೆ ಫಸಲಿಗೆ ಒಂದೂವರೆ ಲಕ್ಷ ರೂ. ಲಾಭ ಗಳಿಸಿದ್ದರು. ಕಳೆದ ವರ್ಷ ಎರಡು ಎಕರೆಯಲ್ಲಿ ಬೆಳೆದು ಎರಡೂವರೆ ಲಕ್ಷ ರೂ. ಆದಾಯ ಪಡೆದಿದ್ದಾರೆ.

ಆರೇಳು ತಿಂಗಳಲ್ಲಿ ಇಳುವರಿ: ನುಗ್ಗೆಯೂ ಬೇಸಾಯ ಆರೇಳು ತಿಂಗಳಲ್ಲೇ ಫಸಲು ಕೊಡುತ್ತದೆ. ಬೀಜ ಅಥವಾ ಸಸಿ ನಾಟಿದ ಮೇಲೆ ಕೆಲ ತಿಂಗಳಲ್ಲೇ ಕಾಯಿ ಬಿಡಲು ಶುರು ಮಾಡುತ್ತದೆ. ನಂತರ ಒಂದು ತಿಂಗಳ ಪೂರ್ತಿ ಕಟಾವು ಮಾಡಬಹುದು. ಅಲ್ಲಿಂದ ಎಲ್ಲವೂ ಲಾಭವೇ ಎನ್ನುತ್ತಾರೆ ರೈತ ನಾಗಣ್ಣನ ಮಗ ಶರಣು. ಕಳೆದ ವರ್ಷದಿಂದ ಮನರೇಗಾ ಯೋಜನೆಯಡಿ ನುಗ್ಗೆ ಕೃಷಿ ಮಾಡುತ್ತಿದ್ದೇವೆ. ಪ್ರಾಯೋಗಿಕ ಎಂಬಂತೆ ಒಂದು ಎಕರೆಯಲ್ಲಿ ನುಗ್ಗೆ ಬೀಜ ಬಿತ್ತನೆ ಮಾಡಿದ್ದೇವು. ಮೊದಲ ಯತ್ನದಲ್ಲೇ ಉತ್ತಮ ಫಸಲು ಬಂತು. ಈ ವರ್ಷ ಒಂದರಿಂದ ಎರಡು ಎಕರೆಗೆ ನುಗ್ಗೆ ಕೃಷಿ ವಿಸ್ತರಿಸಿದ್ದೇವೆ.

ಈಗಾಗಲೇ ಎರಡೇ ಫಸಲು ಬಂದು ಮಾರಾಟವನ್ನು ಮಾಡಲಾಗಿದೆ. ಎರಡು ವರ್ಷದಲ್ಲಿ ಒಟ್ಟಾರೆ ನಾಲ್ಕು ಲಕ್ಷ ರೂ.ಗಳಷ್ಟು ಆದಾಯ ಬಂದಿದೆ ಎಂದು ಹೇಳಿದರು. ನುಗ್ಗೆ ಗಿಡದಿಂದ ಗಿಡಕ್ಕೆ ಮೂರು ಅಡಿ ಮತ್ತು ಸಾಲಿನಿಂದ ಸಾಲಿಗೆ 12 ಅಡಿಯಲ್ಲಿ ಬೆಳೆಸಲಾಗಿದೆ. ನುಗ್ಗೆ ಬೆಳೆ ನಿರ್ವಹಣೆ ಸುಲಭ ಮತ್ತು ಖರ್ಚು ಕೂಡ ಕಡಿಮೆ. ಉತ್ತಮ ಇಳುವರಿ ಬಂದ ಕಾರಣ ಚೀಲ ಗಟ್ಟಲೇ ಹೈದರಾಬಾದ್‌ಗೆ ಹೋಗಿ ಮಾರಾಟ ಮಾಡಲಾಗಿದೆ. ಒಂದು ಕೆಜಿ ನುಗ್ಗೆ ಕಾಯಿ ಗರಿಷ್ಠ 100 ರೂ. ವರೆಗೂ ಮಾರಾಟವಾಗಿದೆ. ಕೆಲವೊಮ್ಮೆ 40ರೂ. ಕ್ಕಿಂತ ಕಡಿಮೆ ಮಾರಲಾಗಿದೆ. ಆದರೆ, ನುಗ್ಗೆಯಿಂದ ನಷ್ಟ ಅನುಭವಿಸಿಲ್ಲ ಎನ್ನುತ್ತಾರೆ ಅವರು. ನುಗ್ಗೆ ಬೀಜಕ್ಕೂ ಬೇಡಿಕೆ: ನುಗ್ಗೆ ಕಾಯಿಯಂತೆ ನುಗ್ಗೆ ಬೀಜಕ್ಕೂ ಬೇಡಿಕೆ ಇದೆ.

ಹೀಗಾಗಿ ಬೀಜ ಮಾರಾಟದಿಂದಲೂ ಇವರು ಆದಾಯ ಗಳಿಸುತ್ತಿದ್ದಾರೆ. ಪ್ರತಿ ಒಂದು ಕೆಜಿ ಬೀಜ ಎರಡು ಸಾವಿರ ರೂ. ಆದಾಯ ತಂದು ಕೊಡುತ್ತಿದೆ. ನುಗ್ಗೆ ಬೆಳೆಗೆ ಹೆಚ್ಚಾಗಿ ಸಾವಯವ ಗೊಬ್ಬರವನ್ನೇ ಬಳಸುತ್ತೇವೆ. ಇದರಿಂದ ಇರುವಳಿ ಹೆಚ್ಚಾಗಿ ಬರುತ್ತದೆ. ಹೀಗಾಗಿ ಬೀಜ ಸಂರಕ್ಷಣೆ ಮಾಡಿ ಮಾರಾಟ ಮಾಡಲಾಗುತ್ತದೆ. ನಮ್ಮ ಹೊಲದ ಬೆಳೆಯನ್ನು ಸುತ್ತ-ಮುತ್ತಲಿನ ರೈತರಿಂದಲೇ ಬೀಜಕ್ಕೆ ಬಂದಿದೆ. ಒಂದು ಕೆಜಿಗೆ ಎರಡು ಸಾವಿರ ರೂ.ನಂತೆ ಐದು ಕೆಜಿ ಬೀಜ ಮಾರಲಾಗಿದೆ. ಇನ್ನು ಐದು ಕೆಜಿಯಷ್ಟು ಬೀಜಗಳು ಇವೆ ಎಂದು ರೈತ ವಿವರಿಸಿದರು.

ಟಾಪ್ ನ್ಯೂಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.